ಮೈಸೂರಿನ 266 ಗ್ರಾಪಂಗೆ ನೂರಾರು ಲೆಕ್ಕಾಚಾರ: ಕೈ-ಕಮಲ-ದಳ ವಿಭಿನ್ನ ತಂತ್ರ!

ಐತಿಚಂಡ ರಮೇಶ್‌ ಉತ್ತಪ್ಪಮೈಸೂರು: ಮುಂದಿನ ಸಾರ್ವತ್ರಿಕ ಚುನಾವಣೆಯ ತಳಪಾಯ ಎಂದೇ ಹೇಳಲಾಗುವ ಗ್ರಾಮ ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಸಾಧ್ಯವಾದಷ್ಟು ಗ್ರಾಮ ಪಂಚಾಯಿತಿಗಳನ್ನು ತೆಕ್ಕೆಗೆ ಹಾಕಿಕೊಂಡು ಮತ್ತೆ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಲು ಪ್ರಮುಖ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲಎನ್ನುವ ಮಾತು ಹಳ್ಳಿ ಭಾಗದಲ್ಲಿ ಪ್ರಚಲಿತದಲ್ಲಿದೆ. ಅಂದರೆ, ಗ್ರಾಮಮಟ್ಟದಲ್ಲಿ ನಡೆಯುವ ಚುನಾವಣೆ ಅತ್ಯಂತ ಪೈಪೋಟಿಯಿಂದ ಕೂಡಿರುತ್ತದೆ. ಸ್ಥಳೀಯ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯುವುದರಿಂದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ಚುನಾವಣಾ ಕಣ ರಂಗೇರುತ್ತದೆ.266 ಗ್ರಾಪಂಗಳಿಗೆ ಚುನಾವಣೆ: ಜಿಲ್ಲೆಯಲ್ಲಿಅವಧಿ ಮುಗಿದಿರುವ 266 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡು ಹಂತಗಳಲ್ಲಿಇವುಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಇವರು ಸೇರಿದಂತೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ನೌಕರರಿಗೆ ತರಬೇತಿ ನೀಡಲಾಗಿದೆ.ಹೊಸ ಅಸ್ತಿತ್ವದ ಕುತೂಹಲ: ಮೈಸೂರು ನಗರದ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳನ್ನು ಒಂದುಗೂಡಿಸಿ ಒಂದು ನಗರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಸರಕಾರದಿಂದ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ಅಲ್ಲಿ ಚುನಾವಣೆ ನಡೆಸದಂತೆ ಮನವಿ ಸಲ್ಲಿಸಲಿದೆ. ಕೊನೆಯ ಕ್ಷಣದಲ್ಲಿಸರಕಾರ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿಚುನಾವಣಾ ಆಯೋಗ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲವಿದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಮೈಸೂರಿನಲ್ಲಿ ಅವಧಿ ಮುಗಿದಿರುವ 266 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡು ಹಂತಗಳಲ್ಲಿಇವುಗಳಿಗೆ ಚುನಾವಣೆ ನಡೆಯಲಿದೆ. ಈ ಬಗ್ಗೆ ವಿವರಣೆ ಇಲ್ಲಿದೆ.


ಮೈಸೂರಿನ 266 ಗ್ರಾಪಂಗೆ ನೂರಾರು ಲೆಕ್ಕಾಚಾರ: ಕೈ-ಕಮಲ-ದಳ ವಿಭಿನ್ನ ತಂತ್ರ!

ಐತಿಚಂಡ ರಮೇಶ್‌ ಉತ್ತಪ್ಪ

ಮೈಸೂರು:

ಮುಂದಿನ ಸಾರ್ವತ್ರಿಕ ಚುನಾವಣೆಯ ತಳಪಾಯ ಎಂದೇ ಹೇಳಲಾಗುವ ಗ್ರಾಮ ಪಂಚಾಯಿತಿ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಸಾಧ್ಯವಾದಷ್ಟು ಗ್ರಾಮ ಪಂಚಾಯಿತಿಗಳನ್ನು ತೆಕ್ಕೆಗೆ ಹಾಕಿಕೊಂಡು ಮತ್ತೆ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಲು ಪ್ರಮುಖ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿವೆ.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬಹುದು. ಆದರೆ, ಗ್ರಾಮ ಪಂಚಾಯಿತಿಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯವಿಲ್ಲಎನ್ನುವ ಮಾತು ಹಳ್ಳಿ ಭಾಗದಲ್ಲಿ ಪ್ರಚಲಿತದಲ್ಲಿದೆ. ಅಂದರೆ, ಗ್ರಾಮಮಟ್ಟದಲ್ಲಿ ನಡೆಯುವ ಚುನಾವಣೆ ಅತ್ಯಂತ ಪೈಪೋಟಿಯಿಂದ ಕೂಡಿರುತ್ತದೆ. ಸ್ಥಳೀಯ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯುವುದರಿಂದ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ ಚುನಾವಣಾ ಕಣ ರಂಗೇರುತ್ತದೆ.

