ಮುಂಬಯಿ: ನಿಮಗೆಲ್ಲರಿಗೂ ತಿಳಿದಿರುವಂತೆಯೇ 2013ನೇ ಇಸವಿಯಲ್ಲಿ ಅವರನ್ನು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಸಲು ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ನಿರ್ಧರಿಸಿದ್ದರು. ಅಲ್ಲಿಂದ ಬಳಿಕ ನಡೆದಿದ್ದು ಇದೀಗ ಇತಿಹಾಸ. ಏಕದಿನ ಕ್ರಿಕೆಟ್ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿರುವ ಏಕೈಕ ಆಟಗಾರನಾಗಿರುವ ಹಿಟ್ಮ್ಯಾನ್ ಖ್ಯಾತಿಯ ರೋಹಿತ್, ಸಾರ್ವಕಾಲಿಕ ಶ್ರೇಷ್ಠ ಓಪನರ್ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೊಂದೆಡೆ ಟೆಸ್ಟ್ ಕ್ರಿಕೆಟ್ನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ರೋಹಿತ್ ಶರ್ಮಾ ಅಂತದ್ದೇನು ಸಾಧನೆ ಮಾಡಿಲ್ಲ. ಅಲ್ಲದೆ ತಮ್ಮ ಸ್ಥಾನಕ್ಕಾಗಿ ಈಗಲೂ ಪೈಪೋಟಿ ನಡೆಸುತ್ತಿದ್ದಾರೆ. ಏತನ್ಮಧ್ಯೆ ಟೆಸ್ಟ್ ಕ್ರಿಕೆಟ್ನಲ್ಲೂ ರೋಹಿತ್ಗೆ ಆರಂಭಿಕನ ಸ್ಥಾನ ನೀಡಲು ಮಾಜಿ ನಾಯಕ ಮಹತ್ವದ ಸಲಹೆ ಮಾಡಿದ್ದಾರೆ. ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 22 (ಇಂದು) ಆರಂಭವಾಗುತ್ತಿದೆ. ಇನ್ನೊಂದೆಡೆ ಭಾರತ ಕೂಡಾ ಓಪನರ್ಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯ ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಹಾಗೂ ಹನುಮ ವಿಹಾರಿ ಕಣದಲ್ಲಿದ್ದಾರೆ. ಇತ್ತೀಚೆಗಷ್ಟೇ ಅಂತ್ಯಗೊಂಡ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೀಗ ರೋಹಿತ್ಗೆ ಟೆಸ್ಟ್ನಲ್ಲೂ ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂಬುದು ನನ್ನ ಸಲಹೆಯಾಗಿದೆ. ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಅವರನ್ನು ನೆಚ್ಚಿಕೊಳ್ಳಬಹುದಾಗಿದೆ ಎಂದು ಗಂಗೂಲಿ ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2L1L2Hh