ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ , ವೆಸ್ಟ್ಇಂಡೀಸ್ನ ಮಾಜಿ ಬ್ಯಾಟಿಂಗ್ ದಿಗ್ಗಜ ಸರ್ ಅವರನ್ನು ಸಂದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಪ್ರವಾಸದಲ್ಲಿರುವ ವಿರಾಟ್, ಆತಿಥೇಯ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ರಿಚರ್ಡ್ಸ್ ಜತೆ ಸ್ಮರಣೀಯ ಸಮಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವಿವ್ ತಮ್ಮ ಆಡುವ ಕಾಲಘಟ್ಟದಲ್ಲಿ ಎದುರಾಗಿದ್ದ ಸವಾಲು ಹಾಗೂ ಅವುಗಳನ್ನು ಹೇಗೆ ಮೆಟ್ಟಿ ನಿಂತಿದ್ದರು ಎಂಬುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಸದಾ ತಮಗೂ ವಿರಾಟ್ ಕೊಹ್ಲಿ ಜತೆಗೂ ಸಾಮತ್ಯೆಯಿದೆ ಎಂಬುದನ್ನು ಹೇಳುತ್ತಲೇ ಬಂದಿರುವ ರಿಚರ್ಡ್ಸ್, ಮಗದೊಮ್ಮೆ ಅದೇ ಮಾತನ್ನು ಪುನರುಚ್ಛಿಸಿದ್ದರು. ಅಲ್ಲದೆ ಎಂದಿಗೂ ಸೋಲನ್ನು ಒಪ್ಪಿಕೊಳ್ಳದ ಮನಸ್ಸಿನಿಂದಾಗಿ ಕ್ರೀಡಾ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದರು. ಅಂದಿನ ದಿನಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ಯಾವುದೇ ಗಾರ್ಡ್ಗಳಿರುತ್ತಿರಲಿಲ್ಲ. ಪಿಚ್ನಿಂದ ಪುಟಿದೇಳುವ ಚೆಂಡುಗಳು ಬೆಂಕಿ ಉಂಡೆಯಂತೆ ಬ್ಯಾಟ್ಸ್ಮನ್ಗಳನ್ನು ಅಪ್ಪಳಿಸುತ್ತಿದ್ದವು. ಆದರೆ ರಿಚರ್ಡ್ಸ್ ಮಾತ್ರ ಅವುಗಳನ್ನು ಲೆಕ್ಕಿಸದೆ ಹಾಯಾಗಿ ಬ್ಯಾಟ್ ಬೀಸುತ್ತಿದ್ದರು. ವೆಸ್ಟ್ಇಂಡೀಸ್ ಕ್ರಿಕೆಟ್ ಯಶಸ್ಸಿನಲ್ಲಿ ಅತಿ ಹೆಚ್ಚು ಪಾತ್ರ ವಹಿಸಿರುವ ರಿಚರ್ಡ್ಸ್ ಬೌಲರ್ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಹೆಲ್ಮೆಟ್ ಧರಿಸದೆಯೇ ಕ್ರೀಸಿಗಿಳಿಯುವ ವೇಳೆ ಇದ್ದ ಮನೋಸ್ಥಿತಿ ಬಗ್ಗೆ ಕೇಳಿದಾಗ, ನಾನೊಬ್ಬ ಪುರುಷ ಎಂಬುದರ ಮೇಲೆ ನಂಬಿಕೆಯನ್ನಿಟ್ಟಿದ್ದೆ. ಪ್ರತಿಯೊಂದು ಬಾರಿಯೂ ನನ್ನ ಸಾಮರ್ಥ್ಯದ ಮೇಲೆ ನಂಬಿಕೆಯನ್ನಿರಿಸುತ್ತಿದ್ದೆ ಎಂದು ಗಡುಸುತನದಿಂದ ಉತ್ತರಿಸಿದರು. ಚೆಂಡು ತಗುಲಿ ನೋವಾದರೂ ನಿಮ್ಮನ್ನು ನೀವೇ ಬೆಂಬಲಿಸಬೇಕು. ಹೆಲ್ಮೆಟ್ ಬಗ್ಗೆ ಹೇಳುವುದಾದರೆ ನಾನು ಧರಿಸಲು ಪ್ರಯತ್ನಿಸಿದ್ದೆ. ಆದರೆ ಅನಾನುಕೂಲತೆಯಿಂದ ತ್ಯಜಿಸಿದೆ. ಹಾಗಾಗಿ ನನ್ನ ಮರೂನ್ ಕ್ಯಾಪ್ ಧರಿಸಲು ಹೆಚ್ಚು ಹೆಮ್ಮೆಯಾಗುತ್ತಿತ್ತು ಎಂದು 67ರ ಹರೆಯದ ರಿಚರ್ಡ್ಸ್ ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ವಿರಾಟ್, ಈಗ ಚೆಂಡು ಬಡಿಯಲಿದೆ ಎಂಬ ಭಯಕ್ಕಿಂತಲೂ ಆರಂಭದಲ್ಲೇ ಚೆಂಡು ಬಡಿಯುವುದು ಉತ್ತಮ ಎಂದು ಭಾವಿಸುತ್ತೇನೆ. ಇದರಿಂದ ಆ ನೋವಿನಿಂದ ಮತ್ತಷ್ಟು ಪ್ರೇರಣೆ ಸಿಗಲಿದೆ ಎಂದರು. ಆದರೆ ಇವೆಲ್ಲವೂ ಕ್ರಿಕೆಟ್ನ ಭಾಗ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಹೇಗೆ ತಿರುಗೇಟು ನೀಡಲಿದ್ದೇವೆ ಎಂಬುದು ಮುಖ್ಯ ಎಂದು ರಿಚರ್ಡ್ಸ್ ಉತ್ತರಿಸಿದರು. 1974ರಿಂದ 1991ರ ಅವಧಿಯಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿರುವ ವಿವ್ ರಿಚರ್ಡ್ಸ್, 8540 ಟೆಸ್ಟ್ ಹಾಗೂ 6721 ಏಕದಿನ ರನ್ಗಳನ್ನು ಗಳಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Zpsn1e