ನವೆಂಬರ್‌ನಲ್ಲೂ ನರ ಬಲಿ ಪಡೆಯುತ್ತಿದೆ ಸಿಡಿಲು; ಕರಾವಳಿಯಲ್ಲೂ ಆತಂಕ ಸೃಷ್ಟಿಸಿದೆ ಸಿಡಿಲಿನ ಅಬ್ಬರ!

ಎಸ್‌.ಜಿ. ಕುರ್ಯ, ಉಡುಪಿ ಉಡುಪಿ: ಮುಂಗಾರು ಪೂರ್ವ, ಆರಂಭಕ್ಕೆ ಅಪ್ಪಳಿಸುವ ನವೆಂಬರ್‌ ತಿಂಗಳಲ್ಲೂ ಕರಾವಳಿಯಲ್ಲಿ ನರ ಬಲಿ ಪಡೆಯುತ್ತಿದ್ದು ಮಳೆರಾಯನ ಅಡ್ಡಿಯಿಂದಾಗಿ ಹಬ್ಬದ ಸಂಭ್ರಮ ಅಡ್ಡಾದಿಡ್ಡಿಯಾಗಿದೆ. ಜಾಗತಿಕ ಹವಾಮಾನ ಬದಲಾವಣೆ, ತಾಪಮಾನ ಹೆಚ್ಚಳದಿಂದಾಗಿ ಭೂಮಿಯ ಮೇಲ್ಮೈ ಬಿಸಿ ಗಾಳಿ ಮೇಲೆ ಹೋಗಿ ಮೋಡಗಳ ಒಳಗಿನ ಐಸ್‌ ಕ್ರಿಸ್ಟಲ್‌ನಲ್ಲಾಗುವ ತಾಪಮಾನದ ಏರುಪೇರಿನಿಂದ ಮೋಡಗಳ ಚಲನೆಯಲ್ಲಿ ವ್ಯತ್ಯಾಸವಾಗುತ್ತದೆ. ಅವುಗಳಲ್ಲಿರುವ ಚಾರ್ಜ್(ಪ್ಲಸ್‌ ಮತ್ತು ಮೈನಸ್‌) ಬೇರೆಯಾಗುತ್ತದೆ. ಮೋಡದ ಮೇಲ್ಬಾಗ ಪ್ಲಸ್‌ ಚಾರ್ಜ್ ಹಾಗೂ ಮೋಡದ ಕೆಳ ಭಾಗ ಮೈನಸ್‌ ಚಾರ್ಜ್ ಹೊಂದುತ್ತದೆ. ನಂತರ ವಿರುದ್ಧ ದಿಕ್ಕಿನ ಚಾರ್ಜರ್ ಗಳ ಆಕರ್ಷಣೆಯಿಂದ ಗುಡುಗು, ಮಿಂಚು, ಸಿಡಿಲಾಗಿ ಪರಿವರ್ತನೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಾಲ್ಕು ಮಂದಿ ಸಿಡಿಲು ಹೊಡೆದು ಜೀವ ಕಳೆದುಕೊಂಡಿದ್ದಾರೆ. ಪ್ರಾಕೃತಿಕ ಅಸಮತೋಲನದಿಂದಾಗಿ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸಿಡಿಲಾಘಾತಕ್ಕೆ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶದಲ್ಲಿ 82 ಕಡೆ ಸಿಡಿಲು ಪತ್ತೆ/ಮಾಹಿತಿ ಕೇಂದ್ರಗಳಿದ್ದು ಮೂರು ಗಂಟೆ ಮೊದಲು ಮಾಹಿತಿ, ಎಚ್ಚರಿಕೆ ನೀಡುವ ದಾಮಿನಿ ಆ್ಯಪ್‌ ನೂರಾರು ಮಂದಿಯ ಜೀವ ಉಳಿಸಲು ನೆರವಾಗಿದ್ದರೂ ಮಾಹಿತಿ ಕೊರತೆ, ತಂತ್ರಜ್ಞಾನದ ಸಮರ್ಪಕ ಬಳಕೆಗೆ ಜನ ಮನಸ್ಸು ಮಾಡುತ್ತಿಲ್ಲ. 2001ರಿಂದ 2021ರ ನಡುವೆ ದೇಶದಲ್ಲಿ ಒಟ್ಟು 48,600 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಪ್ರತಿ ವರ್ಷ ಉತ್ತರ ಪ್ರದೇಶ: 293, ಮಧ್ಯಪ್ರದೇಶ: 248, ಬಿಹಾರ: 221, ಒಡಿಶಾ: 200, ಜಾರ್ಖಂಡ್‌ನಲ್ಲಿ 172 ಅತಿ ಹೆಚ್ಚು ಸರಾಸರಿ ಸಾವು ಸಿಡಿಲಿಗೆ ಸಂಭವಿಸುತ್ತಿದೆ. ದಾಮಿನಿ ಆ್ಯಪ್‌(ಮಿಂಚು, ಗುಡುಗು, ಸಿಡಿಲು) ಮೂಲಕ 40ಕಿ.