ಎಂ.ಪ್ರಶಾಂತ್ ಬೆಂಗಳೂರು ಗ್ರಾಮಾಂತರ ಬೆಂಗಳೂರು ಗ್ರಾಮಾಂತರ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತಮಿಳುನಾಡು ಗಡಿ ಭಾಗದ ಜಿಲ್ಲೆಗಳ ಮೇಲೆ ಕುಳಿರ್ಗಾಳಿ, ಜಿಟಿ ಜಿಟಿ ಮಳೆ ಮುಂದುವರಿದಿದ್ದು, ಆನೇಕಲ್ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೇಲೂ ಇದರ ಪ್ರಭಾವ ಬೀರಿದೆ. ಗುರುವಾರ ಇಡೀ ದಿನ ಮೋಡ ಕವಿದ ವಾತಾವರಣದೊಂದಿಗೆ ನಿರಂತರ ಮಳೆ ಹನಿದಿದೆ. ಗುರುವಾರ ಬೆಳಗಿನ ಜಾವ ಶುರುವಾದ ಮಳೆ ಅಗಾಗ ತುಸು ಬಿಡುವು ಕೊಟ್ಟು ತುಂತುರು ಮಳೆ ಕಾಟ ಜನಜೀವನ ಅಸ್ತವ್ಯಸ್ತಗೊಳಿಸಿದೆ. ನಿವಾರ್ ಚಂಡಮಾರುತ ಗುರುವಾರ ಬೆಳಗಿನ ಜಾವ 2-3 ಗಂಟೆಯ ನಂತರ ಸುಮಾರು 145 ಕಿ.ಮೀ ವೇಗದಲ್ಲಿ ತಮಿಳುನಾಡಿನ ಮಾಮಲಪುರಂ ಹಾಗೂ ಕಾರೈಕಲ್ ನಡುವೆ ಅಪ್ಪಳಿಸಿದ್ದು, ಇದರ ಪ್ರಭಾವ ಜಿಲ್ಲೆಯಲ್ಲಿ ಬೆಳಗಿನ ಜಾವದಿಂದಲೇ ಶುರುವಾಗಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಜನರಿಗೆ ಸೂರ್ಯದರ್ಶನವಾಗಲೇ ಇಲ್ಲ. ತಮಿಳುನಾಡು, ಪುದುಚೇರಿಯಲ್ಲಿ ಇದರ ಪ್ರಭಾವ ತೀಕ್ಷ್ಣವಾಗಿದ್ದು, ಅಲ್ಲಿ ಬಿರುಗಾಳಿ ಹೆಚ್ಚಿದ್ದರೇ ಜಿಲ್ಲೆಯಲ್ಲಿ ಸಣ್ಣಗಾಳಿ ಬೀಸಿದ್ದು, ಚಳಿಯ ಅನುಭವ ಹೆಚ್ಚಿದೆ. ಪರಿಣಾಮ ಜನ ಬೆಳಗ್ಗೆಯಿಂದಲೇ ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ವ್ಯಾಪಾರ ವಹಿವಾಟು ಡಲ್ಲು ಚಳಿ ಮಳೆಗೆ ಮನೆಯಿಂದ ಹೊರ ಬರದ ಕಾರಣ ವ್ಯಾಪಾರ ವಹಿವಾಟು ಮೇಲೂ ಸೈಕ್ಲೋನ್ ಎಫೆಕ್ಟ್ ನೀಡಿದೆ. ಸಾಕಷ್ಟು ಮಂದಿ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಮನೆಯಲ್ಲಿಯೇ ಉಳಿದುಕೊಂಡರು. ಇನ್ನೂ ಕೆಲವಡೆ ಅಂಗಡಿಗಳನ್ನು ತೆರೆದರೂ ಜನರಿಲ್ಲದೆ ಬಿಕೋ ಎನ್ನುವಂತ ವಾತಾವರಣ ಕಂಡು ಬಂತು. ಸಾರಿಗೆ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹೋಟೆಲ್ ಉದ್ಯಮ, ಸಣ್ಣಪುಟ್ಟ ಅಂಗಡಿಗಳನ್ನು ಹೊಂದಿರುವ ವ್ಯಾಪಾರಸ್ಥರ ವಹಿವಾಟಿನ ಮೇಲೆ ಗಂಭೀರವಾದ ಪ್ರಭಾವ ಬೀರಿದೆ. ರಾಗಿ ಬೆಳೆ ನಷ್ಟಸೈಕ್ಲೋನ್ ರಾಗಿ ಬೆಳೆಗಾರರ ಪಾಲಿಗೆ ದುಸ್ವಪ್ನವಾಗಿ ಪರಿಣಮಿಸಿದ್ದು, ಕೊಯ್ಲು ಮಾಡಿ ತೋಟದಲ್ಲಿ ಹಾಗೇ ಬಿಟ್ಟಿರುವ ರಾಗಿ ತೆನೆಗಳಿಗೆ ನಿರಂತರ ಮಳೆಯ ತೇವಾಂಶ ರಾಗಿ ಕಾಳಿನಲ್ಲಿ ಮೊಳಕೆ ಒಡೆಯಲು ಕಾರಣವಾಗಿದ್ದು, ಸಂಪೂರ್ಣ ನಾಶದತ್ತ ಸಾಗಿದೆ. ಕಾರ್ಮಿಕರು ಕೊರತೆ ಇತ್ಯಾದಿ ಕಾರಣಗಳಿಂದ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ರೈತರು ರಾಗಿ ಬೆಳೆ ಕಟಾವು ಮಾಡಿಲ್ಲ. ಕೆಲವರು ಕಟಾವು ಮಾಡಿದರೂ ತೋಟಗಳಲ್ಲಿ ಹಾಗೇ ಬಿಟ್ಟಿದ್ದು ಇವೆಲ್ಲವನ್ನೂ ಮಳೆ ಆಹುತಿ ಪಡೆದುಕೊಂಡಿದೆ. ಗಡಿ ಭಾಗದ ಆನೇಕಲ್ ತಾಲೂಕಿನಲ್ಲಿ ಇದರ ಪ್ರಭಾವ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಜಿಲ್ಲೆಯ ಇತರೆ ತಾಲೂಕಗಳಲ್ಲಿನ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಶನಿವಾರದವರಿಗೂ ಪ್ರಭಾವ ಸೈಕ್ಲೋನ್ ಚಂಡಮಾರುತದ ಪ್ರಭಾವ ಶನಿವಾರದವರಿಗೂ ಇರಬಹುದು ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಮಳೆಯ ಪ್ರಮಾಣ ಜೋರಿಲ್ಲದಿದ್ದರೂ ಜಿಟಿಜಿಟಿಯಾಗಿ ನಿರಂತರವಾಗಿ ಸುರಿಯುವ ಸಾಧ್ಯತೆಯಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಇನ್ನೆರಡು ದಿನ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಮಳೆಯೊಂದಿಗೆ ಚಳಿ,ಗಾಳಿ ಇರಲಿದ್ದು ದಿನ ಕಳೆದಂತೆ ಇದರ ಪ್ರಭಾವ ಕಡಿಮೆಯಾಗಲಿದೆ. ಕೆಎಸ್ಎನ್ಡಿಎಂಸಿ ವರಣ ಮಿತ್ರ ಮಾಹಿತಿ
from India & World News in Kannada | VK Polls https://ift.tt/3fLKogc