ಹೊಸದಿಲ್ಲಿ: ಅಸಂಖ್ಯಾತರ ಕಣ್ಣೀರಿನ ನಡುವೆ ಬಿಜೆಪಿಯ ಧೀಮಂತ ನಾಯಕ, ಜಿಎಸ್ಟಿ ರೂವಾರಿ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಬಿಜೆಪಿ ಪ್ರಧಾನ ಕಚೇರಿಯಿಂದ ಪುಷ್ಪಾಲಂಕೃತ ವಾಹನದಲ್ಲಿ ನಿಗಮ್ಬೋಧ್ ಘಾಟ್ನತ್ತ ಪುಷ್ಪಾಲಂಕೃತ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು 'ಜೇಟ್ಲಿ ಅಮರ್ ರಹೇ', ' ಜಬ್ ತಕ್ ಸೂರಜ್ ಚಾಂದ್ ರಹೇಗಾ, ಜೇಟ್ಲಿ ತೇರಾ, ನಮ್ ರಹೇಗಾ' ( ಸೂರ್ಯ ಚಂದ್ರರಿರುವವರೆಗೆ ನಿಮ್ಮ ಹೆಸರು ಅಜರಾಮರವಾಗಿರಲಿದೆ), ಎಂದು ಘೋಷಣೆ ಕೂಗುತ್ತಿದ್ದಾರೆ. ಅನಾರೋಗ್ಯದಿಂದಾಗಿ ಶನಿವಾರ ಮಧ್ಯಾಹ್ನ ಸಾವನ್ನಪ್ಪಿದ ಅವರ ಅಂತ್ಯಕ್ರಿಯೆ ಇನ್ನು ಕೆಲವೇ ಹೊತ್ತಿನಲ್ಲಿ ನಡೆಯಲಿದೆ.
from India & World News in Kannada | VK Polls https://ift.tt/2KSvnuY