ಹೊಸದಿಲ್ಲಿ: ನದಿಯ ಸ್ವಚ್ಛತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಠಿಣ ನಿಲುವು ತಳೆದಿದೆ. ನದಿಯನ್ನು ಸ್ವಚ್ಛಗೊಳಿಸಲು ಎಷ್ಟು ಸಮಯ ಬೇಕು ಎಂದು ಕೇಳಿರುವ ನ್ಯಾಯಮಂಡಳಿ, ಡೆಡ್ ಲೈನ್ ನಿಗದಿ ಮಾಡುವಂತೆ ತಾಕೀತು ಮಾಡಿದೆ. ವಿಪರ್ಯಾಸವೆಂದರೆ ಕಳೆದ 30 ವರ್ಷಗಳಿಂದ ಯಮುನೆಯ ಸ್ವಚ್ಛತೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಗತಿ ಆಗಿಲ್ಲ. ಜೊತೆಯಲ್ಲೇ ನದಿಯ ಮಾಲಿನ್ಯ ದಿನೇ ದಿನೇ ಮಿತಿ ಮೀರುತ್ತಲೇ ಇದೆ. ಯಮುನೆಯ ಸ್ವಚ್ಛತೆಗೆ ಇದೀಗ ನೂತನ ಡೆಡ್ ಲೈನ್ ಹಾಕಿಕೊಳ್ಳಲು ನ್ಯಾಯಮಂಡಳಿ ನಿರ್ಧರಿಸಿದೆ. ಈ ಡೆಡ್ ಲೈನ್ ಮೀರಿದರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಎನ್ ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್ ಅವರ ನೇತೃತ್ವದ ನ್ಯಾಯಪೀಠ ಖಡಕ್ ಸೂಚನೆ ನೀಡಿದೆ. 'ಯಮುನೆಯ ಮಾಲಿನ್ಯವನ್ನು ನಿಯಂತ್ರಿಸಲೇಬೇಕು. ಇಲ್ಲವಾದ್ರೆ ಪ್ರಕೃತಿ ಮೇಲೆ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತೆ. ಯಮುನೆಯ ನೀರು ನದಿ ಸೇರೋದ್ರಿಂದ ಗಂಗಾ ನದಿಯ ಮಾಲಿನ್ಯದ ಪ್ರಮಾಣವೂ ಹೆಚ್ಚಳವಾಗುತ್ತೆ' ಎಂದು ನ್ಯಾಯಮಂಡಳಿ ಕಳವಳ ವ್ಯಕ್ತಪಡಿಸಿದೆ. ವಿಚಾರಣೆ ವೇಳೆ ದಿಲ್ಲಿ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಹಾಜರಿದ್ದರು. ಈ ವೇಳೆ ಯಮುನೆ ಸ್ವಚ್ಛತೆಗಾಗಿ ನೂತನ ದಿನಾಂಕ ನಿಗದಿ ಮಾಡುವ ಜೊತೆಗೆ ಸದರಿ ಡೆಡ್ ಲೈನ್ ಪಾಲನೆ ಮಾಡೋದಾಗಿ ಭರವಸೆ ನೀಡಿದ್ದಾರೆ.
from India & World News in Kannada | VK Polls https://ift.tt/2HnwMHK