ಗೋಣಿಕೊಪ್ಪಲು ಬಳಿ ಹುಲಿ ದಾಳಿಗೆ ಮತ್ತೊಂದು ಬಲಿ; ವ್ಯಾಘ್ರ ಕಾರ್ಯಾಚರಣೆಗೆ ದಸರಾ ಆನೆ ಅಭಿಮನ್ಯು ನೇತೃತ್ವ!

ಮಡಿಕೇರಿ: ಕೊಡಗಿನಲ್ಲಿ ಹಾವಳಿ ಮಿತಿ ಮೀರುತ್ತಿದ್ದು, ಫೆ.20ರಂದು ಬಾಲಕನನ್ನು ಪಡೆದುಕೊಂಡಿದ್ದ ಹುಲಿ, ಫೆ.21ರಂದು ಮಹಿಳೆಯೋರ್ವಳನ್ನು ಬಲಿ ಪಡೆದಿದೆ. ಬಳಿ ಹುಲಿ ದಾಳಿಗೆ ಇಂದು ಮತ್ತೊಂದು ಜೀವಬಲಿಯಾಗಿದ್ದು, ಟಿ.ಶೆಟ್ಟಿಗೇರಿ ಗ್ರಾಮದ ಚಿಣ್ಣಿ(60) ಹುಲಿ ದಾಳಿಗೆ ಬಲಿಯಾದ ಕಾರ್ಮಿಕ ಮಹಿಳೆ. ನಿನ್ನೆ ರಾತ್ರಿ ಸಮೀಪದ ಕುಮಟೂರು ಗ್ರಾಮದ ಪಣೆಯರವರ ಅಯ್ಯಪ್ಪ ಎಂಬ 14 ವರ್ಷದ ಬಾಲಕ ಹುಲಿದಾಳಿಗೆ ಬಲಿಯಾಗಿದ್ದ. ಘಟನೆ ಹಿನ್ನಲೆಯಲ್ಲಿ ನರಹಂತಕ ಹುಲಿಗೆ ಗುಂಡಿಕ್ಕಲು ಗ್ರಾಮಸ್ಥರು ಆಗ್ರಹಿಸಿದ್ದು, ಪ್ರತಿಭಟನೆಗೆ ನಿರ್ಧರಿಸಿದ್ದಾರೆ. ಎರಡು ದಿನಗಳಲ್ಲಿ ಎರಡು ಜೀವಗಳನ್ನು ಬಲಿ ಪಡೆದುಕೊಂಡ ನರಹಂತಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಾಕಾನೆಗಳ ಮೂಲಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ನರಹಂತಕ ಹುಲಿಗೆ ಗುಂಡಿಕ್ಕಲು ಗ್ರಾಮಸ್ಥರ ಆಗ್ರಹ ವ್ಯಕ್ತಪಡಿಸಿದ್ದು, ಗ್ರಾಮಸ್ಥರಿಗೆ ಜಿಲ್ಲಾ ರೈತ ಸಂಘ ಬೆಂಬಲ ನೀಡಿದೆ. ನಿನ್ನೆ ಸಂಜೆ ಬಾಲಕನನ್ನ ಕೊಂದಿದ್ದ ಹುಲಿ ಇಂದು ಬೆಳಗ್ಗೆ ಮಹಿಳೆಯನ್ನ ಬಲಿ ಪಡೆದಿದೆ. ನರಹಂತಕನ ಸೆರೆಗೆ ಮುಂದಾದ ಅರಣ್ಯ ಇಲಾಖೆ ಎರಡು ಆನೆಗಳನ್ನು ಬಳಸಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ. ಹುಲಿ ಕಾರ್ಯಾಚರಣೆಗೆ ದಸರಾ ಆನೆ ಅಭಿಮನ್ಯು ನೇತೃತ್ವ ವಹಿಸಿದೆ. ಮತ್ತಿಗೋಡು ಶಿಬಿರದಿಂದ ಆನೆಗಳ ಆಗಮನವಾಗಿದ್ದು, ಟಿ ಶೆಟ್ಟಿಗೇರಿಗೆ ಆನೆಗಳು ಆಗಮಿಸಿವೆ.


from India & World News in Kannada | VK Polls https://ift.tt/2NiQsDa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...