ಯಕ್ಷಗಾನದಲ್ಲಿ ಹೊಸ ದಾಖಲೆ: ಧರ್ಮಸ್ಥಳ ಮೇಳದ ಪ್ರಸಂಗಕ್ಕೆ 20 ಸಾವಿರ ಪ್ರೇಕ್ಷಕರು!

ಪುತ್ತೂರು: ಅದು ಪೌರಾಣಿಕ ಯಕ್ಷಗಾನ. ಪ್ರಸಂಗ: ಸುದರ್ಶನ ವಿಜಯ- ಮಾಯಾ ಸೀತೆ. ರಾತ್ರಿ ಹೊತ್ತು ನಾಲ್ಕೂವರೆ ಗಂಟೆ ನಡೆದ ಪ್ರಸಂಗವನ್ನು ವೀಕ್ಷಿಸಿದ ಪ್ರೇಕ್ಷಕರ ಸಂಖ್ಯೆ ಬರೋಬ್ಬರಿ 20 ಸಾವಿರ! ಇದು ಮೇಳಗಳ ಇತಿಹಾಸದಲ್ಲೇ ಒಂದು ಹೊಸ ದಾಖಲೆ. ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ಆಡಿ ತೋರಿಸಿದ ಈ ಪ್ರಸಂಗ ನಡೆದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿ ಸಭಾಭವನದ ಪಕ್ಕದಲ್ಲಿ. ರಂಗಸ್ಥಳದ ಮುಂಭಾಗದಲ್ಲಿ ಕುಳಿತು ಐನೂರಕ್ಕಿಂತಲೂ ಅಧಿಕ ಪ್ರೇಕ್ಷಕರು ಆಟ ನೋಡಿದ್ದರೆ, ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮವನ್ನು 20 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ರಾತ್ರಿ 8 ಗಂಟೆಗೆ ಆರಂಭಗೊಂಡ ಪ್ರಸಂಗ ಮಧ್ಯರಾತ್ರಿ 12.30ರವರೆಗೆ ನಡೆದಿದ್ದು, ಪ್ರೇಕ್ಷಕರ ಸಂಖ್ಯೆಯ ದೃಷ್ಟಿಯಿಂದ ಇದು ಹೊಸ ದಾಖಲೆ ಬರೆದಿದೆ. ಕೊರೊನಾ ಕಾಲಘಟ್ಟದ ಬಳಿಕ ಯಕ್ಷಗಾನ ಪ್ರಸಂಗಗಳ ತಿರುಗಾಟದ ಮೇಲೂ ಪರಿಣಾಮ ಬೀರಿದ್ದು, ಧರ್ಮಸ್ಥಳ ಕ್ಷೇತ್ರದ ಮೇಳದ ಪ್ರದರ್ಶನದಲ್ಲಿ ಸಣ್ಣಮಟ್ಟಿನ ಬದಲಾವಣೆ ಮಾಡಿಕೊಳ್ಳಲಾಗಿದೆ. ಸೇವಾರ್ಥಿಗಳ ಪ್ರಸಂಗವನ್ನು ಪ್ರದರ್ಶಿಸಲು ತಿರುಗಾಟ ನಡೆಸುವ ಬದಲು ನಿತ್ಯವೂ ಅದೇ ಆಟವನ್ನು ಕ್ಷೇತ್ರದಲ್ಲೇ ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ ಆರಂಭಿಕ ಒಂದು ತಿಂಗಳ ಸೇವಾರ್ಥಿಗಳ ಒಪ್ಪಿಗೆ ಪಡೆದು, ಅವರ ಸಮ್ಮುಖದಲ್ಲೇ ಯಕ್ಷಗಾನ ನಡೆಯುತ್ತಿದೆ. ನ.19ರಂದು ಪ್ರಯೋಗ ಆರಂಭಗೊಂಡಿದ್ದು, ಆಯಾ ದಿನದ ಸೇವಾರ್ಥಿಗಳಲ್ಲದೆ, ಭಕ್ತರು ಮತ್ತು ಸ್ಥಳೀಯರು ಬಂದು ನೋಡುತ್ತಿದ್ದಾರೆ. ಹೆಚ್ಚು ಜನ ಯಕ್ಷಗಾನ ನೋಡುವಂತಾಗಲಿ ಎಂದು ನೇರಪ್ರಸಾರವನ್ನು ಆನ್‌ಲೈನ್‌ಗೂ ವಿಸ್ತರಿಸಲಾಗಿದೆ. 19ರಿಂದ ಆನ್‌ಲೈನ್‌ ಪ್ರೇಕ್ಷಕರ ಸಂಖ್ಯೆ ಏರುತ್ತಲೇ ಇದ್ದು, ನ.24ರಂದು 20 ಸಾವಿರ ಮಂದಿ ವಿಕ್ಷಿಸಿದ್ದಾರೆ. ಈಗಿನ ಪರಿಸ್ಥಿತಿಗೆ ತಕ್ಕಂತೆ ನಾವು ಕ್ಷೇತ್ರದ ಮೇಳದ ತಿರುಗಾಟಕ್ಕೆ ಹೊಸ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಮಂಗಳವಾರದ ಒಂದು ದಿನದ ಪ್ರದರ್ಶನವನ್ನೇ 20 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಡಿದ್ದಾರೆ. ಇಲ್ಲಿ ನಾವು ಬಹಳ ಕೇಳಿಕೊಂಡು ಆಹ್ವಾನ ಕೊಟ್ಟು ಒಂದೂವರೆ, ಎರಡು ಸಾವಿರ ಜನ ಬರುವುದಾದರೆ ಆನ್‌ಲೈನ್‌ ಮೂಲಕ ಇಷ್ಟೊಂದು ಜನ ನೋಡುತ್ತಾರೆಂದಾದರೆ ಇದು ಕೊರೊನಾದಿಂದಾಗಿ ಉಂಟಾಗಿರುವ ಧನಾತ್ಮಕ ಪರಿಣಾಮವೇ ಸರಿ. ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ


from India & World News in Kannada | VK Polls https://ift.tt/3688NZS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...