ಹೊಸದಿಲ್ಲಿ: ಹಳೆಯ ಕಾರುಗಳನ್ನೇ ಯಾರೂ ಓಡಿಸದಿರುವಾಗ ನಾವೇಕೆ 44 ವರ್ಷ ಹಳೆಯ ಯುದ್ಧ ವಿಮಾನಗಳನ್ನು ಬಳಸಬೇಕು ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಪ್ರಶ್ನಿಸಿದ್ದಾರೆ. ಭಾರತೀಯ ವಾಯುಪಡೆಯ ಸ್ವಾವಲಂಬನೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ರಕ್ಷಣಾ ಸಚಿವ ಅವರ ಸಮ್ಮುಖದಲ್ಲೇ 1973-74ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಮಿಗ್-21 ಯುದ್ಧ ವಿಮಾನದ ಕುರಿತು ಪ್ರಸ್ತಾಪಿಸಿದರು. 'ಯುದ್ಧ ಇಲ್ಲ ಎಂದಾದ ಮೇಲೆ ನಾವು ತಡಮಾಡದೇ ಸ್ವದೇಶಿ ತಂತ್ರಜ್ಞಾನದೊಂದಿಗೆ ನಮ್ಮಲ್ಲಿರುವ ಯುದ್ಧ ವಿಮಾನಗಳ ಆಧುನೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಿಗ್-21ನಂತಹ ಹಳೆಯ ವಿಮಾನಗಳ ಬದಲಿಗೆ ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆ ಮಾಡಬೇಕು' ಎಂದು ಸಲಹೆ ನೀಡಿದರು. ರಕ್ಷಣಾ ವ್ಯವಸ್ಥೆ ಸುಧಾರಣೆಗೆ ಮುಂದಾದ ಕೇಂದ್ರ ಸೇನೆಯ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದೊಂದಿಗೆ ಹಲವು ಸುಧಾರಣಾ ಪ್ರಸ್ತಾವಗಳಿಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ. ಭೂ ಸೇನಾ ಕೇಂದ್ರ ಕಚೇರಿಯಲ್ಲಿರುವ 200ಕ್ಕೂ ಹೆಚ್ಚು ಅಧಿಕಾರಿಗಳನ್ನು ಯುದ್ಧ ಸನ್ನದ್ಧ ಕಾರ್ಯಕ್ಷೇತ್ರಗಳಿಗೆ (ಫೀಲ್ಡ್ ಏರಿಯಾಸ್) ನಿಯೋಜಿಸುವ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರ ದೂರುಗಳ ತನಿಖೆಗೆ ಎರಡು ಪ್ರತ್ಯೇಕ ವಿಚಕ್ಷಣಾ ಘಟಕಗಳನ್ನು ಸ್ಥಾಪಪಿಸುವುದು ಸೇರಿ ಪ್ರಮುಖ ಸುಧರಣಾ ಪ್ರಸ್ತಾವಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಸಹಿ ಹಾಕಿದ್ದಾರೆ. ದಿಲ್ಲಿಯಲ್ಲಿರುವ ಭೂಸೇನಾ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಮೇಜರ್ ಜನರಲ್ಗಳು, ಎಂಟು ಬ್ರಿಗೇಡಿಯರ್ಗಳು, ಒಂಬತ್ತು ಕರ್ನಲ್ಗಳು ಮತ್ತು 186 ಲೆಫ್ಟಿನೆಂಟ್ ಕರ್ನಲ್/ಮೇಜರ್ ಶ್ರೇಣಿಯ ಅಧಿಕಾರಿಗಳನ್ನು ಯುದ್ಧ ಸನ್ನದ್ಧ ಕಾರ್ಯಕ್ಷೇತ್ರಗಳಿಗೆ ನಿಯೋಜಿಸುವುದು ಪ್ರಸ್ತಾವನೆಯ ಒಂದು ಭಾಗವಾಗಿದೆ. ಎರಡು ಪ್ರತ್ಯೇಕ ವಿಚಕ್ಷಣಾ ಘಟಕ: ಭೂಸೇನೆ, ವಾಯುಪಡೆ, ನೌಕಾಪಡೆಯಿಂದ ತಲಾ ಒಬ್ಬ ಕರ್ನಲ್ ಶ್ರೇಣಿಯ ಅಧಿಕಾರಿಗಳ ಪ್ರಾತಿನಿಧ್ಯದೊಂದಿಗೆ 'ಚೀಫ್ ಆಫ್ ದಿ ಆರ್ಮಿ ಸ್ಟಾಫ್' ನೇತೃತ್ವದಲ್ಲಿ ಪ್ರತ್ಯೇಕ ವಿಚಕ್ಷಣಾ ಘಟಕ ಸ್ಥಾಪಿಸುವುದು ಎರಡನೇ ಸುಧಾರಣೆಯಾಗಿದೆ. ಇದಕ್ಕೂ ಮೊದಲು ವಿವಿಧ ತನಿಖಾ ಏಜೆನ್ಸಿಗಳ ಮೂಲಕ ವಿಚಕ್ಷಣಾ ದಳ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ತನಿಖೆ ನಡೆಸಲು ಎಡಿಜಿ (ಮೇಜರ್ ಜನರಲ್ ಶ್ರೇಣಿಯ ಅಧಿಕಾರಿ) ನೇತೃತ್ವದ ಘಟಕವು ವೈಸ್ ಚೀಫ್ ಆಫ್ ದಿ ಆರ್ಮಿ ಸ್ಟಾಫ್ (ವಿಸಿಒಎಎಸ್) ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಲ್ಲಿ ನೋಡಲ್ ಏಜೆನ್ಸಿಯಾಗಿರುತ್ತದೆ.
from India & World News in Kannada | VK Polls https://ift.tt/30pAg3Z