ಯಂತ್ರಕ್ಕೂ ಹೊಡೆತ ಕೊಟ್ಟ ಮಳೆ: ಅತಿವೃಷ್ಟಿಗೆ ಹೈರಾಣಾದ ಭತ್ತ ಬೆಳೆಗಾರ, ಕೈ ಕಟ್ಟಿ ಕುಳಿತ ಯಂತ್ರೋದ್ಯಮ!

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ ತಾಳಗುಪ್ಪ ಶಿವಮೊಗ್ಗ: ಮಲೆನಾಡಿನಲ್ಲಿ ನಿರಂತರ ಭತ್ತದ ಬೆಳೆ ಕಟಾವು ಸ್ಥಗಿತಗೊಳಿಸಿರುವ ಜತೆಗೆ, ಕಟಾವು ಯಂತ್ರಗಳ ಕಾರ್ಯಚಟುವಟಿಕೆ ಸ್ತಬ್ಧವಾಗುವಂತೆ ಮಾಡಿದೆ. ಯಾಂತ್ರಿಕ ಉದ್ಯಮ ಕೈಗೊಂಡವರಿಗೆ ತೀವ್ರ ಆರ್ಥಿಕ ಹೊಡೆತ ಕೊಟ್ಟಿದೆ. ಮಲೆನಾಡಿನಲ್ಲಿ ಇತ್ತೀಚೆಗೆ ಕೃಷಿ ಕ್ರಮ ಬದಲಾಗಿದೆ. ಗದ್ದೆ ಹೂಡಲು ಎತ್ತು ನೇಗಿಲುಗಳಿಲ್ಲ. ಕತ್ತಿಯಿಂದ ಕೊಯ್ದು ಮೆದೆ ಕಟ್ಟುವವರಿಲ್ಲ. ಕೃಷಿಯಲ್ಲಿ ಯಂತ್ರಗಳ ಬಳಕೆ ವ್ಯಾಪಕವಾಗಿದೆ. ಟ್ರ್ಯಾಕ್ಟರ್‌ಗಳು ಗದ್ದೆ ಹೂಡಿದರೆ, ಕೊಯ್ಲು ಯಂತ್ರಗಳು ಬತ್ತ ಕೊಯ್ದು, ನೆಲ್ಲು, ಹುಲ್ಲನ್ನು ಬೇರ್ಪಡಿಸಿ, ಹುಲ್ಲಿನ ಹೊರೆಯನ್ನೂ ಕಟ್ಟುತ್ತಿವೆ. ಪಾರಂಪರಿಕ ಕೃಷಿ ಪದ್ಧತಿಗೆ ಹೊಂದಿ ಕೊಂಡವರೂ ಸಹ ಯಂತ್ರಗಳತ್ತ ವಾಲುತ್ತಿದ್ದಾರೆ. ಗದ್ದೆಗಿಳಿಯದ ಯಂತ್ರಗಳು ಹೋಬಳಿ ವ್ಯಾಪ್ತಿಯ 9.5 ಸಾವಿರ ಹೆಕ್ಟೇರ್‌ ಭತ್ತದ ಗದ್ದೆ ಕೊಯ್ಲು ನಂಬಿಕೊಂಡು 23 ದಿನಗಳ ಹಿಂದೆಯೇ ಹೋಬಳಿಗೆ ತಮಿಳುನಾಡಿನಿಂದ 13 16 ಕಟಾವು ಯಂತ್ರಗಳು ಬಂದಿವೆ. ಇದರಲ್ಲಿ 13 ಚೈನ್‌, 3 ಟೈರ್‌ ಮಿಶನ್‌ಗಳು ಹಾಗೂ 9 ಬೇಲರ್‌ಗಳು ಬಂದಿವೆ. ಸಾಗರದ ಗುತ್ತಿಗೆದಾರರೊಬ್ಬರು ಕಮಿಷನ್‌ ಆಧಾರದಲ್ಲಿ ಈ ಯಂತ್ರಗಳನ್ನು ತರಿಸಿದ್ದು, ಗ್ರಾಮದ ರೈಲ್ವೆಗೇಟ್‌ ಸಮೀಪ ಬೀಡುಬಿಟ್ಟಿವೆ. ನಿಂತಲ್ಲೇ ನಿಂತ ಯಂತ್ರಗಳಿಂದಾಗಿ ಉದ್ಯಮಿಗಳು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಮಾಮೂಲಿನಂತೆ ಆಗಿದ್ದರೆ ಇಷ್ಟರಲ್ಲಾಗಲೇ ಅರ್ಧದಷ್ಟು ಕೊಯ್ಲು ಮುಗಿಯಬೇಕಿತ್ತು. ಆದರೆ ಅಕಾಲಿಕ ಮಳೆಯಬ್ಬರದಲ್ಲಿ ಯಂತ್ರಗಳಿಗೆ ಗದ್ದೆ ಇಳಿಯಲೂ ಸಾಧ್ಯವಾಗಿಲ್ಲ. 2 ದಿನದಿಂದ ಮಳೆ ಸ್ವಲ್ಪ ಬಿಡುವು ನೀಡಿದ್ದರೂ ಮತ್ತೆ ಹವಾಮಾನ ವೈಪರೀತ್ಯದ ಆತಂಕ ರೈತರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಯಂತ್ರದ ಕಾರ್ಯ ಯಂತ್ರದಲ್ಲಿ ಒಂದೇ ಕಡೆ ಕೊಯ್ಲು ನಡೆದರೆ ದಿನಕ್ಕೆ 8 ಎಕರೆ ಕೊಯ್ಲು ಮಾಡುತ್ತದೆ. ಕೊಯ್ಲಿನ ಜೊತೆಜೊತೆಯೇ ಕಾಳನ್ನು ಬೇರ್ಪಡಿಸುವ ಹುಲ್ಲನ್ನು ಗದ್ದೆಯಲ್ಲಿ ಬಿಡುತ್ತದೆ. ಒಂದೆರಡು ದಿನ ಬಿಸಿಲಲ್ಲಿ ಒಣಗಿದ ಹುಲ್ಲನ್ನು ಬೇಲರ್‌ ಮಿಶನ್‌ನಿಂದ ಪಿಂಡಿ ಕಟ್ಟಲಾಗುತ್ತದೆ. ಟೈರ್‌ ಮಿಶನ್‌ ಆದರೆ ಗಂಟೆಗೆ 1750 ರೂ. ಹಾಗೂ ಚೈನ್‌ ಮಿಶನ್‌ಗೆ 2750 ರೂ. ಗಳ ದರವಿದೆ. ಹುಲ್ಲುಪಿಂಡಿಗೆ ತಲಾ 40 ರೂ. ಒಂದು ಎಕರೆ ಕೊಯ್ಲಿಗೆ 3250 ರೂ. ಖರ್ಚು ಬರುತ್ತದೆ. ಟೈರ್‌ ಮಿಶನ್‌ನಿಂದ ಗದ್ದೆ ಹಸಿ ಇದ್ದರೆ ಕೆಲಸ ಮಾಡಲಾಗುವುದಿಲ್ಲ. ಆದರೆ ಚೈನ್‌ ಮಿಷನ್‌ ಕೆಸರು ಗದ್ದೆಯಲ್ಲಿಯೂ ಕೆಲಸ ಮಾಡುವುದರಿಂದ ಈ ಭಾಗದಲ್ಲಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೂಲಿ ಕೆಲಸಗಾರರಿಂದ ಕೊಯ್ಲು ಮಾಡಿಸಿದರೆ ಇದಕ್ಕಿಂತಲೂ ಹೆಚ್ಚು ಖರ್ಚು ತಗುಲುವ ಕಾರಣ ಜನರು ಯಂತ್ರಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಪ್ರತಿಕ್ರಿಯೆ ಕಳೆದ 22 ದಿನಗಳಿಂದ ತಾಳಗುಪ್ಪ ಹೋಬಳಿಯಲ್ಲಿ ಭತ್ತ ಕೊಯ್ಲಿನ 16 ಯಂತ್ರಗಳು ಕೆಲಸಕ್ಕಾಗಿ ಕಾದಿವೆ. ನಿರಂತರ ಮಳೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಯಂತ್ರಕ್ಕೆ ಒಬ್ಬ ಡ್ರೈವರ್‌ ಹಾಗೂ ಹೆಲ್ಪರ್‌ ಸೇರಿ ಮೂವರು ಕೆಲಸಗಾರರು ಅಗತ್ಯವಿದೆ. ಬೇಲರ್‌ಗೆ ಒಬ್ಬ ಕೆಲಸಗಾರ ಅಗತ್ಯ. ಅವರ ಕೂಲಿ ಹಾಗೂ ಊಟದ ಖರ್ಚು, ಯಂತ್ರಗಳಿಗೆ ಕೆಲಸವಿಲ್ಲದ ಕಾರಣ ಸುಮಾರು 20 ಲಕ್ಷ ರೂ.ಗಿಂತ ಹೆಚ್ಚು ನಷ್ಟವಾಗಿದೆ. ಕಾಳಿದಾಸ, ಅನ್ನದಾತ ಹಾರ್ವೆಸ್ಟರ್‌ ಸಂಸ್ಥೆ ಸುಮಾರು 20 ದಿನಗಳ ಹಿಂದೆ ಕೊಯ್ದ ಭತ್ತದ ಮೆದೆ ಗದ್ದೆಯಲ್ಲಿ ಮೊಳಕೆಯೊಡೆದಿದೆ. ಮತ್ತೆ ಮಳೆ ಇದೆ ಎಂದು ಹವಾಮಾನ ಇಲಾಖೆಯ ವರದಿ ಹೇಳುತ್ತಿದೆ. ಉಳಿದ ಕೊಯ್ಲು ಮಾಡಲು ಸಾಧ್ಯವಾಗದೇ ತೀವ್ರ ನಷ್ಟ ಅನುಭವಿಸುವಂತಾಗಿದೆ. ಕಗ್ಗೆ ಮಂಜುನಾಥ, ಮರತ್ತೂರು


from India & World News in Kannada | VK Polls https://ift.tt/3cQAfOs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...