ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಮನೆಯಲ್ಲಿ ನಡೆದ ಸಿನಿಮೀಯ ರೀತಿಯ ಚೇಸಿಂಗ್ ಮತ್ತು ಕ್ಯಾಚಿಂಗ್ ಭಾರಿ ಕುತೂಹಲ ಮೂಡಿಸಿತ್ತು. ಐಎನ್ಎಕ್ಸ್ ಮೀಡಿಯಾ ಹೌಸ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿಯಲ್ಲಿದ್ದ ಪಿ ಚಿದಂಬರಂ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದರು. ಸಿಬಿಐ ಅಧಿಕಾರಿಗಳು ದಾಳಿ ಮಾಡಲು ಆಗಮಿಸುತ್ತಿದ್ದಾರೆ ಎಂದು ಅರಿ ಕೂಡಲೇ ಅಲ್ಲಿಂದ ಪರಾರಿಯಾಗಿ ತಮ್ಮ ನಿವಾಸ ಸೇರಿಕೊಂಡರು. ಅಲ್ಲಿಗೂ ಲಗ್ಗೆ ಸಿಬಿಐ ಅಧಿಕಾರಿಗಳಿಗೆ ಸ್ವಾಗತ ಮಾಡಿದ್ದು ಮುಚ್ಚಿದ ಬಾಗಿಲುಗಳು. ಆದರೆ ಇಂಥ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಸಿಬಿಐ ತಂಡ ಇಡೀ ಮನೆಯನ್ನು ಸುತ್ತುವರಿದಿತ್ತು. ಈ ಸಂದರ್ಭದಲ್ಲಿ ಚಿದಂಬರಂ ಮನೆಯ ಬೃಹತ್ ಕಾಂಪೌಂಡ್ ಹತ್ತಿದ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಸಿಬಿಐ ಆಧಿಕಾರಿ ಆರ್. ಪಾರ್ಥಸಾರಥಿ ಕಾಂಪೌಂಡ್ ಹತ್ತಿದರು. ನಂತರ ಗೋಡೆ ಹಾರಿದರು. ಅಷ್ಟರಲ್ಲಾಗಲೇ ಬಾಗಿಲು ಕೂಡ ತೆಗೆದರು ಭದ್ರತಾ ಪಡೆಗಳು. ಪಾರ್ಥಸಾರಥಿ ನೇತೃತ್ವದ ತಂಡ ಹಾಗೂ ಮತ್ತೊಂದು ತಂಡ ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಚಿದಂಬರಂ ಅವರನ್ನು ವಶಕ್ಕೆ ಪಡೆದು ಸಿಬಿಐ ಕಚೇರಿಗೆ ಕೊಂಡೊಯ್ದುರು. ಡೆಪ್ಯುಟಿ ಸೂಪರಿಟೆಂಡೆಂಟ್ ಆಗಿರುವ ಪಾರ್ಥಸಾರಥಿ ಅವರು ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಪಾರ್ಥಸಾರಥಿ ಜತೆಗೆ ಕರ್ತವ್ಯ ನಿರ್ವಹಿಸಿರುವ ಹಲವಾರು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾರ್ಥಸಾರಥಿ ದಕ್ಷ ಹಾಗೂ ಸಮರ್ಥ ಅಧಿಕಾರಿ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೆಲವು ನಿವೃತ್ತ ಅಧಿಕಾರಿಗಳು ತಿಳಿಸಿದ್ದಾರೆ.
from India & World News in Kannada | VK Polls https://ift.tt/2HiY9CM