ಬೆಂಗಳೂರು: ಮುಂದಿನ 2023ರೊಳಗೆ ರಾಜ್ಯದಲ್ಲಿ ಜಲಜೀವನ್ ಮಿಷನ್ನಡಿ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಗುರಿಯನ್ನು ಸರಕಾರ ಹೊಂದಿದೆ. ಅದಕ್ಕೆ ಪೂರಕವಾಗಿ 4,400.66 ಕೋಟಿ ರೂ. ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ವಿಸ್ತೃತ ಚರ್ಚೆಯಾಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ‘ಪ್ರಸಕ್ತ ಸಾಲಿನಲ್ಲಿ ಯೋಜನೆಗೆ 9,000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ 4,400 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಯೋಜನೆಗೆ ತಗಲುವ ವೆಚ್ಚದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ತಲಾ ಶೇ.45 ಹಾಗೂ ಶೇ.10ರಷ್ಟನ್ನು ಫಲಾನುಭವಿ ಭರಿಸಬೇಕಿತ್ತು. ಆದರೆ ಫಲಾನುಭವಿ ಪಾಲಿನ ಮೊತ್ತವನ್ನು ರಾಜ್ಯ ಸರಕಾರವೇ ಭರಿಸಲು ಮುಂದಾಗಿರುವುದರಿಂದ ವಿಶ್ವಬ್ಯಾಂಕ್ನಿಂದ ಸಾಲ ಪಡೆಯಲು ಕಳೆದ ಸಚಿವ ಸಂಪುಟದಲ್ಲೇ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು. ಆಡಳಿತಾತ್ಮಕ ಅನುಮೊದನೆ ನೀಡಲಾದ ಕಾಮಗಾರಿ ವಿವರ:
- ಉಡುಪಿಯ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲ್ಲೂಕಿನ 69 ಹಳ್ಳಿಗಳು ಹಾಗೂ ಮಧ್ಯದ ಜನವಸತಿ (1904 ಜನವಸತಿ) - 1,215 ಕೋಟಿ ರೂ.
- ಶಿವಮೊಗ್ಗದ ಸಾಗರ ತಾಲ್ಲೂಕಿನ ಆವಿನಹಳ್ಳಿ ಮತ್ತು ಇತರ 336 ಜನವಸತಿ ಒಳಗೊಂಡ 122 ಗ್ರಾಮ - 88 ಕೋಟಿ ರೂ.
- ಶಿವಮೊಗ್ಗದ ಗೋವಿಂದಪುರ, ಇತರ 11 ಜನಸವಸತಿ, ಗೋಪಿಶೆಟ್ಟಿ ಕೊಪ್ಪದ ನಗರ ಪ್ರದೇಶ - 16.73 ಕೋಟಿ ರೂ.
- ಬಳ್ಳಾರಿಯ ಸಂಡೂರು ತಾಲೂಕಿನ ನಿಡುಗುರ್ಕಿ ಮತ್ತು ಇತರ 60 ಜನವಸತಿ - 131.21 ಕೋಟಿ ರೂ.
- ಚಿಕ್ಕಬಳ್ಳಾಪುರದ ಅಮಾನಿ ಬೈರಸಾಗರ ಕೆರೆಯ ಸುತ್ತಮುತ್ತಲಿನ 28 ಜನವಸತಿ - 15 ಕೋಟಿ ರೂ.
- ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಮತ್ತು ಸುತ್ತಮುತ್ತಲಿನ ಇತರ 13 ಜನವಸತಿ - 13.30 ಕೋಟಿ ರೂ.
- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಾಸರಕುದ್ರಿಗೆ ಮತ್ತು ಇತರ 5 ಗ್ರಾಮಗಳಿಗೆ (23 ಜನವಸತಿ) - 30.27 ಕೋಟಿ ರೂ.
- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋಟೆಗಾಳಿ ಮತ್ತು 22 ಗ್ರಾಮ (43 ಜನವಸತಿ), ಕೆರವಾಡಿ ಮತ್ತು ಇತರ 17 ಗ್ರಾಮ (42 ಜನವಸತಿ) - 88.50 ಕೋಟಿ ರೂ.
- ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಲಕೊಡ, ಹೆಗಡೆ ಮತ್ತು 53 ಗ್ರಾಮ - 135 ಕೋಟಿ ರೂ.
- ರಾಮನಗರ ತಾಲೂಕಿನ 94 ಜನವಸತಿ, ಮಾಗಡಿ ತಾಲೂಕಿನ 72 ಜನವಸತಿ - 155 ಕೋಟಿ ರೂ.
- ಮಾಗಡಿ ತಾಲೂಕಿನ 625 ಜನವಸತಿಗಳು ಹಾಗೂ ರಾಮನಗರ ತಾಲ್ಲೂಕಿನ 250 ಜನವಸತಿ- 670 ಕೋಟಿ ರೂ.
- ಹಾಸನದ ಅರಕಲಗೂಡು ತಾಲೂಕಿನ ಬಾನಗುಂದಿ ಮತ್ತು ಇತರ 260 ಜನವಸತಿ - 185 ಕೋಟಿ ರೂ.
- ಹಾಸನದ ಅರಕಲಗೂಡು, ಹೊಳೆನರಸೀಪುರ ತಾಲೂಕುಗಳ ಆನಂದೂರು ಹಾಗೂ ಇತರ 84 ಜನವಸತಿ- 80 ಕೋಟಿ ರೂ.
- ಹಾಸನದ ಚನ್ನರಾಯಪಟ್ಟಣ ತಾಲೂಕಿನ 435 ಗ್ರಾಮೀಣ ಜನವಸತಿ - 320 ಕೋಟಿ ರೂ.
- ಆಲೂರು, ಬೇಲೂರು, ಹಾಸನ ಹಾಗೂ ಸಕಲೇಶಪುರ ತಾಲೂಕುಗಳ 1477 ಗ್ರಾಮೀಣ ಜನವಸತಿ - 810 ಕೋಟಿ
- ಹಾಸನದ ಅರಕಲಗೂಡು, ಹೊಳೆನರಸೀಪುರ ತಾಲೂಕುಗಳ ಬೋಳೆಕ್ಯಾತನಹಳ್ಳಿ ಮತ್ತು ಇತರ 138 ಜನವಸತಿ - 80 ಕೋಟಿ ರೂ
- ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಹೊಳಲ್ಕೆರೆ ಪಟ್ಟಣ ಮತ್ತು 215 ಗ್ರಾಮೀಣ ಜನವಸತಿ- 367.65 ಕೋಟಿ ರೂ.
from India & World News in Kannada | VK Polls https://ift.tt/3lN0nA9