ಕೊರೊನಾ ವೈರಸ್ ಆರ್ಭಟ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಡುವ ಹೊತ್ತಲ್ಲೇ ಮತ್ತೆ ಹಾವಳಿ ಶುರುವಾಗಿದೆ..! ಕೊರೊನಾ ವೈರಸ್ನ 2ನೇ ಅಲೆ, ಚಳಿಗಾಲದಲ್ಲೇ ತನ್ನ ಆರ್ಭಟ ಮೆರೆಯುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಇಳಿಕೆಯ ಹಾದಿಯಲ್ಲಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯ ಹಾದಿ ಕಾಣುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜನರೂ ಕೂಡಾ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೊರೊನಾ ವೈರಸ್ ಬರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದೆ. ಜನರು ಭಯ, ಭೀತಿಗೆ ಒಳಗಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸರ್ಕಾರದ ಆದೇಶಗಳನ್ನೂ ಪಾಲಿಸಬೇಕಿದೆ. ಜನರು ತಮ್ಮ ಆರೋಗ್ಯ ರಕ್ಷಣೆ ಸಂಬಂಧ ಪಾಲಿಸಬೇಕಾದ ನಿಯಮಗಳೇನು ಎಂಬುದರ ವಿವರಣೆ ಇಲ್ಲಿದೆ:ನೂರಾರು ಜನರು ಒಂದೆಡೆ ಸೇರುವ ಪ್ರದೇಶಗಳು ಕೋವಿಡ್ ಹಾಟ್ ಸ್ಪಾಟ್ ಆಗೋದ್ರಲ್ಲಿ ಸಂಶಯವೇ ಬೇಡ.. ಅದರಲ್ಲೂ ಚಳಿಗಾಲದ ಹೊತ್ತಲ್ಲಿ ಕೊರೊನಾ ವೈರಾಣು ಬಹುಕಾಲ ಉಳಿಯುವ ಕಾರಣ, ಥಿಯೇಟರ್ ಹಾಗೂ ಮಾರ್ಕೆಟ್ನ ಜನನಿಬಿಡ ಪ್ರದೇಶಗಳು ಸೋಂಕು ಹರಡುವಿಕೆಗೆ ಹೇಳಿ ಮಾಡಿಸಿದ ತಾಣಗಳು..!

ಕೊರೊನಾ ವೈರಸ್ ಆರ್ಭಟ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಡುವ ಹೊತ್ತಲ್ಲೇ ಮತ್ತೆ ಹಾವಳಿ ಶುರುವಾಗಿದೆ..! ಕೊರೊನಾ ವೈರಸ್ನ 2ನೇ ಅಲೆ, ಚಳಿಗಾಲದಲ್ಲೇ ತನ್ನ ಆರ್ಭಟ ಮೆರೆಯುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಇಳಿಕೆಯ ಹಾದಿಯಲ್ಲಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯ ಹಾದಿ ಕಾಣುವ ಸಾಧ್ಯತೆಗಳಿವೆ.
ಈ ನಿಟ್ಟಿನಲ್ಲಿ ಜನರೂ ಕೂಡಾ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ. ಕೊರೊನಾ ವೈರಸ್ ಬರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಿದೆ. ಜನರು ಭಯ, ಭೀತಿಗೆ ಒಳಗಾಗದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸರ್ಕಾರದ ಆದೇಶಗಳನ್ನೂ ಪಾಲಿಸಬೇಕಿದೆ. ಜನರು ತಮ್ಮ ಆರೋಗ್ಯ ರಕ್ಷಣೆ ಸಂಬಂಧ ಪಾಲಿಸಬೇಕಾದ ನಿಯಮಗಳೇನು ಎಂಬುದರ ವಿವರಣೆ ಇಲ್ಲಿದೆ:
1 - ನೀವು ವಾಸಿಸುವ ಪ್ರದೇಶ ಎಂಥದ್ದು..?

