ಅಂತಾರಾಜ್ಯ ಬಸ್ ಸಂಚಾರ ಆರಂಭವಾದ್ರೂ ಗ್ರಾಮೀಣ ಪ್ರದೇಶಕ್ಕಿಲ್ಲ ಸಾರಿಗೆ ಭಾಗ್ಯ..!

ಗಿರೀಶ್ ಎಸ್‌. ಕಲ್ಗುಡಿ ತುಮಕೂರು: ಕೊರೊನಾ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದರೂ ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸಂಪೂರ್ಣವಾಗಿ ಬಸ್‌ಗಳು ಓಡುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರು ಜಿಲ್ಲಾ ಹಾಗೂ ತಾಲೂಕು ಕೇಂದ್ರಕ್ಕೆ ಪ್ರಯಾಣಿಸಲು ಪರದಾಡುವಂತಾಗಿದೆ. ಕೊರೊನಾ ಲಾಕ್‌ಡೌನ್‌ ಸಂಪೂರ್ಣವಾಗಿ ತೆರವುಗೊಂಡಿದ್ದು, ಅಂತಾರಾಜ್ಯಕ್ಕೂ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ಇನ್ನೂ ಮೀನಮೇಷ ಎಣಿಸುತ್ತಿದೆ.ಉದಾಹರಣೆಗೆ ಹೇಳಬೇಕೆಂದರೆ, ತುಮಕೂರು ಜಿಲ್ಲೆಯಲ್ಲಿ ಕೊರೊನಾಗಿಂತ ಮೊದಲು ಗ್ರಾಮೀಣ ಹಾಗೂ ನಗರ ಸಂಚಾರ ಸೇರಿ 620 ಬಸ್‌ಗಳ ಸಂಚಾರವಿತ್ತು. ಆದರೆ, ಈಗ 441 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇನ್ನು ಗ್ರಾಮೀಣ ಪ್ರದೇಶಗಳಿಗೆ ಕೊರೊನಾಗಿಂತ ಮೊದಲು 243 ಬಸ್‌ಗಳ ಸಂಚಾರವಿತ್ತು. ಆದರೆ, ಪ್ರಸ್ತುತ 149 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಶೇ.50 ರಷ್ಟಾದರೂ ಬಸ್‌ಗಳು ಆರಂಭವಾಗಿಲ್ಲ.

ಗ್ರಾಮೀಣ ಪ್ರದೇಶಕ್ಕೆ ಸಂಪೂರ್ಣವಾಗಿ ಬಸ್‌ ಆರಂಭಿಸಲು ಇನ್ನೂ ಸರಕಾರದಿಂದ ಆದೇಶ ಬಂದಿಲ್ಲ. ಅಲ್ಲದೇ ಕೊರೊನಾಗಿಂತ ಮೊದಲು ಪ್ರಯಾಣಿಕರು ಇರುತ್ತಿದ್ದರು. ಆದರೆ, ಈಗ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ.


ಅಂತಾರಾಜ್ಯ ಬಸ್ ಸಂಚಾರ ಆರಂಭವಾದ್ರೂ ಗ್ರಾಮೀಣ ಪ್ರದೇಶಕ್ಕಿಲ್ಲ ಸಾರಿಗೆ ಭಾಗ್ಯ..!

ಗಿರೀಶ್ ಎಸ್‌. ಕಲ್ಗುಡಿ
ತುಮಕೂರು:

ಕೊರೊನಾ ಕಾರ್ಮೋಡ ನಿಧಾನವಾಗಿ ಸರಿಯುತ್ತಿದ್ದರೂ ಗ್ರಾಮೀಣ ಪ್ರದೇಶಕ್ಕೆ ಇನ್ನೂ ಸಂಪೂರ್ಣವಾಗಿ ಬಸ್‌ಗಳು ಓಡುತ್ತಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರು ಜಿಲ್ಲಾ ಹಾಗೂ ತಾಲೂಕು ಕೇಂದ್ರಕ್ಕೆ ಪ್ರಯಾಣಿಸಲು ಪರದಾಡುವಂತಾಗಿದೆ. ಕೊರೊನಾ ಲಾಕ್‌ಡೌನ್‌ ಸಂಪೂರ್ಣವಾಗಿ ತೆರವುಗೊಂಡಿದ್ದು, ಅಂತಾರಾಜ್ಯಕ್ಕೂ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಪ್ರಯಾಣಿಕರಿಲ್ಲ ಎಂಬ ಕಾರಣಕ್ಕೆ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ಇನ್ನೂ ಮೀನಮೇಷ ಎಣಿಸುತ್ತಿದೆ.

