ಅನಘ ವಸತಿಗೃಹ ಲೋಕಾರ್ಪಣೆ: ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ, ಸಚಿವ ಕೋಟ

ಸುಬ್ರಹ್ಮಣ್ಯ: ಕುಕ್ಕೆ ದೇಗುಲ ವತಿಯಿಂದ ನಿರ್ಮಾಣವಾಗಿರುವ 'ಅನಘ' ಸುಸಜ್ಜಿತ ವಸತಿಗೃಹ ದೇಶ ವಿದೇಶಗಳಿಂದ ಬರುವ ಭಕ್ತರ ಅನುಕೂಲತೆಗೆ ಪೂರಕವಾಗಿದೆ. ಮುಂಬರುವ ಚಂಪಾ ಷಷ್ಠಿ ಜಾತ್ರೋತ್ಸವ ಸಂದರ್ಭ ಈ ವಸತಿಗೃಹ ಭಕ್ತರ ಪ್ರಯೋಜನಕ್ಕೆ ಬರಲಿದೆ. ಇದು ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮುನ್ನುಡಿ ಎಂದು ಮುಜರಾಯಿ ಸಚಿವ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಮಾಸ್ಟರ್‌ ಪ್ಲ್ಯಾನ್‌ ಯೋಜನೆಯಲ್ಲಿ ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಾಣವಾದ 180 ಕೊಠಡಿಗಳ 25 ಕೋಟಿ ರೂ. ವೆಚ್ಚದ ಅನಘ ವಸತಿಗೃಹವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಭಕ್ತರು ಸೇವಾದಿಗಳನ್ನು ಸುಸೂತ್ರವಾಗಿ ನೆರವೇರಿಸಲು ಬೇಕಾದ ಅನುಕೂಲತೆಗಳನ್ನು ಪೂರೈಸಲಾಗುವುದು. ಭಕ್ತರು ಸಂತುಷ್ಟರಾಗಿ ತೆರಳಲು ಬೇಕಾದ ವ್ಯವಸ್ಥೆಗಳನ್ನು ಅಭಿವೃದ್ಧಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ನೆರವೇರಿಸಲಾಗುವುದು ಎಂದರು. ಕುಕ್ಕೆ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್‌. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಪಂ ಸದಸ್ಯ ಹರೀಶ್‌ ಕಂಜಿಪಿಲಿ, ತಾಪಂ ಸದಸ್ಯ ಅಶೋಕ್‌ ನೆಕ್ರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದೇವಳದ ಆಡಳಿತಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ದೇವಳದ ಕಾರ‍್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌., ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್‌ ಎಸ್‌., ವನಜಾ ವಿ. ಭಟ್‌, ಪ್ರಸನ್ನ ದರ್ಬೆ, ಮನೋಹರ ರೈ, ಸಹಾಯಕ ಕಾರ‍್ಯನಿರ್ವಹಣಾಧಿಕಾರಿ ಪುಷ್ಪಲತಾ ಉಪಸ್ಥಿತರಿದ್ದರು. ದೇವಳದ ಅಭಿಯಂತರ ಉದಯ ಕುಮಾರ್‌, ಪದ್ಮನಾಭ ಶೆಟ್ಟಿಗಾರ್‌, ದೇವಣ್ಣ ಗೌಡ, ಯೋಗೀಶ್‌, ಪ್ರಮುಖರಾದ ದಿನೇಶ್‌ ಸಂಪ್ಯಾಡಿ, ರಾಜೇಶ್‌ ಎನ್‌.ಎಸ್‌., ಚಿದಾನಂದ ಕಂದಡ್ಕ, ಶ್ರೀಕುಮಾರ್‌ ಬಿಲದ್ವಾರ, ಪ್ರಶಾಂತ್‌ ಭಟ್‌ ಮಾಣಿಲ, ಅಚ್ಚುತ ಗೌಡ, ಜಯರಾಮ ಎಚ್‌.ಎಲ್‌., ಶೋಭಾ ನಲ್ಲೂರಾಯ, ಸವಿತಾ ಭಟ್‌ ಉಪಸ್ಥಿತರಿದ್ದರು. ನೂತನ ವಸತಿಗೃಹವನ್ನು ಸಚಿವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದೇವಳದ ಆಡಳಿತಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಸ್ವಾಗತಿಸಿದರು. ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್‌ ವಂದಿಸಿದರು. ಉಪನ್ಯಾಸಕ ರತ್ನಾಕರ ಎಸ್‌. ಕಾರ‍್ಯಕ್ರಮ ನಿರೂಪಿಸಿದರು.


from India & World News in Kannada | VK Polls https://ift.tt/2J3YUDT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...