ರಾಹುಲ್ ತೆಗೆದುಕೊಂಡಿದ್ದ ಈ ನಿರ್ಧಾರದಿಂದ ಬೇಸರವಾಗಿದೆ ಎಂದ ಅಗರ್ಕರ್‌!

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ತಿಂಗಳು ಅಂತ್ಯವಾಗಿದ್ದ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಕೆ.ಎಲ್‌ ರಾಹುಲ್ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದು ನನಗೆ ಸ್ವಲ್ಪ ನಿರಾಶೆ ಮೂಡಿಸಿತ್ತು ಎಂದು ಭಾರತ ತಂಡದ ಮಾಜಿ ವೇಗಿ ಹೇಳಿಕೊಂಡಿದ್ದಾರೆ. ಸ್ನಾಯುಸೆಳೆತದ ಸಮಸ್ಯೆಗೆ ಒಳಗಾಗಿದ್ದ ಕಾರಣ ಭಾರತ ಸೀಮಿತ ಓವರ್‌ಗಳ ತಂಡದ ನೂತನ ನಾಯಕ ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಶಿಖರ್‌ ಧವನ್‌ ಜೊತೆಗೆ ಕೆ.ಎಲ್‌ ರಾಹುಲ್ ಇನಿಂಗ್ಸ್‌ ಆರಂಭಿಸಿದ್ದರು. ಇದೀಗ ವೆಸ್ಟ್‌ ಇಂಡೀಸ್‌ ವಿರುದ್ಧದ ನಾಳೆ ಆರಂಭವಾಗಲಿರುವ ಓಡಿಐ ಸರಣಿಗೆ ರೋಹಿತ್‌ ತಂಡಕ್ಕೆ ಮರಳಿದ್ದಾರೆ. ಮತ್ತೊಂದೆಡೆ ಶಿಖರ್‌ ಧವನ್‌ ಧವನ್‌ಗೆ ಕೋವಿಡ್‌-19 ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಒಂದು ಓಪನಿಂಗ್‌ ಸ್ಥಾನ ಖಾಲಿ ಇದೆ. ಅಂದಹಾಗೆ ಸ್ಟಾರ್‌ ಸ್ಪೋರ್ಟ್ಸ್‌ ಗೇಮ್‌ ಶೋನಲ್ಲಿ ಮಾತನಾಡಿದ ಅಗರ್ಕರ್‌, ವಿಂಡೀಸ್‌ ವಿರುದ್ಧ ಓಡಿಐ ಸರಣಿಯಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬೇಕೆಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಕೆ.ಎಲ್‌ ರಾಹುಲ್‌ ಆರಂಭಿಕ ಬ್ಯಾಟ್ಸ್‌ಮನ್‌ ಅಥವಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ದಕ್ಷಿಣ ಆಫ್ರಿಕಾ ಓಡಿಐ ಸರಣಿಯಲ್ಲಿ ಓಪನಿಂಗ್‌ ಮಾಡಿದ್ದರು, ಇದು ನನಗೆ ಸ್ವಲ್ಪ ನಿರಾಶೆ ಮೂಡಿಸಿತ್ತು. ಭಾರತ ತಂಡದಲ್ಲಿ ಈ ಹಿಂದೆ 4 ಅಥವಾ 5ನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಆಡಿ ಯಶಸ್ಸು ಗಳಿಸಿದ್ದಾರೆ. ಇದೀಗ ತಂಡಕ್ಕೆ ಅಗತ್ಯವಿರುವುದು ಕೂಡ ಇದೆ," ಎಂದರು. ದೀರ್ಘಾವಧಿ ಕಾಲ ಆಯ್ಕೆ ಇದ್ದರೆ ಕೆ.