ರಮೇಶ್ ಜಾರಕಿಹೊಳಿ ಒತ್ತಡ ತಂತ್ರ, ಬಿಜೆಪಿಗೆ ತಲೆನೋವಾದ ಪರ್ಯಾಯ ಶಕ್ತಿ ಕೇಂದ್ರ!

ಆಪರೇಷನ್ ಕಮಲ ದೇಶದಾದ್ಯಂತ ಸದ್ದು ಮಾಡಿದ್ದ ಕರ್ನಾಟಕದ ಮಹತ್ವದ ರಾಜಕೀಯದ ಪಲ್ಲಟ. ಈ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಹೆಸರು ರಮೇಶ್ ಜಾರಕಿಹೊಳಿ. ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‌ನಲ್ಲಿದ್ದುಕೊಂಡು ಗೇಮ್ ಪ್ಲ್ಯಾನ್ ರೂಪಿಸಿದ್ದ ಸಿದ್ದರಾಮಯ್ಯ ಅವರ ಮಾಜಿ ಶಿಷ್ಯ ರಮೇಶ್, ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿನ ಸಿಟ್ಟಿನಿಂದ ತಾನೂ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಲ್ಲದೆ ಕಾಂಗ್ರೆಸ್ ಹಾಗು ಜೆಡಿಎಸ್‌ ಪಕ್ಷದ 17 ಮಂದಿಯನ್ನು ಪಕ್ಷಾಂತರ ಮಾಡಿಸುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಮಹತ್ವದ್ದು. ಕಾಂಗ್ರೆಸ್‌ನಲ್ಲಿದ್ದು ಪರ್ಯಾಯ ಶಕ್ತಿ ಕೇಂದ್ರದ ಮೂಲಕ ಸದ್ದು ಮಾಡಿದ್ದ ರಮೇಶ್ ಜಾರಕಿಹೊಳಿ ಇದೀಗ ಬಿಜೆಪಿಯಲ್ಲಿದ್ದುಕೊಂಡು ಕಮಲ ಪಾಳಯಕ್ಕೂ ಬಿಸಿ ಮಟ್ಟಿಸಲು ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಸಾಹುಕಾರ ಶಕ್ತಿ ಕೇಂದ್ರ ಬಿಜೆಪಿ ರಾಜ್ಯ ನಾಯಕರಿಗೆ ತಲೆನೋವು ಸೃಷ್ಟಿಸುತ್ತಿದೆ. ಹಾಗಾದ್ರೆ ಸಾಹುಕಾರ ಹೂಡಿದ ಪ್ಲ್ಯಾನ್ ಏನು?

ಕಾಂಗ್ರೆಸ್ ಮಾದರಿಯಲ್ಲಿ ಬಿಜೆಪಿಯಲ್ಲೂ ಪರ್ಯಾಯ ಶಕ್ತಿ ಕೇಂದ್ರ ರಚನೆ ಮಾಡಲು ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ ಪಡುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆ ಎಂಬುವುದು ಸದ್ಯದ ಕುತೂಹಲ.


ರಮೇಶ್ ಜಾರಕಿಹೊಳಿ ಒತ್ತಡ ತಂತ್ರ, ಬಿಜೆಪಿಗೆ ತಲೆನೋವಾದ ಪರ್ಯಾಯ ಶಕ್ತಿ ಕೇಂದ್ರ!

ಆಪರೇಷನ್ ಕಮಲ ದೇಶದಾದ್ಯಂತ ಸದ್ದು ಮಾಡಿದ್ದ ಕರ್ನಾಟಕದ ಮಹತ್ವದ ರಾಜಕೀಯದ ಪಲ್ಲಟ. ಈ ಸಂದರ್ಭದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಹೆಸರು ರಮೇಶ್ ಜಾರಕಿಹೊಳಿ. ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‌ನಲ್ಲಿದ್ದುಕೊಂಡು ಗೇಮ್ ಪ್ಲ್ಯಾನ್ ರೂಪಿಸಿದ್ದ ಸಿದ್ದರಾಮಯ್ಯ ಅವರ ಮಾಜಿ ಶಿಷ್ಯ ರಮೇಶ್, ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿನ ಸಿಟ್ಟಿನಿಂದ ತಾನೂ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಲ್ಲದೆ ಕಾಂಗ್ರೆಸ್ ಹಾಗು ಜೆಡಿಎಸ್‌ ಪಕ್ಷದ 17 ಮಂದಿಯನ್ನು ಪಕ್ಷಾಂತರ ಮಾಡಿಸುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಮಹತ್ವದ್ದು. ಕಾಂಗ್ರೆಸ್‌ನಲ್ಲಿದ್ದು ಪರ್ಯಾಯ ಶಕ್ತಿ ಕೇಂದ್ರದ ಮೂಲಕ ಸದ್ದು ಮಾಡಿದ್ದ ರಮೇಶ್ ಜಾರಕಿಹೊಳಿ ಇದೀಗ ಬಿಜೆಪಿಯಲ್ಲಿದ್ದುಕೊಂಡು ಕಮಲ ಪಾಳಯಕ್ಕೂ ಬಿಸಿ ಮಟ್ಟಿಸಲು ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಸಾಹುಕಾರ ಶಕ್ತಿ ಕೇಂದ್ರ ಬಿಜೆಪಿ ರಾಜ್ಯ ನಾಯಕರಿಗೆ ತಲೆನೋವು ಸೃಷ್ಟಿಸುತ್ತಿದೆ. ಹಾಗಾದ್ರೆ ಸಾಹುಕಾರ ಹೂಡಿದ ಪ್ಲ್ಯಾನ್ ಏನು?