ಬೆಂಗಳೂರು ಮಾತ್ರವಲ್ಲ, ರಾಜ್ಯದ, ದೇಶದ ಎಲ್ಲಾ ಸಣ್ಣ, ದೊಡ್ಡ ನಗರಗಳಲ್ಲೂ ಹಲವು ರೀತಿಯ ಜನವಸತಿ ಪ್ರದೇಶಗಳಿವೆ. ಸ್ಲಂಗಳು, ಕೊಳಚೆ ಪ್ರದೇಶಗಳು, ಮಧ್ಯಮ ವರ್ಗದ ಜನರು ವಾಸಿಸುವ ಜನ ನಿಬಿಡ ಪ್ರದೇಶಗಳು, ಸಿರಿವಂತರ ಏರಿಯಾಗಳು ಹೀಗೆ.. ಮುಂಬೈನಲ್ಲಿ ನಡೆದ ಅಧ್ಯಯನದ ಪ್ರಕಾರ, ಸಿರಿವಂತರ ಹಾಗೂ ಮಧ್ಯಮ ವರ್ಗದ ಜನರು ವಾಸಿಸುವ ಪ್ರದೇಶಗಳಿಗಿಂತಾ ಸ್ಲಂ ನಿವಾಸಿಗಳಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚು..! ಮುಂಬೈನ ಮಧ್ಯಮ ವರ್ಗದ ಜನ ಸಮೂಹ ಹಾಗೂ ಧಾರಾವಿ ಸ್ಲಂ ನಿವಾಸಿಗಳ ನಡುವೆ ಹೋಲಿಕೆ ಮಾಡಿದ್ರೆ, ಕೊರೊನಾ ವಿರುದ್ಧ ಹೋರಾಡುವ ಪ್ರತಿರೋಧಕಗಳು ಸ್ಲಂ ನಿವಾಸಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿವೆ..!
ಕೊರೊನಾ ವಿರುದ್ಧದ ಹೋರಾಟಕ್ಕೆ ರೋಗ ನಿರೋಧಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯ ದೇಹದಲ್ಲಿ ಪ್ರತಿರೋಧಕ ಸಾಮರ್ಥ್ಯ ಇಲ್ಲವಾದ್ರೆ, ಸೋಂಕಿನ ಪ್ರಖರತೆ ಹೆಚ್ಚಾಗುತ್ತದೆ.
2 - ಸರ್ಕಾರ, ಸ್ಥಳೀಯಾಡಳಿತದ ಜೊತೆ ಸಹಕರಿಸಿ

ಕೊರೊನಾ ವೈರಸ್ ಸೋಂಕಿನ ತೀವ್ರತೆ ಕಂಡು ಬರುವ ಪ್ರದೇಶಗಳಲ್ಲಿ ಸರ್ಕಾರ ತುರ್ತಾಗಿ ಪರೀಕ್ಷೆಗಳನ್ನು ಹೆಚ್ಚುಗೊಳಿಸುವ ಕೆಲಸ ಮಾಡಲೇಬೇಕು. ಈ ಹಂತದಲ್ಲಿ ನಿವಾಸಿಗಳೂ ಕೂಡಾ ಸರ್ಕಾರಕ್ಕೆ ಕೈಜೋಡಿಸಬೇಕು. ಬೆಂಗಳೂರಿನ ಉದಾಹರಣೆಯನ್ನೇ ಹೇಳೋದಾದ್ರೆ, ಕೆಲವೊಂದು ಕೊಳಚೆ ಪ್ರದೇಶಗಳಲ್ಲಿ, ಸ್ಲಂ ನಿವಾಸಿಗಳು ಆರೋಗ್ಯ ಕಾರ್ಯಕರ್ತರಿಗೆ ತಡೆ ಒಡ್ಡಿದ ಪ್ರಕರಣಗಳು ವರದಿಯಾಗಿವೆ. ಇನ್ನೂ ಕೆಲವೆಡೆ ಅಪಾರ್ಟ್ಮೆಂಟ್ ವಾಸಿಗಳು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳೋದಿಲ್ಲ ಎಂದು ಬಿಬಿಎಂಪಿ ಜೊತೆಗೆ ಸಂಘರ್ಷಕ್ಕೆ ಇಳಿದ ಘಟನೆಗಳು ನಡೆದಿವೆ.
ಚಳಿಗಾಲದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಪೂರಕವಾದ ವಾತಾವರಣ ಇರುವ ಕಾರಣ, ಜನರು ಸರ್ಕಾರದ ಜೊತೆಗೆ ಕೈಜೋಡಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಪರೀಕ್ಷೆಯ ಪ್ರಮಾಣ ಹೆಚ್ಚಳ, ಶೀಘ್ರವಾಗಿ ಸೋಂಕು ಪತ್ತೆ ಹಚ್ಚುವಿಕೆ ಹಾಗೂ ಅತಿ ಶೀಘ್ರದಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಮಾತ್ರ ಮಾತ್ರ ಕೊರೊನಾ ವೈರಸ್ನಿಂದ ಬಚಾವಾಗಬಹುದಾಗಿದೆ. ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.
3 - ಶಾಲೆ-ಕಾಲೇಜ್ ವಿಚಾರದಲ್ಲಿ ಜಾಗ್ರತೆ..!

ಪದವಿ ಕಾಲೇಜುಗಳು ಈಗಾಗಲೇ ಆರಂಭವಾಗಿವೆ. ಕಾಲೇಜಿಗೆ ಬರುವ ಮುನ್ನ ವಿದ್ಯಾರ್ಥಿಗಳು ಕೊರೊನಾ ವೈರಸ್ ನೆಗೆಟಿವ್ ಪ್ರಮಾಣ ಪತ್ರ ತರಬೇಕಾದ್ದು ಕಡ್ಡಾಯ. ಆದ್ರೆ, ಒಮ್ಮೆ ಕೊರೊನಾ ವೈರಸ್ ನೆಗೆಟಿವ್ ಎಂದು ಪ್ರಮಾಣ ಪತ್ರ ಪಡೆದರೆ, ಬಳಿಕ ಸೋಂಕು ತಗುಲೋದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರಮಾಣ ಪತ್ರ ಪಡೆದ ಮರು ಕ್ಷಣವೇ ಸೋಂಕಿತನೊಬ್ಬನ ಸಂಪರ್ಕದಿಂದ ವಿದ್ಯಾರ್ಥಿಗೂ ಸೋಂಕು ಹರಡಬಹುದು..!
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ವಿದ್ಯಾರ್ಥಿಗಳು ಎಂದಿನಂತೆ ಸ್ನೇಹಿತರ ಜೊತೆ ಅಡ್ಡಾಡಬಾರದು, ಗುಂಪು ಸೇರಬಾರದು. ಕಾಲೇಜು ಸಿಬ್ಬಂದಿ ಕೂಡಾ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪೋಷಕರ ಅನುಮತಿ ಪತ್ರ ಬೇಕೇ ಬೇಕು. ಅನುಮತಿ ಪತ್ರ ನೀಡುವಾಗಲೂ ಪೋಷಕರು ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕಾದ್ದು ಅತ್ಯಗತ್ಯ.
4 - ಮಾಸ್ಕ್ ಮರೆಯಬೇಡಿ.. ನಡುವೆ ಅಂತರವಿರಲಿ..!

ಕೊರೊನಾ ವೈರಸ್ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಇಳಿಮುಖವಾಗಿದ್ದೇ ತಡ, ಮಾಸ್ಕ್ ಧರಿಸಿ ಓಡಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜನರು ಮಾಸ್ಕ್ ಅಷ್ಟೇ ಅಲ್ಲ, ಕೋವಿಡ್ ಭಯವನ್ನೂ ಮರೆಯುತ್ತಿದ್ದಾರೆ. ಮಾಸ್ಕ್ಗಳು ಮೂಲೆ ಗುಂಪಾಗುತ್ತಿವೆ, ತಿಪ್ಪೆ ಸೇರುತ್ತಿವೆ..! ಆದ್ರೆ, ಕೊರೊನಾ ವೈರಸ್ಗೆ ಸೂಕ್ತ ಲಸಿಕೆ ಬರುವವರೆಗೂ ಮಾಸ್ಕ್ ಒಂದೇ ಸುರಕ್ಷಾ ಕವಚ ಅನ್ನೋದನ್ನು ಮರೆಯಬಾರದು..!