ಮೀ. ವ್ಯಾಪ್ತಿಯಲ್ಲಿ ಸಂಭವಿಸುವ ಸಿಡಿಲಿನ ಮಾಹಿತಿಯನ್ನು 20ನಿಮಿಷ ಮೊದಲೇ ಅರಿತು ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಿದೆ. ಮುಂಗಾರು ದೇಶದಲ್ಲಿ ಪೂರ್ಣ ಹಿಂತೆಗೆದು ಹಿಂಗಾರು ಆರಂಭವಾಗಿದ್ದರೂ ಮುಂದುವರಿದ ಮಳೆ ಭತ್ತ ಕಟಾವು ಸಹಿತ ಮಾವು, ಗೇರು, ಹಲಸು ಸಹಿತ ವಿವಿಧ ಫಲವಸ್ತುಗಳ ಚಿಗುರು, ಮೊಗ್ಗು ಅರಳುವಿಕೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ. ಮಳೆಯಿಂದಾಗಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿ, ಪಟಾಕಿ ಅಂಗಡಿಗಳಲ್ಲಿ ವ್ಯವಹಾರವೂ ತಗ್ಗಿದೆ. 12 ಸೈಕ್ಲೋನ್‌ ಪ್ರಭಾವ 2019-20ರಲ್ಲಿ ಏಳು ಸೈಕ್ಲೋನ್‌ ಅಪ್ಪಳಿಸಿದ್ದರೆ 2020, 2021ರಲ್ಲಿ ಗುಲಾಬ್‌, ತೌಕ್ತೆ, ಯಾಸ್‌, ನಿಸರ್ಗ, ಅಂಫಾನ್‌, ಕ್ಯಾರ್‌, ಮಹಾ, ವಾಯು, ಹಿಕ್ಕಾ, ಫನಿ, ಬಾಬ್‌03, ಬುಲ್‌ಬುಲ್‌...ಹೀಗೆ 12 ಚಂಡಮಾರುತ ಒಂದಲ್ಲಾ ಒಂದು ರಾಜ್ಯವನ್ನು ಕಾಡಿದೆ. ಸಿಡಿಲಿಗೆ ರಾಜ್ಯದಲ್ಲೆಷ್ಟು ಸಾವು?
  • 2015-16: 104
  • 2016-17: 64
  • 2017-18: 108
  • 2018-19: 137
  • 2019-20: 124
  • 2020-21: 132
ದೇಶದಲ್ಲೆಷ್ಟು ಸಾವು?
  • 2020-21: 1,882
  • 2019-20: 1,771
  • 2018-19: 1,343
  • 2017-18: 1,018
  • 2016-17: 1,334
ವಾತಾವರಣದಲ್ಲಿ ಶೇ. 60ರಿಂದ 70ರಷ್ಟಿರಬೇಕಾದ ತೇವಾಂಶ ಪ್ರಮಾಣದಲ್ಲಿ ಹೆಚ್ಚಳವಾದರೆ ರೋಗ ಮತ್ತು ಕೀಟ ಉತ್ಪತ್ತಿ ಸಮಸ್ಯೆ ತಂದೊಡ್ಡಲಿದೆ. ಉಡುಪಿ ಜಿಲ್ಲೆಯಲ್ಲಿ 2010(130ದಿನ)ಬಳಿಕ 2021ರಲ್ಲಿ ಈ ತನಕ ಬರೋಬ್ಬರಿ 137 ದಿನಗಳ ಕಾಲ ಮಳೆ ಬಿದ್ದಿದೆ, ವಾಡಿಕೆಗಿಂತ ಮಳೆಯ ಪ್ರಮಾಣ ಒಟ್ಟಾರೆ ಶೇ.9 ಹೆಚ್ಚಳವಾಗಿದೆ. ಪ್ರವೀಣ್‌ ಕೆ. ಎಂ., ತಾಂತ್ರಿಕ ಅಧಿಕಾರಿ, ಜಿಕೆಎಂಸ್‌, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ. ಮುಂಗಾರು ಬಳಿಕ ಅಂತರವಿಲ್ಲದೆ ಹಿಂಗಾರು ಮಳೆ, ಮೋಡ ಕವಿದ ವಾತಾವರಣದಿಂದಾಗಿ ಭತ್ತ ಬೆಳೆ, ಗಿಡ ಮರಗಳಲ್ಲಿ ಹೂ ಬರೋದು ಸಹಿತ ಚಳಿಗಾಲವೂ ವಿಳಂಬವಾಗಲಿದೆ. ಅಕ್ಟೋಬರ್‌ನಲ್ಲಿ ಗಿಡ ಮರಗಳಲ್ಲಿ ಚಿಗುರು ಬಂದು ಡಿಸೆಂಬರ್‌ನಲ್ಲಿ ಹೂ ಅರಳಬೇಕು. ಒಣಭೂಮಿ ಬೆಳೆಗಳಿಗೆ ಶುಷ್ಕ ವಾತಾವರಣವಿರಬೇಕು. ಡಾ. ಕೆ. ವಿ. ಸುಧೀರ್‌ ಕಾಮತ್‌, ನೋಡೆಲ್‌ ಅಧಿಕಾರಿ(ಜಿಕೆಎಂಎಸ್‌), ಬ್ರಹ್ಮಾವರ ವಲಯ ಕೃಷಿ, ತೋಟಗಾರಿಕಾ ಸಂಶೋಧನಾ ಕೇಂದ್ರ


from India & World News in Kannada | VK Polls https://ift.tt/3GTb3Vf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...