ಇಂದ್ರಾಣಿ ಮುಖರ್ಜಿಯಾ ನೀಡಿದ್ದ ಈ ಹೇಳಿಕೆಯೇ ಚಿದಂಬರಂಗೆ ಮುಳುವಾಯಿತೆ?

ನವದೆಹಲಿ : ಕೇಂದ್ರದ ಮಾಜಿ ವಿತ್ತ ಸಚಿವ ಮತ್ತು ಕಾಂಗ್ರೆಸ್ ನ ಪ್ರಭಾವಿ ನಾಯಕ ಅವರ ಬಂಧನದಿಂದ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದೆ. ಅವರು ಭ್ರಷ್ಟಾಚಾರದಲ್ಲಿ ತೊಡಗದಿದ್ದರೂ ಚಿದಂಬರಂ ಅವರನ್ನು ಬಂಧಿಸಿ ಬಿಜೆಪಿ ಭಾರೀ ಪ್ರಮಾದ ಎಸಗಿದೆ, ಎಮರ್ಜೆನ್ಸಿ ಹೇರಿದಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕೆಂಡ ಕಾರುತ್ತಿದ್ದಾರೆ. ಆದರೆ, ಹಾವು ಬುಸುಗುಡುವ ಮುನ್ನವೇ ಹುತ್ತಕ್ಕೆ ಕೈಹಾಕಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಎಲ್ಲ ಸಾಕ್ಷ್ಯಾಧಾರಗಳನ್ನು ಕ್ರೋಢೀಕರಿಸಿ, ಅರೆಸ್ಟ್ ವಾರಂಟ್ ಅನ್ನು ಕೈಯಲ್ಲಿ ಹಿಡಿದುಕೊಂಡು, ಎಲ್ಲ ಸಿದ್ಧತೆ ಮಾಡಿಕೊಂಡೇ 73 ವರ್ಷದ ಹಿರಿಯ ನಾಯಕನನ್ನು, ಸಿನಿಮೀಯ ರೀತಿಯಲ್ಲಿ ರಾತ್ರೋರಾತ್ರಿ ಬಂಧಿಸಿ ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಿದೆ. ಅಷ್ಟಕ್ಕೂ 'ಚಿದಂಬರಂ ಅವರು ಯಾವ ತಪ್ಪು ಮಾಡೇ ಇಲ್ಲ, ಅವರು ಶುದ್ಧಹಸ್ತರು' ಎಂದು ಬೊಬ್ಬಿರಿಯುತ್ತಿರುವ ಕಾಂಗ್ರೆಸ್ ನಾಯಕರು ಬೆಚ್ಚಿಬೀಳುವಂತೆ, ಪಿ ಚಿದಂಬರಂ ಅವರ ಬಂಧನಕ್ಕೆ ದಾರಿ ಮಾಡಿಕೊಟ್ಟ ಸಂಗತಿ ಯಾವುದು ಗೊತ್ತಾ? ಅದು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಅಪ್ರೂವರ್ ಆಗಿರುವ, ಕಂಪನಿಯ ಮಾಲಕಿ ನೀಡಿರುವ ಹೇಳಿಕೆ. ಈ ಪ್ರಕರಣದಲ್ಲಿ ಅಪ್ರೂವರ್ ಆಗಿರುವ ಅವರು, 2006ರಲ್ಲಿ ನಡೆದ ಘಟನೆಯನ್ನು ಎಳೆಎಳೆಯಾಗಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳೆದಿರುವ ಬಿಡಿಸಿಟ್ಟಿರುವುದು ಪಿ ಚಿದಂಬರಂ ಅವರಿಗೆ ಮುಳುವಾಗಿದೆ. ಈ ಕಾರಣಕ್ಕಾಗಿಯೇ ದೆಹಲಿ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನನ್ನು ಚಿದಂಬರಂ ಅವರಿಗೆ ನೀಡಲು ನಿರಾಕರಿಸಿತ್ತು. ಇಂದ್ರಾಣಿ ಮುಖರ್ಜಿಯಾ ಹೇಳಿದ್ದೇನೆಂದರೆ... : ಪಿ ಚಿದಂಬರಂ ಅವರು 2006ರಲ್ಲಿ ಕೇಂದ್ರ ವಿತ್ತ ಮಂತ್ರಿಯಾಗಿದ್ದಾಗ, ನಾರ್ತ್ ಬ್ಲಾಕ್ ಕಚೇರಿಗೆ ಚಿದಂಬರಂ ಅವರನ್ನು ಭೇಟಿಯಾಗಲು