ಎಲ್‌ ರಾಹುಲ್, ಕೈರೊನ್‌ ಪೊಲಾರ್ಡ್ ಪಡೆಯ ವಿರುದ್ಧ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿ, ಇಲ್ಲವಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಲಿ ಎಂದು ಇದೇ ವೇಳೆ ಟೀಮ್‌ ಇಂಡಿಯಾ ಮಾಜಿ ವೇಗಿ ತಿಳಿಸಿದರು. "ಮಧ್ಯಮ ಕ್ರಮಾಂಕದಲ್ಲಿ ಆಡುವ ಯೋಜನೆ ಇಲ್ಲವಾದಲ್ಲಿ, ನೀವು ನಿರ್ಧರಿಸಿದಂತೆ ಆಡಿ. ರೋಹಿತ್‌ ಶರ್ಮಾ ಜೊತೆ ಓಪನಿಂಗ್‌ ಮಾಡಬೇಕೆಂದು ನಿರ್ಧರಿಸಿದರೆ, ವೆಸ್ಟ್‌ ಇಂಡೀಸ್‌ ವಿರುದ್ಧ ಈ ಸರಣಿಯಲ್ಲಿ ಇನಿಂಗ್ಸ್‌ ಆರಂಭಿಸಿ," ಎಂದು ಹೇಳಿದರು. ಅಂದಹಾಗೆ ವೈಯಕ್ತಿಕ ಕಾರಣಗಳಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಭಾನುವಾರ ನಡೆಯಲಿರುವ ಮೊದಲನೇ ಓಡಿಐ ಪಂದ್ಯಕ್ಕೆ ಕೆ.ಎಲ್‌ ರಾಹುಲ್ ಅಲಭ್ಯರಾಗಿದ್ದಾರೆ. ಹಾಗಾಗಿ ಆರಂಭಿಕ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ ಜೊತೆ ಮುಯಂಕ್‌ ಅಗರ್ವಾಲ್‌ ಅಥವಾ ಇಶಾನ್‌ ಕಿಶನ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಧವನ್‌ ದೀರ್ಘಾವಧಿ ಯೋಜನೆಯಲ್ಲಿರುವ ಬಗ್ಗೆ ಖಚಿತತೆ ಇಲ್ಲ: ಅಗರ್ಕರ್ ಶಿಖರ್ ಧವನ್‌ ದೀರ್ಘಾವಧಿ ಯೋಜನೆ ಎಂಬುದರ ಬಗ್ಗೆ ನನಗೆ ಇನ್ನೂ ಖಚಿತತೆ ಇಲ್ಲ. ಏಕೆಂದರೆ ರೋಹಿತ್‌ ಶರ್ಮಾ ಜೊತೆ ಕೆ.ಎಲ್‌ ರಾಹುಲ್‌ ಇನಿಂಗ್ಸ್‌ ಆರಂಭಿಸಿದರೆ, ಹಿರಿಯ ಎಡಗೈ ಬ್ಯಾಟ್ಸ್‌ಮನ್‌ನ ಬ್ಯಾಟಿಂಗ್‌ ಕ್ರಮಾಂಕ ಯಾವುದೆಂದು ಪ್ರಶ್ನೆ ಉದ್ಬವವಾಗಲಿದೆ ಎಂದು ಅಗರ್ಕರ್‌ ಹೇಳಿದರು. "ಶಿಖರ್ ಧವನ್‌ ತಂಡದಲ್ಲಿ ಇರುವುದರಿಂದ ಇಲ್ಲಿ ಒಂದು ಪ್ರಶ್ನೆ ಉಂಟಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧ ಶಿಖರ್‌ ಧವನ್‌ ಉತ್ತಮ ರನ್‌ಗಳನ್ನು ಗಳಿಸಿದರೂ ಅವರು ಮಂದಿನ ಒಂದು ವರ್ಷ ಅಥವಾ ಒಂದೂವರೆ ವರ್ಷ ತಂಡದಲ್ಲಿ ಆಡಲಿದ್ದಾರೆಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಏಕೆಂದರೆ ಅಗ್ರ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್‌ ಮಾಡಬಲ್ಲ ಇಶಾನ್‌ ಕಿಶನ್‌ ಅಥವಾ ರಿಷಭ್‌ ಪಂತ್‌ ರೀತಿ ಬೇರೆ ಯಾರಾದಾದರೂ ಲಭಿಸಿದರೆ, ಧವನ್‌ಗೆ ಅಗ್ರ ಕ್ರಮಾಂಕ ನೀಡುವುದು ಮೌಲ್ಯ ತಂದುಕೊಡಲಿದೆ ಎಂಬುದು ಪ್ರಶ್ನೆಯಾಗಲಿದೆ," ಎಂದು ಮಾಜಿ ವೇಗಿ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/OSeJT0b

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...