ಕಂಬಳ ಕ್ಷೇತ್ರದ ನಾಲ್ವರಿಗೆ ಪ್ರಶಸ್ತಿಯ ಗರಿ: ಕರಾವಳಿಯ ಕ್ರೀಡಾಪಟುಗಳಿಗೆ ಒಲಿದ ಏಕಲವ್ಯ, ಕ್ರೀಡಾ ರತ್ನ

ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಅತ್ಯುತ್ತಮ ಸಾಧನೆ ಮೆರೆದ ನಾಲ್ವರಿಗೆ ರಾಜ್ಯ ಸರಕಾರ ಕ್ರೀಡಾ ರತ್ನ ಘೋಷಣೆ ನೀಡಿದ್ದು, ಕಂಬಳಾಭಿಮಾಗಳಲ್ಲಿ ಸಂಭ್ರಮ ಮನೆ ಮಾಡಿದೆ. ಕ್ರೀಡೆಯ ಪೋಷಕ ಸುರತ್ಕಲ್‌ ಪ್ರಭು ಮನೆತನದ ಅವರಿಗೆ (2017), ಓಟಗಾರರಾದ (2017), (2018), ಪಣಪಿಲ ಪ್ರವೀಣ್‌ ಕೋಟ್ಯಾನ್‌ (2019) ಪ್ರಶಸ್ತಿಗೆ ಭಾಜನರಾದವರು. ಗೋಪಾಲಕೃಷ್ಣ ಪ್ರಭುಕರಾವಳಿಯ ಕಂಬಳ ಎಂದ ಕೂಡಲೇ ನೆನಪಿಗೆ ಬರುವ ಹೆಸರು ಸುರತ್ಕಲ್‌ನ ಪ್ರಭು ಮನೆತನ. ಕಂಬಳದ ನೇಗಿಲು ಕಿರಿಯ, ನೇಗಿಲು ಹಿರಿಯ, ಅಡ್ಡ ಹಲಗೆ, ಹಗ್ಗ ಹಿರಿಯ, ಹಗ್ಗ ಕಿರಿಯ, ಕನೆ ಹಲಗೆ 6 ವಿಭಾಗದಲ್ಲೂ ಪ್ರಶಸ್ತಿ ಪಡೆದ ಹೆಗ್ಗಳಿಕೆ ಈ ಮನೆತನದ್ದು. ಗೋಪಾಲಕೃಷ್ಣ ಪ್ರಭುಗಳು ಸುರತ್ಕಲ್‌ ರಾಮ-ಲಕ್ಷ್ಮಣ ಜೋಡುಕರೆ ಕಂಬಳವನ್ನು ಸಂಘಟಿಸಿದವರು. ಪ್ರಭುಗಳ ಜತೆ ಕೋಣಗಳು ಎಂದರೆ ಬಹುಮಾನ ಖಚಿತ ಎಂಬ ಮಟ್ಟಿಗೆ ಖ್ಯಾತಿ ಪಡೆದಿತ್ತು. ಅಶ್ವತ್ಥಪುರ ಶ್ರೀನಿವಾಸ ಗೌಡ2019ರ ಫೆ.1ರಂದು ನಡೆದ ಐಕಳ ಕಂಬಳ ಕರೆಯಲ್ಲಿ 100 ಮೀಟರ್‌ ದೂರವನ್ನು 9.55 ಸೆಕೆಂಡ್‌ ಮೂಲಕ ಕ್ರಮಿಸಿ ಕಂಬಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಕಂಬಳದ ಹುಸೇನ್‌ ಬೋಲ್ಡ್‌ ಹೆಗ್ಗಳಿಕೆ ಪಾತ್ರರಾದವರು ಮಿಜಾರಿನ ಶ್ರೀನಿವಾಸ ಗೌಡ. ಈ ಸಾಧನೆ ಮೂಲಕ ಇವರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಶ್ರೀನಿವಾಸ್‌ ಗೌಡ ಅವರು ಕಂಬಳ ಅಕಾಡೆಮಿಯಲ್ಲಿ 2011ರಲ್ಲಿ ಓಟದ ತರಬೇತಿಯನ್ನು ಪಡೆದು, ನೇಗಿಲು ಕಿರಿಯ-ಹಿರಿಯ, ಹಗ್ಗ ಹಿರಿಯ-ಕಿರಿಯ ವಿಭಾಗದಲ್ಲಿ ಕೋಣಗಳನ್ನು ಓಡಿಸಿ ಶ್ಲಾಘನೀಯ ಸಾಧನೆ ಮಾಡಿದ್ದಾರೆ. 