ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಎಸ್‌ವೈ ಆಪ್ತರ ವಿರೋಧಕ್ಕೆ ಕಾರಣ ಏನು?

ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಸಚಿವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ ನಾನಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ತ್ರಾಸ ಪಟ್ಟು ಪರಿಷತ್ ಸ್ಥಾನ ಗಿಟ್ಟಿಸಿಕೊಂಡ ಸಿ.ಪಿ ಯೋಗೇಶ್ವರ್‌ ಇದೀಗ ಮಂತ್ರಿ ಗಿರಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರ ಆಸೆಗೆ ಅಡ್ಡಿಉಂಟು ಮಾಡುತ್ತಿರುವವರು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪರ ಆಪ್ತರು. ಅದರಲ್ಲೂ ಎಂ.ಪಿ ರೇಣುಕಾಚಾರ್ಯ, ರಾಜೂಗೌಡ ಒಳಗೊಂಡಂತೆ ಹಲವು ಶಾಸಕರು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದರೆ ನಮಗೂ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಸಿಪಿವೈ ವಿರುದ್ಧ ಬಿಎಸ್‌ವೈ ಆಪ್ತರು ಬಾಣ ಪ್ರಯೋಗ ಮಾಡಲು ಕಾರಣವೇನು? ಯೋಗೇಶ್ವರ್‌ ಹಾಗೂ ಬಿಎಸ್‌ವೈ ಆಪ್ತ ಶಾಸಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ಏನು ಎಂಬುವುದು ಕುತೂಹಲ ಕೆರಳಿಸಿದೆ.

ಸಚಿವ ಸ್ಥಾನ ಪಡೆದುಕೊಳ್ಳಲು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ನಾನಾ‌ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಬಿ.ಎಸ್‌ ಯಡಿಯೂರಪ್ಪ ಆಪ್ತರು ಪ್ರಯತ್ನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಹಗ್ಗಜಗ್ಗಾಟಕ್ಕೆ ಕಾರಣ ಏನು?


ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಎಸ್‌ವೈ ಆಪ್ತರ ವಿರೋಧಕ್ಕೆ ಕಾರಣ ಏನು?

ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಳ್ಳಲು ಸಚಿವಾಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ ನಾನಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ತ್ರಾಸ ಪಟ್ಟು ಪರಿಷತ್ ಸ್ಥಾನ ಗಿಟ್ಟಿಸಿಕೊಂಡ ಸಿ.ಪಿ ಯೋಗೇಶ್ವರ್‌ ಇದೀಗ ಮಂತ್ರಿ ಗಿರಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅವರ ಆಸೆಗೆ ಅಡ್ಡಿಉಂಟು ಮಾಡುತ್ತಿರುವವರು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪರ ಆಪ್ತರು. ಅದರಲ್ಲೂ ಎಂ.ಪಿ ರೇಣುಕಾಚಾರ್ಯ, ರಾಜೂಗೌಡ ಒಳಗೊಂಡಂತೆ ಹಲವು ಶಾಸಕರು ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದರೆ ನಮಗೂ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಸಿಪಿವೈ ವಿರುದ್ಧ ಬಿಎಸ್‌ವೈ ಆಪ್ತರು ಬಾಣ ಪ್ರಯೋಗ ಮಾಡಲು ಕಾರಣವೇನು? ಯೋಗೇಶ್ವರ್‌ ಹಾಗೂ ಬಿಎಸ್‌ವೈ ಆಪ್ತ ಶಾಸಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ಏನು ಎಂಬುವುದು ಕುತೂಹಲ ಕೆರಳಿಸಿದೆ.



​ಸಚಿವ ಸ್ಥಾನಕ್ಕಾಗಿ ಸಿ.ಪಿ ಯೋಗೇಶ್ವರ್‌ ಲಾಬಿ
​ಸಚಿವ ಸ್ಥಾನಕ್ಕಾಗಿ ಸಿ.ಪಿ ಯೋಗೇಶ್ವರ್‌ ಲಾಬಿ

ಹೇಗಾದರೂ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ ಲಾಬಿ ನಡೆಸುತ್ತಿದ್ದಾರೆ. ಮಂತ್ರಿಗಿರಿಗಾಗಿ ಇವರು ನಡೆಸುತ್ತಿರುವ ಲಾಬಿ ಇಂದು ನಿನ್ನೆಯದ್ದಲ್ಲ. ಬದಲಾಗಿ ಮೈತ್ರಿ ಸರ್ಕಾರ ಪತನಗೊಂಡು ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದ ನಂತರ ಮಂತ್ರಿ ಸ್ಥಾನ ಪಡೆದುಕೊಳ್ಳಲು ಲಾಬಿ ಶುರುಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದ ಸಿಪಿವೈಗೆ ಇದು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಹೈಕಮಾಂಡ್ ಬೆನ್ನ ಹಿಂದೆ ಬಿದ್ದು ವಿಧಾನಪರಿಷತ್ ಸ್ಥಾನವನ್ನು ಪಡೆದುಕೊಂಡರು. ಆದರೆ ಪರಿಷತ್‌ ಸ್ಥಾನ ನೀಡಲೂ ಬಿಎಸ್‌ ಯಡಿಯೂರಪ್ಪ ಬಣ ವಿರೋಧ ವ್ಯಕ್ತಪಡಿಸಿತ್ತು. ವಿರೋಧದ ನಡುವೆಯೂ ಯೋಗೇಶ್ವರ್‌ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸಿ ಎಂಎಲ್‌ಸಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.



