ಕೇವಲ 12 ರನ್ ನೀಡಿ 4 ವಿಕೆಟ್‌ ಪಡೆದ ಬಗ್ಗೆ ಕನ್ನಡಿಗ ಪ್ರಸಿಧ್‌ ಹೇಳಿದ್ದಿದು!

ಅಹಮದಾಬಾದ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಕೇವಲ 12 ರನ್‌ ನೀಡಿ 4 ವಿಕೆಟ್‌ ಪಡೆಯುವ ಮೂಲಕ ತಂಡದ ಎರಡನೇ ಏಕದಿನ ಪಂದ್ಯದ ಗೆಲುವಿನಲ್ಲಿ ಮಹತ್ತರ ಪತ್ರವಹಿಸಿದ ಬಳಿಕ ಯುವ ವೇಗಿ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಎರಡನೇ ಓಡಿಐ ಪಂದ್ಯದಲ್ಲಿ ಭಾರತ ನೀಡಿದ್ದ 238 ರನ್‌ ಗುರಿ ಹಿಂಬಾಲಿಸಿದ್ದ ವೆಸ್ಟ್‌ ಇಂಡೀಸ್‌ ತಂಡ ಪ್ರಸಿಧ್‌ ಕೃಷ್ಣ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 193 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಭಾರತ 44 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕನ್ನಡಿಗ ಪ್ರಸಿಧ್‌ ಕೃಷ್ಣ, "ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳಲು ಸಾಕಷ್ಟು ಪ್ರಯತ್ನವನ್ನು ನಡೆಸುತ್ತಿದ್ದೇನೆ. ಅಂತಾರಾಷ್ಟ್ರೀಯ ವೃತ್ತಿ ಜೀವನದ ಆರಂಭಿಸಿದಾಗ ನನ್ನ ಮನಸಲ್ಲಿ ಸಾಕಷ್ಟು ಭಾವನೆಗಳು ಓಡುತ್ತಿದ್ದವು. ನನ್ನ ಆರಂಭಿಕ ಅವಧಿ ಮುಗಿದ ಬಳಿಕ ಒಂದು ತಂಡವಾಗಿ ಅಭ್ಯಾಸ ನಡೆಸಿದಾಗ ನಮ್ಮ ಯೋಜನೆಗಳ ಬಗ್ಗೆ ನಮಗೆ ಸ್ಪಷ್ಟತೆ ಸಿಕ್ಕಿತ್ತು. ಇದೀಗ ಯೋಜನೆಗಳನ್ನು ಸಕಾರಗೊಳಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ," ಎಂದರು. ಒಟ್ಟು ಒಂಬತ್ತು ಓವರ್‌ ಬೌಲ್‌ ಮಾಡಿದ ಕೃಷ್ಣ, ಬ್ರ್ಯಾಂಡನ್‌ ಕಿಂಗ್‌, ಡೆರೆನ್‌ ಬ್ರಾವೋ, ನಿಕೋಲಸ್‌ ಪೂರನ್ ಹಾಗೂ ಜೆಸನ್‌ ಹೋಲ್ಡರ್‌ ಅವರ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಪಡದುಕೊಂಡರು. ಇದರಲ್ಲಿ ಅವರು ಮೂರು ಓವರ್‌ ಮೇಡಿನ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ "ಇಂಥಾ ಬೌಲಿಂಗ್‌ ಸ್ಪೆಲ್‌ ಅನ್ನು ನಾನು ಈ ಹಿಂದೆ ನೋಡಿಯೇ ಇಲ್ಲ," ಎಂದು ಗುಣಗಾನ ಮಾಡಿದ್ದರು. ನಾಯಕನ ಹೊಗಳಿಕೆ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು,"ಇದು ನನಗೆ ತುಂಬಾ ಮೆಚ್ಚುವ ವಿಷಯವಾಗಿದೆ. ಏಕೆಂದರೆ ಅವರು ದೀರ್ಘಾವಧಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿದ್ದಾರೆ. ಅವರು ಸಾಕಷ್ಟು ಬೌಲರ್‌ಗಳನ್ನು ನೋಡಿರುತ್ತಾರೆ. ಇಂಥಾ ಆಟಗಾರನಿಂದ ಮೂಡಿಬಂದಿರುವ ಈ ಹೊಗಳಿಕೆ ಮಾತುಗಳಿಂದ ನನಗೆ ತುಂಬಾ ಖುಷಿಯಾಗಿದೆ," ಎಂದರು. ಹಿರಿಯ ವೇಗಿಗಳಾದ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ತಂಡಕ್ಕೆ ಮರಳಿದ ಬಳಿಕ ನಿಮಗೆ ಆಡುವ ಅವಕಾಶ ಮುಂದುವರಿಯಲಿದೆಯೇ? ಅಥವಾ ವಿರಾಮ ನಿಮ್ಮ ಲಯದ ಮೇಲೆ ಪರಿಣಾಮ ಬೀರಲಿದೆಯೇ? ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಒಂದು ವೇಳೆ ಆಡುವ ಅವಕಾಶ ಇಲ್ಲದ ವೇಳೆ ನನ್ನ ಆಟವನ್ನು ಇನ್ನಷ್ಟು ಸುಧಾರಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಹಾಗೂ ನನ್ನ ಅವಕಾಶ ಬಂದಾಗ ಅದನ್ನು ಸಾಬೀತುಪಡಿಸುತ್ತೇನೆ ಎಂದು ಹೇಳಿದರು. "ವಿರಾಮ ಲಯಕ್ಕೆ ಅಡ್ಡಿಪಡಿಸುತ್ತದೆ ಎಂದು ನಾನು ಭಾವಿಸಿಲ್ಲ. ಒಬ್ಬ ಕ್ರಿಕೆಟಿಗನಾಗಿ ನೀವು ಅವಕಾಶ ಸಿಕ್ಕಾಗ ಆಡುತ್ತೀರಿ. ಒಂದು ವೇಳೆ ಅವಕಾಶ ಸಿಗದೇ ಇದ್ದಾಗ ಆಟದ ಮೇಲೆ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಆ ಮೂಲಕ ಇನ್ನಷ್ಟು ಸುಧಾರಣೆ ಕಂಡುಕೊಂಡು ಅವಕಾಶ ಸಿಕ್ಕಾದ ಅದನ್ನು ಸಾಬೀತುಪಡಿಸಬೇಕಾಗುತ್ತದೆ," ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/q6KOE24

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...