8 ವರ್ಷದಲ್ಲಿ 100ಕ್ಕೂ ಅಧಿಕ ಪದಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಕಂಬಳದ ಹುಸೇನ್‌ ಬೋಲ್ಟ್‌ ಶ್ರೀನಿವಾಸ್‌ ಗೌಡ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜ್ಜು ಟ್ವೀಟ್‌ ಮಾಡಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ ಗೆ ಆಹ್ವಾನಿಸಿದ್ದರು. ಆದರೆ ಕಂಬಳ ಸೀಸನ್‌ ಮುಗಿದ ಒಂದು ವಾರದಲ್ಲೇ ದೇಶಾದ್ಯಂತ ಕೋವಿಡ್‌ ಅಟ್ಟಹಾಸ ಮೆರೆದ ಕಾರಣ ಶ್ರೀನಿವಾಸಗೌಡ ತರಬೇತಿಗೆ ಹಿನ್ನಡೆಯಾಗಿತ್ತು. ಹಕ್ಕೇರಿ ಸುರೇಶ್‌ ಶೆಟ್ಟಿಬೆಳ್ತಂಗಡಿ ತಾಲೂಕಿನ ಒಕ್ಕಾಡಿಗೊಳಿ ಅಕ್ಕೇರಿ ಸುರೇಶ್‌ ಎಂ. ಶೆಟ್ಟಿ 2010 ಇಸವಿಯಲ್ಲಿ ಕಂಬಳ ಕೋಣದ ಓಟದಲ್ಲಿ ಭಾಗವಹಿಸಿದ್ದರು. ನೇಗಿಲು ಹಿರಿಯ ವಿಭಾಗದಲ್ಲಿ 2014ರಿಂದ 6 ವರ್ಷ ಡಬಲ್‌ ಹ್ಯಾಟ್ರಿಕ್‌, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದವರು. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಇವರು ಸ್ವತಃ ಪರಿಶ್ರಮದಿಂದ ಕೋಣಗಳನ್ನು ಸಾಕಿ, ಉಳುಮೆ ನಡೆಸಿ ಕಂಬಳದಲ್ಲಿ ತೊಡಗಿಸಿಕೊಂಡಿದ್ದಾರೆ. ಬಂಗಾಡಿ ಕಂಬಳದಲ್ಲಿ 9.39 ಸೆಕೆಂಡ್‌ನಲ್ಲಿ 100ಮೀಟರ್‌ ಕ್ರಮಿಸಿದ ಸಾಧನೆ ಇವರದು. ಪಣಪಿಲ ಪ್ರವೀಣ್‌ ಕೋಟ್ಯಾನ್‌2011ರಲ್ಲಿ ಕಂಬಳಕ್ಕೆ ಎಂಟ್ರಿಯಾದ ಪಣಪಿಲ ಪ್ರವೀಣ್‌ ಕೋಟ್ಯಾನ್‌ ಅವರು ಮೂಡುಬಿದಿರೆ ತಾಲೂಕಿನವರು. ನೇಗಿಲು ಕಿರಿಯ 1 ವರ್ಷ, ಹಗ್ಗ ಕಿರಿಯ 1ವರ್ಷ, ಹಗ್ಗ ಹಿರಿಯ ವಿಭಾಗದಲ್ಲಿ ಸತತ 3 ವರ್ಷ ಸೇರಿದಂತೆ ಒಟ್ಟು 5ವರ್ಷ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದವರು. ಗ್ರಾಮೀಣ ಪ್ರತಿಭೆಯಾಗಿರುವ ಇವರು ಕೃಷಿ ಚಟುವಟಿಕೆಯಲ್ಲಿ ಬೆಳೆದು ಬಂದು, ಸಾಮಾಜಿಕ ಚಟುವಟಿಕೆಯಲ್ಲೂ ಭಾಗಿಯಾದವರು.


from India & World News in Kannada | VK Polls https://ift.tt/3efQ3KF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...