ಉದಾಹರಣೆಗೆ ಹೇಳಬೇಕೆಂದರೆ, ತುಮಕೂರು ಜಿಲ್ಲೆಯಲ್ಲಿ ಕೊರೊನಾಗಿಂತ ಮೊದಲು ಗ್ರಾಮೀಣ ಹಾಗೂ ನಗರ ಸಂಚಾರ ಸೇರಿ 620 ಬಸ್‌ಗಳ ಸಂಚಾರವಿತ್ತು. ಆದರೆ, ಈಗ 441 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇನ್ನು ಗ್ರಾಮೀಣ ಪ್ರದೇಶಗಳಿಗೆ ಕೊರೊನಾಗಿಂತ ಮೊದಲು 243 ಬಸ್‌ಗಳ ಸಂಚಾರವಿತ್ತು. ಆದರೆ, ಪ್ರಸ್ತುತ 149 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಶೇ.50 ರಷ್ಟಾದರೂ ಬಸ್‌ಗಳು ಆರಂಭವಾಗಿಲ್ಲ.



​ತಪ್ಪದ ಗ್ರಾಮೀಣ ಜನರ ಪರದಾಟ
​ತಪ್ಪದ ಗ್ರಾಮೀಣ ಜನರ ಪರದಾಟ

ಕೊರೊನಾ ಭಯದಿಂದ ಮನೆಯಲ್ಲಿದ್ದವರು ಈಗ ವ್ಯಾಪಾರ-ವಹಿವಾಟು ಕಡೆ ಮುಖ ಮಾಡಿದ್ದಾರೆ. ಕೊರೊನಾದಿಂದ ನನೆಗುದಿಗೆ ಬಿದ್ದಿದ್ದ ಜಮೀನು, ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸೌಲಭ್ಯಗಳ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಅವರೆಲ್ಲರಿಗೂ ಈಗ ಬಸ್‌ ಸಮಸ್ಯೆ ಕಾಡತೊಡಗಿದೆ. ಸ್ವಂತ ಬೈಕ್‌ ಮತ್ತು ಕಾರು ಇದ್ದವರಿಗೆ ಈ ಸಮಸ್ಯೆ ಕಂಡುಬಂದಿಲ್ಲ. ಆದರೆ, ಬಸ್‌ಗಳನ್ನೇ ಅವಲಂಬಿಸಿರುವವರು ಪಟ್ಟಣಕ್ಕೆ ಬರಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.



ಬಾಡಿಗೆ ವಾಹನಗಳ ಅವಲಂಬನೆ
ಬಾಡಿಗೆ ವಾಹನಗಳ ಅವಲಂಬನೆ

ಬಸ್‌ಗಳಿಲ್ಲದೆ ಆರೋಗ್ಯ ಸಮಸ್ಯೆ ಎದುರಿಸುವವರು, ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರು ವಿಧಿ ಇಲ್ಲದೆ ಬಾಡಿಗೆ ವಾಹನ ಅವಲಂಬಿಸುವಂತಾಗಿದೆ. ಇನ್ನು ಖಾಸಗಿ ಬಸ್‌ಗಳು ಗ್ರಾಮೀಣ ಭಾಗದಲ್ಲಿ ಸಂಚಾರ ಆರಂಭಿಸಿವೆಯಾದರೂ ವಿರಳ ಸಂಖ್ಯೆಯಲ್ಲಿವೆ. ಹಾಗಾಗಿ ಬೆಳಗ್ಗೆ ಬಸ್‌ ಹತ್ತಿ ಹೋದರೆ ಮತ್ತೆ ಅದೇ ಬಸ್‌ ತಮ್ಮ ಗ್ರಾಮಕ್ಕೆ ತೆರಳುವ ಸಮಯಕ್ಕೇ ಬಸ್‌ ಹಿಡಿಯಬೇಕಾಗಿದೆ. ಹೀಗಾಗಿ ಇಡೀ ದಿನ ಬಸ್ಸಿಗಾಗಿಯೇ ಕಾಯುವ ಸ್ಥಿತಿಯೂ ನಿರ್ಮಾಣವಾಗಿದೆ.

