ಆದೇಶ ಸಿಕ್ಕರೂ ಜಾಬ್‌ ಇಲ್ಲ: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಬದುಕು ಅತಂತ್ರ!

ರವಿಕುಮಾರ ಬೆಟ್ಟದಪುರ ಬೆಂಗಳೂರು ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗದ ಆದೇಶ ಪ್ರತಿ ಕೈ ಸೇರಿದರೂ ಕರ್ತವ್ಯಕ್ಕೆ ಹಾಜರಾಗಲು ಇಲಾಖೆಗಳಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಆಯೋಗವು ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ 1812 ಅಭ್ಯರ್ಥಿಗಳ ಪೈಕಿ 100 ಮಂದಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿದೆ. ಉಳಿದವರು ಅನುಮತಿ ಕೋರಿ ಬೀದಿ ಬೀದಿ ಅಲೆಯುತ್ತ, ನಿಯೋಜನೆಗೊಂಡಿರುವ ಇಲಾಖೆಗಳ ಬಾಗಿಲು ಬಡಿಯುತ್ತಿದ್ದಾರೆ. ಕೆಪಿಸ್‌ಸಿ 2017ರಲ್ಲಿ 507 ಪ್ರಥಮ ದರ್ಜೆ ಸಹಾಯಕ ಹಾಗೂ 551 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಬಳಿಕ ಹೆಚ್ಚುವರಿಯಾಗಿ 454 ಎಫ್‌ಡಿಎ ಮತ್ತು 300 ಎಸ್‌ಡಿಎ ಸೇರಿ 1812 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು 2018ರಲ್ಲಿ ಪರೀಕ್ಷೆ ಬರೆದಿದ್ದರು. 2019ರಲ್ಲಿ 1:5 ಅನುಪಾತದ ಆಧಾರದಲ್ಲಿ ದಾಖಲೆಯ ಪರಿಶೀಲನೆ ನಡೆಸಲಾಗಿತ್ತು. 2020ರ ಜುಲೈನಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಗಳನ್ನು ಹಂಚಿಕೆ ಮಾಡಲಾಗಿತ್ತು. ಸಂಬಂಧಿಸಿದ ಇಲಾಖೆಗಳಿಗೆ ಸ್ಥಳ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರಿಪಡಿಸಿಕೊಳ್ಳುವಂತೆ ತಿಳಿಸಲಾಗಿತ್ತು. ಆದರೆ, ಕೋವಿಡ್‌-19 ಕಾರಣ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿಅಭ್ಯರ್ಥಿಗಳ ಹಾಜರಾತಿ ಅನುಮತಿಯನ್ನು ತಡೆಹಿಡಿಯಲಾಗಿದೆ. ಖಾಸಗಿ ಕಂಪನಿಗಳು ಸೇರಿ ನಾನಾ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಅಭ್ಯರ್ಥಿಗಳು ಬರೆದಿದ್ದರು. ಉದ್ಯೋಗದ ಆದೇಶ ಪ್ರತಿ ಹಿಡಿದವರು ತಮ್ಮ ಕಂಪನಿಯ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿಯೂ ಆಗಿತ್ತು. ಅತಂತ್ರ ಪರಿಸ್ಥಿತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ನನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. ಆದರೆ, ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಆಯ್ಕೆಯಾಗಿ ಉದ್ಯೋಗದ ಆದೇಶ ಪ್ರತಿ ಕೈ ಸೇರಿದ ಕಾರಣ ಹಿಂದೆ ಮಾಡುತ್ತಿದ್ದ ಕೆಲಸ ಬಿಟ್ಟಿದ್ದೇನೆ. ನನ್ನ ಶೈಕ್ಷಣಿಕ ಹಾಗೂ ಜಾತಿ ಪ್ರಮಾಣಪತ್ರ ಮೂಲ ದಾಖಲಾತಿಗಳನ್ನು ನಾನು ನಿಯೋಜನೆಗೊಂಡಿರುವ ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ನೀಡಿದ್ದೇನೆ. ಇದೀಗ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುತ್ತಿಲ್ಲ. ಬೇರೆ ಕೆಲಸ ನೋಡೋಣವೆಂದರೂ ಮೂಲ ದಾಖಲಾತಿ ಕೇಳುತ್ತಾರೆ. ಹೀಗಾಗಿ, ಯಾವುದೇ ಕೆಲಸ ಇಲ್ಲದಾಗಿದೆ,'' ಎಂದು ಶಿವಮೊಗ್ಗ ಮೂಲದ ಕಿಶೋರ್‌ ನೊಂದು ನುಡಿದರು. 'ಆದೇಶ ಪ್ರತಿ ಕೈ ಸೇರುತ್ತಿದ್ದಂತೆ ಅನುಮತಿ ನೀಡಿ ಎಂದು ನಿಯೋಜನೆಗೊಂಡ ಇಲಾಖೆಯ ಸಚಿವರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ನೀಡಲಾಗಿದೆ. ಆದರೆ, ಯಾರೊಬ್ಬರಿಂದಲೂ ಸ್ಪಂದನೆ ಸಿಕ್ಕಿಲ್ಲ. ಇನ್ನು ಮುಖ್ಯಮಂತ್ರಿಗಳ ಮನೆ ಎದುರು ಪ್ರತಿಭಟನೆ ನಡೆಸಲು ಪೊಲೀಸರು ಬಿಡುತ್ತಿಲ್ಲ, ಎಂದು ನೊಂದ ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು. ಎಫ್‌ಡಿಎ ಹುದ್ದೆಗೆ ಆಯ್ಕೆಯಾಗಿ ದೇವರಾಜು ಅರಸು ನಿಗಮ ಮಂಡಳಿಗೆ ನಿಯೋಜನೆಗೊಂಡಿದ್ದೆ. ಕೈಯಲ್ಲಿದ್ದ ಖಾಸಗಿ ಪ್ರೌಢಶಾಲೆಯ ಶಿಕ್ಷಕಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಆರು ತಿಂಗಳ ಬಳಿಕವೂ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡುತ್ತಿಲ್ಲ. ಇದೀಗ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಉಮಾದೇವಿ, ಎಫ್‌ಡಿಎ ಹುದ್ದೆಗೆ ಆಯ್ಕೆಯಾಗಿರುವ , ಹಾಸನ ಹಿನ್ನೆಲೆ ಏನು?
  • ಪರೀಕ್ಷೆ ಬರೆದ ವರ್ಷ 2018
  • ಆದೇಶ ಪ್ರತಿ ಕೊಟ್ಟಿದ್ದು 2019
  • ತೇರ್ಗಡೆಯಾದವರು 1812
  • ಅನುಮತಿ ಪಡೆದವರು 100


from India & World News in Kannada | VK Polls https://ift.tt/35SBMRm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...