​ಸಾಹುಕಾರ್ ಪರ್ಯಾಯ ಶಕ್ತಿ ಕೇಂದ್ರ!
​ಸಾಹುಕಾರ್ ಪರ್ಯಾಯ ಶಕ್ತಿ ಕೇಂದ್ರ!

ಹೌದು, ರಮೇಶ್ ಜಾರಕಿಹೊಳಿ ಪರ್ಯಾಯ ಶಕ್ತಿ ಕೇಂದ್ರ ರಚನೆ ಮಾಡುವಲ್ಲಿ ನಿಪುಣರು. ಕಾಂಗ್ರೆಸ್‌ನಲ್ಲಿದ್ದಾಗಲೂ ತಮ್ಮದೇ ಆದ ಬಣವನ್ನು ರಚನೆ ಮಾಡಿದ್ದರು. ಒಂದಿಷ್ಟು ಶಾಸಕರನ್ನು ತಮ್ಮ ಜೊತೆಗೆ ಸೇರಿಸಿಕೊಂಡು ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಒಡ್ಡಿದರು. ರಮೇಶ್ ಗೇಮ್ ಪ್ಲ್ಯಾನ್‌ನಿಂದ ಕಂಗಾಲಾಗಿದ್ದ ಸ್ವತಃ ಸಮ್ಮಿಶ್ರ ಸರ್ಕಾರದ ಸಿಎಂ ಎಚ್‌ಡಿ ಕುಮಾರಸ್ವಾಮಿ ರಮೇಶ್ ಜಾರಕಿಹೊಳಿ ಸಂಧಾನಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರು ಇದ್ದ ಸರ್ಕಾರಿ ನಿವಾಸಕ್ಕೆ ತಾವೇ ಬಂದು ಮಾತುಕತೆ ನಡೆಸಿದ್ದರು. ಆದರೆ ಯಾವುದೂ ಫಲಿಸಿರಲಿಲ್ಲ. ಡಿಕೆಶಿ ವಿರುದ್ಧ ಕೆಂಡಾಮಂಡಲರಾಗಿದ್ದ ರಮೇಶ್ ಕೊನೆಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ. ಆದರೆ ಬಿಜೆಪಿಯಲ್ಲೂ ರಮೇಶ್ ತನ್ನದೇ ಗುಂಪು ಕಟ್ಟಿಕೊಳ್ಳುತ್ತಿದ್ದಾರೆ. ಸಚಿವಾಕಾಂಕ್ಷಿಗಳ ಜೊತೆಗೆ ಪ್ರತ್ಯೇಕ ಸಭೆಯನ್ನು ನಡೆಸುತ್ತಿದ್ದಾರೆ.



​ಸಚಿವಾಕಾಂಕ್ಷಿಗಳ ಪರ ರಮೇಶ್ ಜಾರಕಿಹೊಳಿ ಲಾಬಿ
​ಸಚಿವಾಕಾಂಕ್ಷಿಗಳ ಪರ ರಮೇಶ್ ಜಾರಕಿಹೊಳಿ ಲಾಬಿ

ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಜಾರಕಿಹೊಳಿ 10 ಶಾಸಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ಕುತೂಹಲ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಬಿಜೆಪಿಯ ಕೆಲವು ಶಾಸಕರು ರಮೇಶ್ ಜೊರಕಿಹೊಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಾಸಕ ರಾಜೂಗೌಡ, ಡಾ. ಶಿವರಾಜ ಪಾಟೀಲ, ಪ್ರತಾಪ್‌ ಗೌಡ ಪಾಟೀಲ ಹಾಗೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಈ ಸಭೆಯಲ್ಲಿ ಭಾಗಿಯಾಗಿದ್ದರು. ಅದರಲ್ಲೂ ಪ್ರಮುಖವಾಗಿ ಸಚಿವಾಕಾಂಕ್ಷಿ ಸಿ.ಪಿ ಯೋಗೇಶ್ವರ್ ಕೂಡಾ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಸಚಿವ ಸ್ಥಾನದ ವಿಚಾರವಾಗಿ ರಮೇಶ್ ಜಾರಕಿಹೊಳಿ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.