ಇನ್ನು ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ಸಂಕಷ್ಟ ಎದುರಿಸುವಂತಾಗಿದೆ. ಹೂ, ಹಣ್ಣು, ತರಕಾರಿ ಬೆಳೆಗಳನ್ನು ಬಸ್‌ಗಳ ಮೂಲಕ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದರು. ಆದರೆ, ಈಗ ಬಸ್‌ಗಳಿಲ್ಲದೆ ಬೈಕ್‌ಗಳಲ್ಲಿಯೇ ಮಾರುಕಟ್ಟೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ.



ವಿದ್ಯಾರ್ಥಿಗಳ ಪರದಾಟ ಕೇಳೋರಿಲ್ಲ..
ವಿದ್ಯಾರ್ಥಿಗಳ ಪರದಾಟ ಕೇಳೋರಿಲ್ಲ..

ಕೊರೊನಾ ಸೂತಕದ ಛಾಯೆ ನಡುವೆಯೂ ಕಾಲೇಜುಗಳು ಆರಂಭವಾಗಿವೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಬಸ್‌ಗಳು ಇಲ್ಲದೆ ಕಾಲೇಜಿಗೆ ತೆರಳಲು ಸಂಕಷ್ಟ ಅನುಭವಿಸುವಂತಾಗಿದೆ. ಕೊರೊನಾಗಿಂತಲೂ ಮೊದಲು ಗಂಟೆಗೊಂದಂತಾದರೂ ಬಸ್‌ಗಳು ಗ್ರಾಮೀಣ ಪ್ರದೇಶಗಳತ್ತ ಸಂಚರಿಸುತ್ತಿದ್ದವು. ಆದರೆ, ಈಗ ಬೆಳಗ್ಗೆ ಒಮ್ಮೆ ಬಸ್‌ ಬಂದರೆ ಮತ್ತೆ ಸಂಜೆಯೇ ಆ ಮಾರ್ಗದಲ್ಲಿ ತೆರಳುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಕಾಯುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕಾಲೇಜುಗಳಿಗೆ ತೆರಳುವ ಉತ್ಸುಕತೆಯನ್ನೇ ದೂರಮಾಡಿಕೊಂಡಿದ್ದಾರೆ.



​ದೂರದ ಊರುಗಳಿಗೆ ಬಸ್‌ ಇಲ್ಲ
​ದೂರದ ಊರುಗಳಿಗೆ ಬಸ್‌ ಇಲ್ಲ

ನಗರದಿಂದ ದೂರದ ಊರುಗಳಿಗೆ ಬಸ್‌ಗಳ ಸಂಚಾರ ಇಲ್ಲವೇ ಇಲ್ಲ. ಪ್ರಯಾಣಿಕರು ಬಸ್‌ಗಳನ್ನು ಬಳಸುತ್ತಿಲ್ಲ. ಈಗಾಗಲೇ ಬಹುತೇಕ ಎಲ್ಲರೂ ಬೈಕ್‌ಗಳನ್ನು ಹೊಂದಿದ್ದಾರೆ. ಹಾಗಾಗಿ ಪ್ರಯಾಣಿಕರಿಲ್ಲದೇ ಬಸ್‌ಗಳ ಸಂಚಾರ ಆರಂಭಿಸುವುದು ಕಷ್ಟ ಎನ್ನುವುದು ಸಾರಿಗೆ ಇಲಾಖೆಯ ಅಭಿಪ್ರಾಯ.

'ಗ್ರಾಮೀಣ ಪ್ರದೇಶಕ್ಕೆ ಸಂಪೂರ್ಣವಾಗಿ ಬಸ್‌ ಆರಂಭಿಸಲು ಇನ್ನೂ ಸರಕಾರದಿಂದ ಆದೇಶ ಬಂದಿಲ್ಲ. ಅಲ್ಲದೇ ಕೊರೊನಾಗಿಂತ ಮೊದಲು ಪ್ರಯಾಣಿಕರು ಇರುತ್ತಿದ್ದರು. ಆದರೆ, ಈಗ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಗ್ರಾಮೀಣ ಪ್ರದೇಶಕ್ಕೆ ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಹಂತ ಹಂತವಾಗಿ ಬಸ್‌ಗಳನ್ನು ಆರಂಭಿಸಲಾಗುವುದು' ಎಂದು ತುಮಕೂರು ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಸಿ ಕೆ.ಎಸ್‌. ಬಸವರಾಜ್ ಮಾಹಿತಿ ನೀಡಿದ್ದಾರೆ.





from India & World News in Kannada | VK Polls https://ift.tt/2HC25SI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...