​ರಮೇಶ್ ಜಾರಕಿಹೊಳಿ ಮೂಲಕ ಪ್ರಯತ್ನ
​ರಮೇಶ್ ಜಾರಕಿಹೊಳಿ ಮೂಲಕ ಪ್ರಯತ್ನ

ಪರಿಷತ್ ಸ್ಥಾನ ಪಡೆದುಕೊಳ್ಳಲು ಯಶಸ್ಸಾದ ಸಿ.ಪಿ ಯೋಗೇಶ್ವರ್‌ ಇದೀಗ ಮಂತ್ರಿಗಿರಿಗಾಗಿ ಯತ್ನ ಮುಂದುವರಿಸಿದ್ದಾರೆ. ಅದಕ್ಕಾಗಿ ಲಾಬಿ ನಡೆಸಲು ಅವರು ಆಯ್ಕೆ ಮಾಡಿಕೊಂಡಿದ್ದು ರಮೇಶ್ ಜಾರಕಿಹೊಳಿ. ರಮೇಶ್ ಅವರ ಸ್ನೇಹಿತರಾಗಿರುವ ಸಿಪಿವೈ ಹೇಗಾದರೂ ಮಾಡಿ ಬಿಎಸ್ ಯಡಿಯೂರಪ್ಪ ಅವರ ಮನವೋಲಿಕೆ ನಡೆಸುವ ಕಸರತ್ತು ನಡೆಸುಯತ್ತಿದ್ದಾರೆ. ಬಿಎಸ್‌ವೈ ಆಪ್ತ ಬಣದಲ್ಲಿರುವ ರಮೇಶ್ ಜಾರಕಿಹೊಳಿ ಮೂಲಕ ಒತ್ತಡ ಹೇರಿ ಸಚಿವ ಸ್ಥಾನವನ್ನು ಪಡೆದುಕೊಳ್ಳುವ ತಂತ್ರಗಾರಿಕೆ ಸಿ.ಪಿ ಯೋಗೇಶ್ವರ್‌ ಅವರದ್ದು. ಈ ನಿಟ್ಟಿನಲ್ಲಿ ಬುಧವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ರಮೇಶ್ ಜಾರಕಿಹೊಳಿ ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆ ಕೊಟ್ಟಿದ್ದಾರೆ.



​ಸಿಪಿವೈಗೆ ಸಚಿವ ಸ್ಥಾನ ನೀಡಲು ಬಿಎಸ್‌ವೈ ಆಪ್ತರ ವಿರೋಧ
​ಸಿಪಿವೈಗೆ ಸಚಿವ ಸ್ಥಾನ ನೀಡಲು ಬಿಎಸ್‌ವೈ ಆಪ್ತರ ವಿರೋಧ

ಸಂಪುಟಕ್ಕೆ ಹೇಗಾದರೂ ಮಾಡಿ ಸೇರ್ಪಡೆಗೊಳ್ಳಬೇಕು ಎಂಬ ಪ್ರಯತ್ನವನ್ನು ಯೋಗೇಶ್ವರ್‌ ನಡೆಸುತ್ತಿದ್ದರೆ ಇದಕ್ಕೆ ಬಿಎಸ್‌ವೈ ಆಪ್ತರು ಅಡ್ಡಗಾಲು ಹಾಕುತ್ತಿದ್ದಾರೆ. ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಎಂಪಿ ರೇಣುಕಾಚಾರ್ಯ, ರಾಜೂಗೌಡ ಒಳಗೊಂಡ ತಂಡ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಿ ಸಿಪಿ ಯೋಗೇಶ್ವರ್‌ ಪರವಾಗಿ ಲಾಬಿ ನಡೆಸದಂತೆ ಮನವಿ ಮಾಡಿದ್ದರು. ಅಲ್ಲದೆ ಬಹಿರಂಗವಾಗಿಯೂ ಪರೋಕ್ಷ ವಿರೋಧವನ್ನು ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಸೋಲನುಭವಿಸಿದವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಸಿಪಿವೈ ಕೆಲವೊಂದು ಹೇಳಿಕೆಗಳನ್ನು ಇವರೆಲ್ಲಾ ಬಹಿರಂಗವಾಗಿಯೇ ಖಂಡಿಸಿದ್ದರು. ಇದಕ್ಕೆ ಹಲವಾರು ಕಾರಣಗಳು ಇವೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಸಿಪಿ ಯೋಗೇಶ್ವರ್‌ ಹೈಕಮಾಂಡ್‌ ಜೊತೆಗೆ ಆಪ್ತವಾಗಿದ್ದಾರೆ ಎನ್ನಲಾಗುತ್ತಿದೆ. ಬಿಎಸ್‌ವೈ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಇವರಿಗೆ ಸಚಿವ ಸ್ಥಾನ ತಪ್ಪಿಸಲು ಆಪ್ತರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಈ ಕಸರತ್ತು ಯಶಸ್ವಿಯಾಗುತ್ತಾ ಎಂಬುವುದು ಸದ್ಯದ ಕುತೂಹಲ.





from India & World News in Kannada | VK Polls https://ift.tt/364XDoM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...