ಬಿಟ್ ಕಾಯಿನ್ ಪ್ರಕರಣ ಕೇಂದ್ರ ತನಿಖಾ ಸಂಸ್ಥೆಗೆ; ಈ ಬಗ್ಗೆ ಮಾಹಿತಿಗಾಗಿ ಆರ್‌ಟಿಐನಲ್ಲಿ ಅರ್ಜಿ, ಡಿಕೆಶಿ

ಹುಬ್ಬಳ್ಳಿ: ಪ್ರಕರಣದ ತನಿಖೆಯನ್ನು ಸಿಬಿಐ ಹಾಗೂ ಇಡಿಗೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದು ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಆರ್‌ಟಿಐನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಿಟ್‌ ಕಾಯಿನ್ ನಲ್ಲಿ ಯಾವ ರಾಜಕಾರಣಿ ಇದ್ದಾರೆ ಎಂಬ ಸುದ್ದಿಯ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ಈ ಪ್ರಕರಣದ ತನಿಖೆಯನ್ನು ಇಡಿ, ಸಿಬಿಐಗೆ ನೀಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಬಗ್ಗೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ಬರೆದಿರುವ ಪತ್ರದ ಕುರಿತಾಗಿ ಸರ್ಕಾರ ವಿವರಣೆ ನೀಡಲಿ ಎಂದರು. ಇದೇ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಣ್ಮಕ್ಕಳು ಅಳುತ್ತಿದ್ದರು, ರೈತರು ಸುಸ್ತಾಗಿದ್ದರು. ಬೀದಿ ವ್ಯಾಪಾರಸ್ತರು, ರೈತರು ಆಕಾಶ ಭೂಮಿ ನೋಡುತ್ತಿದ್ದರು. ಇದು ಯಾವುದು ಅವರಿಗೆ ತಲುಪಿಲ್ಲ. ಚುನಾವಣೆಯಲ್ಲಿ ಭಾಷಣದ ಸಂದರ್ಭದಲ್ಲಿ ಜನರಿಗೆ ಪರಿಹಾರ ಮೊತ್ತ ತಲುಪಿದ್ಯಾ? ಎಂದು ಪ್ರಶ್ನಿಸಿದ್ದೆ ಆದರೆ ಇಲ್ಲ ಎಂದು ಉತ್ತರ ಸಿಗುತ್ತಿತ್ತು. ಆದರೆ ಇದೀಗ ಜನರು ಉತ್ತರ ಕೊಟ್ಟಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಜನರು ಕೊಟ್ಟ ಉತ್ತರ ನೋಡಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಿದ್ದಾರೆ. ಇವಾಗ ಅವರಿಗೆ ತಿಳುವಳಿಕೆ ಬಂದಿದೆ. ಆದರೆ ಗ್ಯಾಸ್, ಕಬ್ಬಿಣ, ಸಿಮೆಂಟ್ ದರ ಕಡಿಮೆ ಅಗಿಲ್ಲ ಅಂದ್ರೆ ಬೇರೆ ಚುನಾವಣೆಯಲ್ಲಿ ಉತ್ತರ ಸಿಗುತ್ತದೆ ಎಂದು ಎಚ್ಚರಿಕೆ ನೀಡಿದರು. ಎಲ್ಲಾ ಧರ್ಮ ಜನಾಂಗದವರು ಕೈ ಹಿಡಿದಿದ್ದಾರೆ. ಬಿಜೆಪಿ ಸಿಂದಗಿಯಲ್ಲಿ ಜನತಾದಳ ಸೀಟನ್ನು ಗೆದಿದ್ದಾರೆ. ಹಾನಗಲ್‌ನಲ್ಲಿ ನಾವು ಬಿಜೆಪಿ ಸೀಟು ನಾವು ಗೆದ್ದಿದ್ದೇವೆ. ನಾನು ಚುನಾವಣಾ ಪ್ರಚಾರದಲ್ಲಿ ಹಾನಗಲ್‌ ಊರಿನ ಅಳಿಯ ಎಂದು ಹೇಳಿಲ್ಲ ಆದರೆ ಸಿಎಂ ಅವರು ಹೇಳಿದ್ದಾರೆ. ಇದು ನನ್ನ ಮನೆ, ತವರು ಜಿಲ್ಲೆ ಎಂದಿದ್ದಾರೆ. ಅವರ ಸಂಪುಟದ ಸಚಿವರನ್ನು ಇಲ್ಲೇ ಬಿಟ್ಟಿದ್ದರು ಎಂದರು. ಉಪಚುನಾವಣೆ ಸರ್ಕಾರದ ಮೇಲೆ ಪರಿಣಾಮ ಬಿದ್ದ ಕಾರಣಕ್ಕಾಗಿ ಪೆಟ್ರೋಲ್, ಡೀಸೆಲ್‌ ದರ ಇಳಿಕೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ವ್ಯಾಖ್ಯಾನಿಸಿದರು.


from India & World News in Kannada | VK Polls https://ift.tt/3bKgjMM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...