ಯುವ ಜನತೆಯ ಅಭಿರುಚಿಯನ್ನು ಗಮನದಲ್ಲಿ ಇಟ್ಟುಕೊಂಡು ಅವರ ಟೇಸ್ಟ್ಗೆ ತಕ್ಕ ಹಾಗೆ ಮಾಸ್ಕ್ ರೂಪಿಸಲಾಗುತ್ತಿದೆ. ಅವರ ಬಟ್ಟೆಯ ಬಣ್ಣ, ವಿನ್ಯಾಸಕ್ಕೆ ತಕ್ಕ ಮಾಸ್ಕ್ಗಳು ಲಭ್ಯ ಇದೆ. ಮಾಸ್ಕ್ ಅನ್ನೋದು ಕೂಡಾ ಈಗ ಫ್ಯಾಷನ್ ಟ್ರೆಂಡ್ ಆಗ್ತಿದೆ..! ಹೀಗಾಗಿ, ಫ್ಯಾಷನಲ್ ಆದ ಮಾಸ್ಕ್ಗಳನ್ನೂ ಜನರು ಧರಿಸಬಹುದಾಗಿದೆ..! ಧರಿಸಲೇ ಬೇಕಾಗಿದೆ..!
5 - ಮದುವೆ, ಬರ್ತ್ ಡೇ, ಗೃಹ ಪ್ರವೇಶದ ವೇಳೆ ಹುಷಾರು..!

ಕೊರೊನಾ ಕಾಲದಲ್ಲೂ ಸಂಪ್ರದಾಯಗಳು ನಡೆಯಲೇ ಬೇಕು, ಸಮಾಜ ಮುಂದುವರೆಯಲೇ ಬೇಕು.. ಮದುವೆ, ಮುಂಜಿ, ಗೃಹ ಪ್ರವೇಶ, ಹುಟ್ಟು ಹಬ್ಬ, ನಾಮಕರಣ, ಸೀಮಂತ.. ಹೀಗೆ ಹಲವು ಕಾರ್ಯಗಳು ನಡೆಯಲೇ ಬೇಕು. ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಡಿ, ಕಾರ್ಯಕ್ರಮ ನಡೆಸಬೇಡಿ ಎಂದು ಹೇಳೋದು ಅಸಾಧ್ಯ. ಆದ್ರೆ, ಆದಷ್ಟೂ ಕಡಿಮೆ ಜನರಿಗೆ ಆಮಂತ್ರಣ ನೀಡುವ ಆಯ್ಕೆ ನಮ್ಮ ಕೈನಲ್ಲಿದೆ. ಸಾಧ್ಯವಾದಷ್ಟೂ ಈ ರೀತಿಯ ಕಾರ್ಯಕ್ರಮಗಳಿಂದ ದೂರ ಉಳಿಯುವ ಆಯ್ಕೆಯೂ ನಮ್ಮ ಕೈನಲ್ಲೇ ಇದೆ. ಸಾಧ್ಯವಾದಷ್ಟೂ ಕಡಿಮೆ ಸಮಯ ಇಂಥಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಆಯ್ಕೆಯೂ ಇದೆ..!
ಹೀಗಾಗಿ, ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ಮುನ್ನವೂ ಹಲವು ಬಾರಿ ಯೋಚಿಸಿ ಮುನ್ನಡೆಯಬೇಕಾದ್ದು ನಮ್ಮ ಮುಂದಿರುವ ಅತಿದೊಡ್ಡ ಸವಾಲು..!
6 - ಥಿಯೇಟರ್, ಮಾರ್ಕೆಟ್, ಶಾಪಿಂಗ್ ವೇಳೆ ಹುಷಾರು..!

ಅನ್ಲಾಕ್ ಪ್ರಕ್ರಿಯೆ ಮುಂದುವರೆದ ಕಾರಣ, ಥಿಯೇಟರ್ಗಳು ಓಪನ್ ಆಗಿವೆ, ಮಾರ್ಕೆಟ್ಗಳಂತೂ ಜನರಿಂದ ಗಿಜಿಗುಡುತ್ತಿವೆ. ಮಾಲ್ಗಳೂ ಬಣ್ಣಗಳಿಂದ ಕಂಗೊಳಿಸುತ್ತಿವೆ. ಮುಂದಿನ ತಿಂಗಳು ಕ್ರಿಸ್ ಮಸ್ ಅಬ್ಬರ ಬೇರೆ ಶುರುವಾಗಲಿದೆ. ಇಂಥಾ ಹೊತ್ತಲ್ಲಿ ನೂರಾರು ಜನರು ಒಂದೆಡೆ ಸೇರುವ ಪ್ರದೇಶಗಳು ಕೋವಿಡ್ ಹಾಟ್ ಸ್ಪಾಟ್ ಆಗೋದ್ರಲ್ಲಿ ಸಂಶಯವೇ ಬೇಡ.. ಅದರಲ್ಲೂ ಚಳಿಗಾಲದ ಹೊತ್ತಲ್ಲಿ ಕೊರೊನಾ ವೈರಾಣು ಬಹುಕಾಲ ಉಳಿಯುವ ಕಾರಣ, ಥಿಯೇಟರ್ ಹಾಗೂ ಮಾರ್ಕೆಟ್ನ ಜನನಿಬಿಡ ಪ್ರದೇಶಗಳು ಸೋಂಕು ಹರಡುವಿಕೆಗೆ ಹೇಳಿ ಮಾಡಿಸಿದ ತಾಣಗಳು..!
ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಂಬ ತ್ರಿಮೂರ್ತಿಗಳನ್ನು ಮರೆತರೆ, ಜನನಿಬಿಡ ಪ್ರದೇಶಗಳಲ್ಲಿ ಉಳಿಗಾಲವೇ ಇಲ್ಲ ಅನ್ನೋದನ್ನು ನಾವು ಮರೆಯಲೇ ಬಾರದು..! ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶೇಷ ಕೇಕ್ ಮೇಳಕ್ಕೆ ಹೋದರೆ, ವಾಪಸ್ ಬರುವಾಗ ಕೇಕ್ ಜೊತೆಗೆ ಕೊರೊನಾ ಫ್ರೀಯಾಗಿ ಮನೆಗೆ ಬಂದಿರುತ್ತೆ..!
7 - ಪ್ರವಾಸಿ ತಾಣ, ಸಮಾವೇಶಗಳು ಡೇಂಜರ್..!

ಊರಿನಿಂದ ಊರಿಗೆ ಹೋಗೋದು, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡೋದು, ಹೊಟೇಲ್ಗಳಲ್ಲಿ ಉಳಿಯೋದು, ಸಾವಿರಾರು ಜನರು ಸೇರುವ ಚುನಾವಣಾ ಸಮಾವೇಶಗಳಲ್ಲಿ, ಪ್ರಚಾರ ಸಭೆಗಳಲ್ಲಿ ಭಾಗಿಯಾಗೋದು.. ಹೀಗೆ ಹತ್ತು ಹಲವು ಸಾಮಾಜಿಕ ಭಾಗವಹಿಸುವಿಕೆಯ ಕಾರ್ಯಕ್ರಮಗಳು ಕೊರೊನಾಗೆ ಅತ್ಯಂತ ಪ್ರಿಯವಾದ ತಾಣಗಳು..!
ಹೌದು.. ಒಂದು ಉಪಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಮತ್ತೊಂದು ಉಪ ಚುನಾವಣೆ ಬರ್ತಿದೆ. ಇದಕ್ಕಾಗಿ ಸಮಾವೇಶದ ಹೆಸರಲ್ಲಿ ಜನರು ಒಂದೆಡೆ ಸೇರೋದು ಮಾಮೂಲು. ಚಳಿಗಾಲದಲ್ಲಿ, ಕೊರೊನಾ ಆರ್ಭಟ ಇರುವ ವೇಳೆ ಇದು ನಿಜಕ್ಕೂ ಅಪಾಯಕಾರಿ..! ಚುನಾವಣೆಯಲ್ಲಿ ನಿಮ್ಮ ನೆಚ್ಚಿನ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜೊತೆಗೆ ಕೊರೊನಾ ಮಾರಿಯನ್ನೂ ಆಯ್ಕೆ ಮಾಡಿಕೊಂಡಿರುತ್ತೀರಿ..! ಇನ್ನು ಮಕ್ಕಳಿಗೆ ರಜೆ ಇದೆ ಅನ್ನೋ ಕಾರಣಕ್ಕೆ ಚಳಿಗಾಲಕ್ಕೆ ಹೇಳಿ ಮಾಡಿಸಿದ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಕೂಡಾ ಅಪಾಯಕಾರಿಯೇ..! ಚಳಿಗಾಲದ ಪ್ರವಾಸದ ಅನುಭವದ ಜೊತೆಗೆ ಕೊರೊನಾ ಮಾರಿಯನ್ನೂ ಮನೆಗೆ ತರಬೇಕಾಗುತ್ತೆ..!
from India & World News in Kannada | VK Polls https://ift.tt/2IQABth