266 ಗ್ರಾಪಂಗಳಿಗೆ ಚುನಾವಣೆ:

ಜಿಲ್ಲೆಯಲ್ಲಿಅವಧಿ ಮುಗಿದಿರುವ 266 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಎರಡು ಹಂತಗಳಲ್ಲಿಇವುಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಇವರು ಸೇರಿದಂತೆ ಚುನಾವಣೆಯಲ್ಲಿ ಪಾಲ್ಗೊಳ್ಳುವ ಎಲ್ಲ ನೌಕರರಿಗೆ ತರಬೇತಿ ನೀಡಲಾಗಿದೆ.

ಹೊಸ ಅಸ್ತಿತ್ವದ ಕುತೂಹಲ:

ಮೈಸೂರು ನಗರದ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳನ್ನು ಒಂದುಗೂಡಿಸಿ ಒಂದು ನಗರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಸರಕಾರದಿಂದ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ ಅಲ್ಲಿ ಚುನಾವಣೆ ನಡೆಸದಂತೆ ಮನವಿ ಸಲ್ಲಿಸಲಿದೆ. ಕೊನೆಯ ಕ್ಷಣದಲ್ಲಿಸರಕಾರ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿಚುನಾವಣಾ ಆಯೋಗ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲವಿದೆ.



ಯುವಕರ ಹವಾ
ಯುವಕರ ಹವಾ

ಕೊರೊನಾದಿಂದಾಗಿ ಮತ್ತೆ ಗ್ರಾಮಗಳನ್ನು ಸೇರಿರುವ ಯುವಕರು ಈ ಚುನಾವಣೆಯಲ್ಲಿಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ನೇರವಾಗಿ ಚುನಾವಣಾ ಕಣಕ್ಕೆ ಧುಮುಕಲು ಸಿದ್ಧರಾಗುತ್ತಿದ್ದರೆ, ಮತ್ತೆ ಕೆಲವರು ರಾಜಕೀಯ ಪಕ್ಷಗಳಲ್ಲಿಗುರುತಿಸಿಕೊಂಡು ಮುಂದಿನ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಮೊದಲ ಬಾರಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿಈ ಬಾರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ರಾಜಕೀಯ ಪಕ್ಷಗಳು ಕೂಡ ಯುವಕರಿಗೆ ಮಣೆ ಹಾಕಲಿವೆ. ಇದರಿಂದಾಗಿ ಪೈಪೋಟಿ ಇನ್ನಷ್ಟು ಹೆಚ್ಚಾಗಲಿದೆ.

ಗ್ರಾಮ ಪಂಚಾಯತ್ ಚುನಾವಣೆ: ತಂತ್ರಗಾರಿಕೆ ರೂಪಿಸಲು ಜೆಡಿಎಸ್‌ ಸಭೆ



ಓಲೈಕೆಯ ಕಸರತ್ತು
ಓಲೈಕೆಯ ಕಸರತ್ತು

ಗ್ರಾಮಗಳಲ್ಲಿರುವ ಹಿರಿಯರ ಬಗ್ಗೆ ಈಗ ವಿಶೇಷ ಪ್ರೀತಿ. ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮಂದಿ ಮತಸೆಳೆಯುವ ದೃಷ್ಟಿಯಿಂದ ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲಿಹಿರಿಯರ ಓಲೈಕೆಯೂ ಒಂದು. ಅವರ ಅಗತ್ಯ ಕಾರ್ಯಗಳನ್ನು ಮಾಡಿಕೊಡುವುದು, ನಗರ ಪ್ರದೇಶಗಳಿಂದ ಅಗತ್ಯ ವಸ್ತುಗಳನ್ನು ತಂದುಕೊಡುವುದು, ಜಮೀನು ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದು ಮುಂತಾದ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ. ಇದರಿಂದ ಮುಂದಿನ ಚುನಾವಣೆಯ ವೇಳೆಗೆ ಅವರ ಪ್ರೀತಿ ಗಳಿಸಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ.

