ಆ್ಯಂಟಿಗುವಾ: ಆತಿಥೇಯ ವೆಸ್ಟ್ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಮೊದಲ ದಿನದಂತ್ಯಕ್ಕೆ 68.5 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ. ಮೊದಲ ದಿನದಲ್ಲಿ ಮಳೆಯಿಂದಾಗಿ ಪಂದ್ಯವನ್ನು ಬೇಗನೇ ಮುಕ್ತಾಯಗೊಳಿಸಲಾಯಿತು. ಇನ್ನೊಂದೆಡೆ (81) ಹಾಗೂ (44) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಟಾಸ್ ಗೆದ್ದ ವೆಸ್ಟ್ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿದ್ದರು. ನಾಯಕನ ಆಯ್ಕೆ ಸರಿಯೆಂದು ಸಾಬೀತು ಮಾಡಿದ ಕೆಮರ್ ರೂಚ್ ಇನ್ನಿಂಗ್ಸ್ನ ಐದನೇ ಓವರ್ನಲ್ಲೇ ಮಯಾಂಕ್ ಅಗರ್ವಾಲ್ (5) ಹಾಗೂ ಚೇತೇಶ್ವರ ಪೂಜಾರ (2) ಹೊರದಬ್ಬುವ ಮೂಲಕ ಡಬಲ್ ಆಘಾತ ನೀಡಿದರು. ಕೆಎಲ್ ರಾಹುಲ್ ಜತೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅವರ ಮೇಲೆ ಅತೀವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಹೊಸ ಚೆಂಡಿನ ದಾಳಿಯನ್ನು ಎದುರಿಸುವಲ್ಲಿ ವಿಫಲವಾಗಿದ್ದಾರೆ. ಇನ್ನೊಂದೆಡೆ ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಪೂಜಾರಗೆ ಅದೇ ಪ್ರದರ್ಶನ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಅತ್ತ ನಾಯಕ ಸಹ ಪೆವಿಲಿಯನ್ ಸೇರುವುದರೊಂದಿಗೆ 7.5 ಓವರ್ಗಳಲ್ಲೇ 25 ರನ್ನಿಗೆ ಮೂರು ವಿಕೆಟುಗಳನ್ನು ಕಳೆದುಕೊಂಡ ಭಾರತ ತೀವ್ರ ಸಂಕಷ್ಟಕ್ಕೊಳಗಾಯಿತು. 12 ಎಸೆತಗಳನ್ನು ಎದುರಿಸಿದ ಕೊಹ್ಲಿ ಎರಡು ಬೌಂಡರಿಗಳಿಂದ 9 ರನ್ ಗಳಿಸಿದರು. ಕೊಹ್ಲಿ ಹೊರಗಟ್ಟಿದ ಶನಾನ್ ಗೇಬ್ರಿಯಲ್ ಮಿಂಚಿನ ದಾಳಿ ಸಂಘಟಿಸಿದರು. ತದಾ ಬಳಿಕ ಜತೆಗೂಡಿದ ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದರು. ಪ್ರಥಮ ದಿನದ ಊಟದ ವಿರಾಮದ ಹೊತ್ತಿಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತ್ತು. ರಾಹುಲ್ ಹಾಗೂ ರಹಾನೆ ನಾಲ್ಕನೇ ವಿಕೆಟ್ಗೆ 68 ರನ್ಗಳ ಜತೆಯಾಟದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ 44 ರನ್ ಗಳಿಸಿದ ರಾಹುಲ್ ವಿಕೆ್ಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಬಳಿಕ ಹನುಮ ವಿಹಾರಿ ಜತೆ ಸೇರಿದ ರಹಾನೆ ಇನ್ನಿಂಗ್ಸ್ ಬೆಳೆಸಿದರು. ಅಲ್ಲದೆ ವಿಹಾರಿ ಜತೆಗೆ 82 ರನ್ಗಳ ಅಮೂಲ್ಯ ಜತೆಯಾಟದಲ್ಲಿ ಭಾಗಿಯಾದರು. ಈ ನಡುವೆ 32 ರನ್ ಗಳಿಸಿದ ವಿಹಾರಿ ವಿಕೆಟ್ ಕೂಡಾ ನಷ್ಟವಾಯಿತು. ಇದರೊಂದಿಗೆ 175 ರನ್ ಗಳಿಸುವುದರೆಡೆಗೆ ಅರ್ಧ ತಂಡವು ಪೆವಿಲಿಯನ್ ಸೇರಿಕೊಂಡಿತು. ಅತ್ತ ಶತಕದತ್ತ ಮುನ್ನುಗ್ಗುತ್ತಿದ್ದ ರಹಾನೆಗೆ ಗೇಬ್ರಿಯಲ್ ಬ್ರೇಕ್ ಹಾಕಿದರು. ಇದರಿಂದಾಗಿ ಭಾರತ ಹಿನ್ನಡೆ ಅನುಭವಿಸಿತು. 163 ಎಸೆತಗಳನ್ನು ಎದುರಿಸಿದ ರಹಾನೆ 10 ಬೌಂಡರಿಗಳಿಂದ 81 ರನ್ ಗಳಿಸಿದರು. ಭಾರತವು ಆರು ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದ್ದ ಸಂದರ್ಭದಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿತು. ಅಂತಿಮವಾಗಿ ದಿನದಾಟವನ್ನು ಕೊನೆಗೊಳಿಸಲಾಯಿತು. ಈ ಸಂದರ್ಭದಲ್ಲಿ ರಿಷಬ್ ಪಂತ್ (20*) ಹಾಗೂ ರವೀಂದ್ರ ಜಡೇಜಾ (3*) ಕ್ರೀಸಿನಲ್ಲಿದ್ದರು. ವಿಂಡೀಸ್ ಪರ ಕೆಮರ್ ರೂಚ್ ಮೂರು ಹಾಗೂ ಶನಾನ್ ಗೇಬ್ರಿಯಲ್ ಎರಡು ವಿಕೆಟ್ ಕಿತ್ತು ಮಿಂಚಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2L16oVe