ಹೊಸದಿಲ್ಲಿ: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ, ತನ್ನ ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ಹೊಸ ತಂತ್ರಕ್ಕೆ ಶರಣಾಗಿದೆ. ಅದು ಸಮುದ್ರದೊಳಗಿನ ಮಾರ್ಗ! ಸಮುದ್ರದ ಒಳಗಿನಿಂದ ಭಾರತದೊಳಗೆ ಸಾಗಿಬಂದು, ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ತನ್ನ ಭಯೋತ್ಪಾದಕರಿಗೆ ಸಂಘಟನೆ ತರಬೇತಿ ನೀಡುತ್ತಿದೆ. ಇಂಥಾದ್ದೊಂದು ಆಘಾತಕಾರಿ ಮಾಹಿತಿಯನ್ನು ಗುಪ್ತಚರ ದಳ ಸೇನೆಗೆ ರವಾನಿಸಿದೆ. ಹೀಗಾಗಿ, ಭಾರತದ ಸಾಗರತೀರದುದ್ದಕ್ಕೂ ಕಟ್ಟೆಚ್ಚರ ವಹಿಸಿದೆ. ಎಲ್ಲ ರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಂಡಿರೋದಾಗಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭಯೋತ್ಪಾದಕ ಚಟುವಟಿಕೆಗಳ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಆಗಿದೆ. ಉರಿ, ಪಠಾಣ್ ಕೋಟ್ ಹಾಗೂ ಪುಲ್ವಾಮಾಗಳಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಡೆದ ದಾಳಿಗಳನ್ನು ಹೊರತುಪಡಿಸಿದ್ರೆ, ಅದೃಷ್ಟವಶಾತ್ ನಾಗರಿಕರ ಮೇಲೆ ದೊಡ್ಡ ಪ್ರಮಾಣದ ದಾಳಿಗಳು ನಡೆದಿಲ್ಲ. ದೇಶದ ಗಡಿಯಲ್ಲಿ ಹಾಗೂ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ, ಭಾರತದೊಳಗೆ ನುಸುಳಲು ಹಾಗೂ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹೊಸ ಕುತಂತ್ರದ ಹಾದಿಗಳನ್ನು ಹುಡುಕುತ್ತಿದ್ದಾರೆ. ಇದರ ಭಾಗವಾಗಿಯೇ ಸಾಗರದಾಳದ ಮಾರ್ಗವನ್ನು ಉಗ್ರರು ಶೋಧಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗ್ತಿದೆ. ಉಗ್ರರ ಕುತಂತ್ರಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಕಲೆ ಹಾಕಿದ್ದ , ಈ ಹಿಂದೆ ಭಾರತದ ಗಡಿ ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/2HqzoVE