ಗ್ರಾಮಪಂಚಾಯತ್ ಚುನಾವಣೆ, ಹಳ್ಳಿ ಜನರ ಮನ ಗೆಲ್ಲಲು ಬಿಜೆಪಿ ರಣತಂ



​ಬಿಜೆಪಿಗೆ ಬಾಚಿಕೊಳ್ಳುವ ತವಕ
​ಬಿಜೆಪಿಗೆ ಬಾಚಿಕೊಳ್ಳುವ ತವಕ

ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ ಚುನಾವಣೆಯಲ್ಲಿನ ಕ್ಲೀನ್‌ ಸ್ವೀಪ್‌ನಿಂದ ಹೊಸ ಹುರುಪಿನಲ್ಲಿದೆ. ಇಡೀ ಹಳೇ ಮೈಸೂರಿನತ್ತ ಕಣ್ಣು ಹಾಕಿದೆ. ಈ ಭಾಗದ ಗ್ರಾಮ ಪಂಚಾಯಿತಿಗಳು ಅದಕ್ಕೆ ಕಬ್ಬಿಣದ ಕಡಲೆ. ಇದಕ್ಕಾಗಿ ಸಾಕಷ್ಟು ತಿಂಗಳುಗಳಿಂದಲೇ ತಯಾರಿ ನಡೆಸಿದೆ. ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸಾಕಷ್ಟು ಬಾರಿ ಪದಾಧಿಕಾರಿಗಳ ಹಾಗೂ ಗ್ರಾಮಾಂತರ ಭಾಗದ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಹೆಚ್ಚು ಗ್ರಾಪಂಗಳನ್ನು ಬಾಚಿಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಗೆ ಆತ್ಮವಿಶ್ವಾಸ ಹೆಚ್ಚಲಿದೆ ಎನ್ನುವ ಚಿಂತನೆ ಪಕ್ಷದ್ದು. ಈ ಹಿನ್ನೆಲೆಯಲ್ಲಿ ಸವಾಲಾಗಿ ಸ್ವೀಕರಿಸಿದೆ.



ಉಳಿದು ತೋರಿಸುವ ತವಕ
ಉಳಿದು ತೋರಿಸುವ ತವಕ

ಉಪ ಚುನಾಣೆಯಲ್ಲಿಸೋಲು ಅನುಭವಿಸಿದರೂ ತಳಮಟ್ಟದಲ್ಲಿಇನ್ನೂ ತಮ್ಮ ಪಕ್ಷ ಬಲಿಷ್ಠವಾಗಿದೆ ಎನ್ನುವುದನ್ನು ತೋರಿಸುವ ತವಕ ಕಾಂಗ್ರೆಸ್‌ಗೆ. ಹಳೇ ಮೈಸೂರು ಎಂದರೆ ಅದಕ್ಕೆ ವಿಶೇಷ ಪ್ರೀತಿ. ಅದರಲ್ಲಿಯೂ ಸಿದ್ದರಾಮಯ್ಯ ಅವರ ಪ್ರಭಾವವೇ ಅದಕ್ಕೆ ಶ್ರೀರಕ್ಷೆ. ಈಗಲೂ ಸಿದ್ದರಾಮಯ್ಯ ಹೋದ ಕಡೆ ಗ್ರಾಮಾಂತರ ಭಾಗದ ಕಾರ್ಯಕರ್ತರು ಮುಗಿ ಬೀಳುತ್ತಾರೆ. ಈ ಚುನಾವಣೆಯಲ್ಲಿಹೆಚ್ಚು ಗ್ರಾಪಂಗಳನ್ನು ಗೆದ್ದು ತನ್ನ ತಾಕತ್ತು ತೋರಿಸಿ ತೊಡೆ ತಟ್ಟಲು ಕಾಂಗ್ರೆಸ್‌ ತಯಾರಿ ನಡೆಸುತ್ತಿದೆ. ಸಿದ್ದರಾಮಯ್ಯರಿಗೆ ಇದು ಪ್ರತಿಷ್ಠೆಯ ಚುನಾವಣೆ.

ಮೈಸೂರು ಜನರಿಗೆ ದೀಪಾವಳಿ ಗಿಫ್ಟ್‌: ನಗರಸಭೆಯಾಯ್ತು ಹೂಟಗಳ್ಳಿ.. 4 ಗ್ರಾಪಂಗಳೂ ಮೇಲ್ದರ್ಜೆಗೆ..



ಯಾರೇ ಹೋಗಲಿ ನಾವೇ ಮೇಲು
ಯಾರೇ ಹೋಗಲಿ ನಾವೇ ಮೇಲು

ಪಕ್ಷದಿಂದ ಯಾವ ನಾಯಕರು ಹೊರ ಹೋದರೂ ಕಾರ್ಯಕರ್ತರೇ ಮೇಲು ಎನ್ನುವುದನ್ನು ಸಾಬೀತುಪಡಿಸಲು ಜೆಡಿಎಸ್‌ ಕಾಯುತ್ತಿದೆ. ಮೈಸೂರು ಭಾಗದ ಗ್ರಾಮ ಪಂಚಾಯಿತಿಗಳಲ್ಲಿಈಗಲೂ ಜೆಡಿಎಸ್‌ ಬಲಿಷ್ಠವಾಗಿದೆ. ಈ ಬಾರಿ ಜಿ.ಟಿ.ದೇವೇಗೌಡರ ಬಲವಿಲ್ಲದೆ ಸಾ.ರಾ.ಮಹೇಶ್‌ ಅವರ ಸಾರಥ್ಯದಲ್ಲಿನಡೆಯಲಿದೆ. ಇನ್ನೂ ಜೆಡಿಎಸ್‌ ತನ್ನ ಪ್ರಭಾವ ಉಳಿಸಿಕೊಂಡಿದೆಯೇ, ಕುಮಾರಸ್ವಾಮಿ ಅವರ ಹೆಸರು ಈಗಲೂ ಹುರುಪಿನ ಮಂತ್ರವಾಗಿ ಇದೆಯೇ ಎನ್ನುವುದು ತಿಳಿಯಲಿದೆ.





from India & World News in Kannada | VK Polls https://ift.tt/36bTWhr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...