​ಪ್ರತ್ಯೇಕ ಸಭೆ ನಡೆಸುವ ಮೂಲಕ ಒತ್ತಡ ತಂತ್ರ
​ಪ್ರತ್ಯೇಕ ಸಭೆ ನಡೆಸುವ ಮೂಲಕ ಒತ್ತಡ ತಂತ್ರ

ಈ ನಡುವೆ ರಮೇಶ್ ಜಾರಕಿಹೊಳಿ ವಲಸೆ ಬಂದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನೂ ಭೇಟಿ ಮಾಡಿ ಇದೇ ಬೇಡಿಕೆ ಇಟ್ಟಿದ್ದರು. ಈ ಮೂಲಕ ಒತ್ತಡ ತಂತ್ರವನ್ನು ರಮೇಶ್ ಜಾರಕಿಹೊಳಿ ಅನುಸರಿಸುತ್ತಿದ್ದಾರೆ. ಪಕ್ಷದಲ್ಲಿ ಮೂಲ ವರ್ಸಸ್ ವಲಸೆ ಗುಂಪುಗಳು ಸೃಷ್ಟಿಯಾಗಿದ್ದು ವಲಸೆ ಗುಂಪಿನ ನಾಯಕತ್ವ ರಮೇಶ್ ಜಾರಕಿಹೊಳಿ ಕೈಯಲ್ಲಿದೆ ಎಂದೇ ಹೇಳಲಾಗುತ್ತಿದೆ. ಈ ಗುಂಪಿನಲ್ಲಿ ಮೂಲಕ ಬಿಜೆಪಿಗರೂ ಹಾಗೂ ಬಿಎಸ್ ಯಡಿಯೂರಪ್ಪ ಆಪ್ತರೂ ಇದ್ದಾರೆ ಎಂಬುವುದು ಗಮನಾರ್ಹ ಸಂಗತಿ.



​ಕಾಂಗ್ರೆಸ್‌ನಲ್ಲಿ ನಡೆದ ಆಟ ಬಿಜೆಪಿಯಲ್ಲಿ ನಡೆಯುತ್ತಾ
​ಕಾಂಗ್ರೆಸ್‌ನಲ್ಲಿ ನಡೆದ ಆಟ ಬಿಜೆಪಿಯಲ್ಲಿ ನಡೆಯುತ್ತಾ

ಪ್ರತ್ಯೇಕ ಬಣ ರಚನೆ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪತನ ಆಗಲು ಕಾರಣರಾದರು. ಅದೇ ತಂತ್ರ ಬಿಜೆಪಿಯಲ್ಲಿ ನಡೆಯುತ್ತದಾ ಎಂಬುವುದು ಸದ್ಯದ ಕುತೂಹಲ. ಈ ನಡುವೆ ರಮೇಶ್ ಜಾರಕಿಹೊಳಿ ನಡೆಗಳು ಬಿಜೆಪಿಯಲ್ಲಿ ಚರ್ಚೆಗೂ ಗ್ರಾಸವಾಗಿದೆ. ಮಂಗಳವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ರಮೇಶ್ ಜಾರಕಿಹೊಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಗೆ ಕಾಣಿಸಿಕೊಂಡಿದ್ದರು. ಪ್ರತ್ಯೇಕವಾಗಿ ಮಾತುಕತೆಯನ್ನು ನಡೆಸಿದ್ದರು. ಈ ಚಿತ್ರವೂ ಹಲವಾರು ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ. ಅದೇನೇ ಇದ್ದರೂ ಕಾಂಗ್ರೆಸ್ ಮಾದರಿಯಲ್ಲೇ ಬಿಜೆಪಿಯಲ್ಲೂ ತಮ್ಮದೇ ಆದ ಪರ್ಯಾಯ ಶಕ್ತಿ ಕೇಂದ್ರವನ್ನು ರಚನೆ ಮಾಡಲು ರಮೇಶ್ ಪ್ರಯತ್ನ ನಡೆಸುತ್ತಿರುವುದು ಸುಳ್ಳಲ್ಲ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ಸು ಆಗಲಿದೆ ಎಂಬುವುದು ಸದ್ಯದ ಕುತೂಹಲ.





from India & World News in Kannada | VK Polls https://ift.tt/33d49YI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...