ಸಾಲು ಸಾಲಾಗಿ ದಿಗ್ಗಜರನ್ನು ಕಳೆದುಕೊಂಡು ಬಡವಾದ ಬಿಜೆಪಿ

ಹೊಸದಿಲ್ಲಿ: ಕಳೆದ ಎರಡು ವರ್ಷಗಳು ಬಿಜೆಪಿ ಪಾಲಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿ ಎರಡನೇ ಬಾರಿಗೆ ಅಧಿಕಾರ ಗದ್ದುಗೆ ಏರಿರುವ ಬಿಜೆಪಿಗೆ ತುಸು ಕಹಿ ಹೆಚ್ಚಾಗಿದೆ. ಏಕೆಂದರೆ ಕಳೆದ ಎರಡು ವರ್ಷದ ಅವಧಿಯಲ್ಲಿ ಬಿಜೆಪಿಯ ದಿಗ್ಗಜ ನಾಯಕರನ್ನು ಕಳೆದುಕೊಂಡು ಬಡವಾಗಿದೆ. ಬಿಜೆಪಿ ಐವರು ಪ್ರಮುಖ ದಿಗ್ಗಜರು ಸಾಲು ಸಾಲಾಗಿ ಇಹಲೋಹದ ಯಾತ್ರೆ ಮುಗಿಸಿದ್ದಾರೆ. ಈ ಐವರು ಕೂಡ ಬಿಜೆಪಿಯನ್ನು ಕಟ್ಟಿ ಬೆಳೆಸಿ ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರೆ. ಬಿಜೆಪಿಯ ಮುತ್ಸದ್ದಿ, ಅಜಾತಶತ್ರು ಅಟಲ್‌ ಬಿಹಾರಿ, ಕರ್ನಾಟಕದ ಹೆಮ್ಮೆಯ ನಾಯಕ ಅನಂತಕುಮಾರ್‌, ದಿಟ್ಟ ಹಾಗೂ ನಿಷ್ಠಾವಂತ ನಾಯಕ ಮನೋಹರ್‌ ಪರಿಕ್ಕರ್‌, ಪ್ರಮುಖ ಮಹಿಳಾ ರಾಜಕಾರಣಿ, ಪ್ರಖರ ವಾಗ್ಮಿ ಸುಷ್ಮಾ ಸ್ವರಾಜ್‌ ಹಾಗೂ ಈಗ ಚತುರ, ಚಾಣಾಕ್ಷ ರಾಜಕಾರಣಿ ಅರುಣ್‌ ಜೇಟ್ಲಿ. ದೇಶ ಕಂಡ ಅಪ್ರತಿಮ ರಾಜಕಾರಣ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ (93) ಕಳೆದ ಆಗಸ್ಟ್‌ 16, 2018ರಂದು ನಿಧನರಾದರು. 2018ರ ನವೆಂಬರ್ 12ರಂದು ಅನಂತಕುಮಾರ್‌ (59) ಕೊನೆಯುಸಿರೆಳೆದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ 1996ರಿಂದಲೂ ಆಯ್ಕೆಯಾಗಿದ್ದರು. ಈ ವರ್ಷದಲ್ಲಿ ಬಿಜೆಪಿ ಮೂವರು ನಾಯಕರನ್ನು ಕಳೆದುಕೊಂಡಿದೆ. ಮಾರ್ಚ್‌ 19, 2019ರಂದು ಬಿಜೆಪಿಯ ದಿಟ್ಟ ನಾಯಕ ಮನೋಹರ್‌ ಪರಿಕ್ಕರ್ ಇಹಲೋಕ ಪಯಣ ಮುಗಿಸಿದರು. ಅನಾರೋಗ್ಯ ಪೀಡಿತರಾಗಿಯೇ ಗೋವಾ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ, ಮೂಗಿಗೆ ಪೈಪ್‌ ಹಾಕಿಕೊಂಡೇ ಬಜೆಟ್‌ ಮಂಡಿಸಿ ಮನೋಹರ್‌ ಪರಿಕ್ಕರ್ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಇನ್ನು ಇಂದಿರಾಗಾಂಧಿ ನಂತರ ದೇಶದ ಅಪ್ರತಿಮ ಮಹಿಳಾ ರಾಜಕಾರಣಿ, ಪ್ರಖರ ವಾಗ್ಮಿ, ಅಟಲ್‌ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಸಂಪುಟದ ಪ್ರಮುಖ ಸಚಿವರಾಗಿದ್ದ ಸುಷ್ಮಾ ಸ್ವರಾಜ್‌ ನಿಧನರಾಗಿ ಇನ್ನೂ ಮೂರು ವಾರ ಕೂಡ ಆಗಿಲ್ಲ. ಆಗಸ್ಟ್‌ 6, 2019 ರಂದು ಸುಷ್ಮಾ ಸ್ವರಾಜ್‌ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಈಗ ಅರುಣ್‌ ಜೇಟ್ಲಿ ಕೂಡ ತಮ್ಮ ಜೈತ್ರಯಾತ್ರೆ ಮುಗಿಸಿದ್ದಾರೆ. ಈ ದಿಗ್ಗಜರ ನಿಧನದಿಂದ ಬಿಜೆಪಿ ಬಡವಾಗಿರುವುದಂತೂ ಸತ್ಯ!


from India & World News in Kannada | VK Polls https://ift.tt/30vou8z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...