ಕೊಣಾಜೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆ: ಆತ್ಮೀಯರಿಂದಲೇ ಕೊಲೆ, ನಾಲ್ವರ ಸೆರೆ

ಕೊಣಾಜೆ: ಪಾವೂರು ಗ್ರಾಮದ ಮಲಾರ್‌ ಅಕ್ಷರ ನಗರದ ಮನೆಯಿಂದ ನಾಪತ್ತೆಯಾಗಿದ್ದ ಪಲ್ಲಿಯಬ್ಬ ಯಾನೆ (71) ಶವವಾಗಿ ಪತ್ತೆಯಾಗಿದ್ದು, ಹಣದ ವ್ಯವಹಾರದಿಂದ ಆತ್ಮೀಯರಿಂದಲೇ ಕೊಲೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಪಲ್ಲಿಯಬ್ಬರ ಮೃತದೇಹವನ್ನು ಇರಾ ಪದವು ಸಮೀಪದ ಗುಡ್ಡವೊಂದರಲ್ಲಿ ಹೂತು ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಹಂಝ ಬೋಳಿಯಾರ್‌(45) ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದ್ದು, ಪ್ರಮುಖ ಆರೋಪಿಯ ಬಳಿಕ ನಿಖರ ಮಾಹಿತಿ ಬಯಲಾಗಲಿದೆ. ಪಲ್ಲಿಯಬ್ಬ ಗುರುವಾರ ಸಂಜೆ 7.30ಕ್ಕೆ ಮನೆಯಿಂದ ಹೊರಟವರು ಬಳಿಕ ನಾಪತ್ತೆಯಾಗಿದ್ದು, ಆ ಕಾರಣದಿಂದ ಸಹೋದರ ಅಬ್ಬಾಸ್‌ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ಶುಕ್ರವಾರ ಮಧ್ಯಾಹ್ನದವರೆಗೂ ಅವರ ಮೊಬೈಲ್‌ ರಿಂಗ್‌ ಆಗುತ್ತಿತ್ತು. ಬಳಿಕ ಸ್ವಿಚ್ಡ್ ಆಫ್‌ ಆಗಿತ್ತು. ಅದರಿಂದ ಸಂಶಯಗೊಂಡ ಪಲ್ಲಿಯಬ್ಬ ಅವರ ಸಂಬಂಧಿಕರು ಇಬ್ಬರು ಶಂಕಿತರನ್ನು ವಿಚಾರಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಭಾನುವಾರ ಮುಂಜಾನೆ ಇರಾ ಪ್ರದೇಶದ ಪದವು ಬಳಿ ಶವ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ಬಂಟ್ವಾಳ ಹಾಗೂ ಕೊಣಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ ಬೋಳಿಯಾರ್‌ನ ಹಂಝ ಎಂಬಾತ ಪಲ್ಲಿಯಬ್ಬರಿಂದ 15 ಸಾವಿರ ರೂ. ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸದಿರುವುದರಿಂದ ಆ ಬಗ್ಗೆ ಹಲವು ಬಾರಿ ಮಾತಿನ ಚಕಮಕಿ ನಡೆದಿದ್ದು, ಗುರುವಾರ ಸಂಜೆ ಹಣ ಹಿಂತಿರುಗಿಸುವುದಾಗಿ ತಿಳಿಸಿದ್ದರಿಂದ ಅಝರ್‌ ಎಂಬಾತನ ಆಟೋ ರಿಕ್ಷಾದಲ್ಲಿ ಬೋಳಿಯಾರ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಆರೋಪಿಗಳಾದ ಸಜಿಪನಡುವಿನ ಅಮೀರ್‌, ಸರ್ಫಾಝ್‌ ಹಾಗೂ ಅಲ್ತಾಫ್‌ ಜತೆ ಸೇರಿಕೊಂಡು ಪಲ್ಲಿಯಬ್ಬರ ಕುತ್ತಿಗೆಯನ್ನು ಶಾಲಿನಿಂದ ಬಿಗಿದು ಕೊಲೆ ಮಾಡಿದ್ದಾರೆ. ಶವ ಹೂಳಲು ಹಾರೆ, ಪಿಕ್ಕಾಸು ಇಲ್ಲದಿರುವುದರಿಂದ ಮರುದಿನ ತನಕ ಕಾದು ನಿರ್ಜನ ಪ್ರದೇಶವಾಗಿರುವ ಇರಾ ಪದವಿನಲ್ಲಿ ಶವ ಹೂತು ಏನೂ ಗೊತ್ತಿಲ್ಲದ್ದವರಂತೆ ಮರಳಿದ್ದರು. ಆಟೋ ಚಾಲಕ ಅಝರ್‌ನನ್ನು ವಶಕ್ಕೆ ಪಡೆದ ಪೊಲೀಸರು ಕೇವಲ ಒಂದು ದಿನದಲ್ಲಿ ಒಟ್ಟು ನಾಲ್ಕು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.


from India & World News in Kannada | VK Polls https://ift.tt/2Jk8an8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...