ಸರಳ ದಸರಾ ಆಚರಣೆಯಲ್ಲೂ ಭ್ರಷ್ಟಾಚಾರ ನಡೆದಿದೆ: ನಂಜರಾಜ ಅರಸ್ ಆರೋಪ

ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಆದ ಖರ್ಚು - ವೆಚ್ಚದ ಲೆಕ್ಕ ನೀಡಿದ ಮರು ದಿನವೇ ವಿವಾದ ಕೇಳಿಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ನೀಡಿದ ಲೆಕ್ಕದ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಇತಿಹಾಸ ತಜ್ಞ ಪ್ರೊ. , ಆರೋಪ ಮಾಡಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಸರಳ ದಸರಾ ಹೆಸರಿನಲ್ಲಿ ಲೂಟಿ ನಡೆದಿದೆ ಎಂದು ನಂಜರಾಜ ಅರಸ್ ಆರೋಪಿಸಿದ್ದಾರೆ. ಸರಳ ಆಚರಣೆಯಲ್ಲೇ ಇಷ್ಟೊಂದು ಲೂಟಿ ನಡೆದರೆ, ಅದ್ಧೂರಿ ದಸರಾ ವೇಳೆ ಇನ್ನೆಷ್ಟು ಲೂಟಿ ಮಾಡಬಹುದು ಎಂದು ಸವಾಲೆಸೆದಿದ್ದಾರೆ. ಇನ್ನು ಸರ್ಕಾರಿ ಸ್ವಾಮ್ಯದಲ್ಲಿರುವ ಅರಮನೆ ಒಳಗೆ ನಡೆದ ದಸರಾಗೆ ಇಷ್ಟೊಂದು ಖರ್ಚು ಮಾಡಬೇಕಿತ್ತೇ ಎಂದೂ ಅರಸ್ ಪ್ರಶ್ನಿಸಿದ್ಧಾರೆ. ಮೈಸೂರು ಅರಮನೆ ಎದುರು ವೇದಿಕೆ ನಿರ್ಮಾಣಕ್ಕೆ 41 ಲಕ್ಷ ಏಕೆ ಖರ್ಚಾಯ್ತು ಎಂದು ಪ್ರಶ್ನಿಸಿರುವ ನಂಜರಾಜ ಅರಸ್, ಸರ್ಕಾರಿ ಸ್ವಾಮ್ಯದ ಚಂದನ ವಾಹಿನಿಗೆ 6 ಲಕ್ಷ ಕೊಟ್ಟಿದ್ದಾರೆ. ಚಂದನ ವಾಹಿನಿಯಲ್ಲಿ ಲೈವ್ ಕೊಟ್ಟರೂ ಲೈವ್ ಸ್ಟ್ರೀಮಿಂಗ್‌ಗಾಗಿ ಪ್ರತ್ಯೇಕ 5 ಲಕ್ಷ ಕೊಟ್ಟಿದ್ದಾರೆ‌ ಎಂದು ಅರಸ್ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸುತ್ತಮುತ್ತ ನುಂಗು ಬಾಕರಿದ್ದಾರೆ ಎಂದು ಆರೋಪಿಸಿದ ನಂಜರಾಜ ಅರಸ್, ಜೇನುಗೂಡಿಗೆ ಕೈ ಹಾಕಿ ಡೆಟಾಲ್‌ನಿಂದ ಕೈ ತೊಳೆದುಕೊಳ್ಳೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಭಾನುವಾರವಷ್ಟೇ ದಸರಾ ಖರ್ಚು ವೆಚ್ಚಗಳ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸರಳ ದಸರಾಗೆ ಖರ್ಚಾಗಿದ್ದು ಕೇವಲ 2.91 ಕೋಟಿ ಎಂದು ಮಾಹಿತಿ ನೀಡಿದ್ದರು. ಬಿಡುಗಡೆಯಾದ ಹಣದಲ್ಲಿ ಹತ್ತು ಕೋಟಿ ಉಳಿತಾಯವಾಗಿದೆ ಎಂದು ಅವರು ಲೆಕ್ಕಾಚಾರ ನೀಡಿದ್ದರು.


from India & World News in Kannada | VK Polls https://ift.tt/34N0nGF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...