ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕುರಿತ ಪಾಕ್ ಸಚಿವನ ಹೇಳಿಕೆ ಚುನಾವಣಾ ಪ್ರಚಾರದ ವಿಷಯವಾಗಿ ಮುನ್ನೆಲೆಗೆ ಬಂದಿದೆ. ಪಾಟ್ನಾದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ , ಪುಲ್ವಾಮಾ ದಾಳಿಯನ್ನು ವಿಪಕ್ಷಗಳು ಪ್ರಧಾನಿ ಮೋದಿ ಅವರ 'ಸಹಾನುಭೂತಿ ಪಿತೂರಿ' ಎಂದು ಕರೆದಿದ್ದವು ಎಂದು ಕಿಡಿಕಾರಿದರು. 2019ರಲ್ಲಿ ಪುಲ್ವಾಮಾ ದಾಳಿ ನಡೆದಾಗ ನಾನು ಕೇಂದ್ರ ಗೃಹ ಸಚಿವನಾಗಿದ್ದೆ. ಇಡೀ ದೇಶ ಒಕ್ಕೊರಲಿನಿಂದ ಪುಲ್ವಾಮಾ ದಾಳಿಯನ್ನು ಖಂಡಿಸಿತ್ತು. ಆದರೆ ವಿಪಕ್ಷಗಳು ಇದನ್ನು ಮೋದಿ ಅವರ ಸಹಾನುಭೂತಿ ಪಿತೂರಿ ಎಂದು ಕರೆದು ಹುತಾತ್ಮರನ್ನು ಅವಮಾನಿಸಿದ್ದವು ಎಂದು ರಾಜನಾಥ್ ಸಿಂಗ್ ಹರರಿಹಾಯ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪುಲ್ವಾಮಾ ದಾಳಿಯನ್ನು ಸಹಾನುಭೂತಿ ಮತಗಳನ್ನಾಗಿ ಪರಿವರ್ತಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿದ್ದವು. ಇದೀಗ ಪಾಕ್ ಖುದ್ದಾಗಿ ಪುಲ್ವಾಮಾ ದಾಳಿಯ ಹೊಣೆ ಹೊತ್ತಿದ್ದು, ಈಗಲಾದರೂ ವಿಪಕ್ಷಗಳು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ರಾಜನಾಥ್ ಆಗ್ರಹಿಸಿದರು. ಪಾಕಿಸ್ತಾನ ಉಗ್ರರ ಜಾಗತಿಕ ತವರೂರಾಗಿದ್ದು, ತನ್ನ ನೆಲದಲ್ಲಿ ಭಾರತ ವಿರೋಧಿ ಕಾರ್ಯಾಚರಣೆಗಳಿಗೆ ಬೆಂಬಲ ನೀಡುತ್ತಿದೆ. ಭಾರತದ ಈ ವಾದಕ್ಕೆ ಇದೀಗ ಜಾಗತಿಕ ಮನ್ನಣೆ ದೊರೆತಿರುವುದು ಪ್ರಧಾನಿ ಮೋದಿ ಅವರ ಆಡಳಿತ ವೈಖರಿಗೆ ಸಾಕ್ಷಿ ಎಂದು ರಾಜನಾಥ್ ಹೇಳಿದರು. ಪುಲ್ವಾಮಾ ದಾಳಿಯ ಯೋಜನೆ ಪಾಕಿಸ್ತಾನದಲ್ಲೇ ಸಿದ್ಧವಾಗಿತ್ತು. ಹೀಗಾಗಿ ಪುಲ್ವಾಮಾ ದಾಳಿಯ ಕೀರ್ತಿ ಇಮ್ರಾನ್ ಖಾನ್ ಸರ್ಕಾರಕ್ಕೆ ನೀಡಬೇಕು ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ, ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
from India & World News in Kannada | VK Polls https://ift.tt/35Nw2Hu