ಬಂದಿದ್ದಾಗ, ತಮ್ಮ ಮಗ ಕಾರ್ತಿ ಚಿದಂಬರಂ ಅವರನ್ನು ಭೇಟಿಯಾಗಲು ಇಂದ್ರಾಣಿ ಮತ್ತು ಪೀಟರ್ ಅವರಿಗೆ ಚಿದಂಬರಂ ಹೇಳಿದ್ದರು ಮತ್ತು ಅವರ ಬಿಸಿನೆಸ್ಸಿಗೆ ಸಹಾಯ ಮಾಡಬೇಕೆಂದು ಇಬ್ಬರಿಗೂ ಚಿದಂಬರಂ ತಾಕೀತು ಮಾಡಿದ್ದರು. ಈ ಹೇಳಿಕೆಯನ್ನೇ ಚಿದಂಬರಂ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ತನಿಖಾಧಿಕಾರಿಗಳು ಮಾಡಿಕೊಂಡಿದ್ದಾರೆ. ಇದೇ ಚಿದಂಬರಂ ವಿರುದ್ಧ ಪ್ರಮುಖ ಸಾಕ್ಷಿಯಾಗುವುದರಲ್ಲಿ ಅನುಮಾನವೇ ಇಲ್ಲ. ಈ ಹೇಳಿಕೆಯನ್ನು ಅವರು 2018ರ ಫೆಬ್ರವರಿ 17ರಂದು ಸಿಬಿಐ ಮತ್ತು ಇಡಿ ಅಧಿಕಾರಿಗಳಿಗೆ ನೀಡಿದ್ದರು. ಅಂದು ಆಗಿದ್ದೇನೆಂದರೆ, ಐಎನ್ಎಕ್ಸ್ ಮೀಡಿಯಾ ವಿದೇಶಿ ಕಂಪನಿ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯನ್ನೂ ಮೀರಿ ಮಲೇಶಿಯಾದ ಕಂಪನಿಯಿಂದ 305 ಕೋಟಿ ರುಪಾಯಿಯಷ್ಟು ಬಂಡವಾಳ ಪಡೆದಿತ್ತು. ಅನುಮತಿ ಇದ್ದಿದ್ದು 4.62 ಕೋಟಿ ರುಪಾಯಿ ಶೇರು ವಿತರಿಸಲು ಮಾತ್ರ. ಈ ಅಕ್ರಮವನ್ನು ತನಿಖೆಗೊಡ್ಡಿದಾಗ, ತನಿಖೆ ತಪ್ಪಿಸುವ ಉದ್ದೇಶದಿಂದ ಇಂದ್ರಾಣಿ ಮತ್ತು ಪೀಟರ್ ಅವರು ಕಾರ್ತಿಯವರನ್ನು ಭೇಟಿ ಆಗಿದ್ದರು. ತನಿಖೆಯನ್ನು ತಪ್ಪಿಸುವ ಭರವಸೆ ನೀಡಿ, ಅಂದು ವಿತ್ತ ಸಚಿವರಾಗಿದ್ದ ಚಿದಂಬರಂ ಅವರ ಪ್ರಭಾವ ಬಳಸಿ, ಕಾರ್ತಿ ಚಿದಂಬರಂ ಅವರು 10 ಲಕ್ಷ ಡಾಲರ್ ಅನ್ನು ಲಂಚದ ರೂಪದಲ್ಲಿ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ ಹಯಾತ್ ಹೋಟೆಲ್ ನಲ್ಲಿ ಪಡೆದುಕೊಂಡಿದ್ದರು ಎಂಬುದು ಪ್ರಮುಖ ಆರೋಪ. ಈ ಆರೋಪದಡಿಯಲ್ಲಿ ಕಾರ್ತಿ ಅವರನ್ನು 2018ರ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯ ಚಿದಂಬರಂ ಅವರ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳುವ ಮೊದಲೇ ಕಾದುಕುಳಿತಿದ್ದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಶುಕ್ರವಾರ ಸುಪ್ರೀಂ ಕೋರ್ಟ್ ಮುಂದೆ ಮೇಲ್ಮನವಿ ವಿಚಾರಣೆಗೆ ಬರಲಿದೆ.


from India & World News in Kannada | VK Polls https://ift.tt/2L0E59r

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...