'ಮನೀಶ್‌ ಮಿಂಚು', ಬಲಿಷ್ಠ ಮುಂಬೈಗೆ ಸೋಲುಣಿಸಿದ ಕರ್ನಾಟಕ!

ಗುವಾಹಟಿ: ನಾಯಕ (84) ಮತ್ತು ಮಾಜಿ ನಾಯಕ ಕರುಣ್‌ ನಾಯರ್‌ (72) ಅವರ ಸ್ಫೋಟಕ ಬ್ಯಾಟಿಂಗ್‌ ಮತ್ತು ಕೆಸಿ ಕಾರಿಯಪ್ಪ (26ಕ್ಕೆ 3) ಅವರ ಸ್ಪಿನ್‌ ಮೋಡಿಯಿಂದ ಮಿಂಚಿದ ತಂಡ ಮುಂಬೈ ತಂಡವನ್ನು 9 ರನ್‌ಗಳಿಂದ ಮಣಿಸಿ ಪ್ರಸಕ್ತ ಸಾಲಿನ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಗುರುವಾರ ನಡೆದ ಎಲೈಟ್‌ 'ಬಿ' ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ ವೇಗಿ ಮೋಹಿತ್‌ ಅವಸ್ತಿ (32ಕ್ಕೆ 2) ಅವರ ದಾಳಿಗೆ ನಲುಗಿ 15 ರನ್‌ ಗಳಿಸುವ ಹೊತ್ತಿಗೆ ತನ್ನ ಆರಂಭಿಕರಾದ ಮಯಾಂಕ್‌ ಅಗರ್ವಾಲ್‌ (0) ಮತ್ತು ದೇವದತ್‌ ಪಡಿಕ್ಕಲ್ (5) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಮೂರನೇ ವಿಕೆಟ್‌ಗೆ ಜೊತೆಯಾದ ಮಯಾಂಕ್ ಅಗರ್ವಾಲ್ ಮತ್ತು ಕರುಣ್‌ ನಾಯಕರ್‌ ಶತಕದ ಜೊತೆಯಾಟವಾಡಿದರು. 64 ಎಸೆತಗಳನ್ನು ಎದುರಿಸಿದ ಮಯಾಂಕ್‌ 64 ಎಸೆತಗಳಲ್ಲಿ 7 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 84 ರನ್‌ ಸಿಡಿಸಿ ಮಿಂಚಿದರು. ಅವರಿಗೆ ಉತ್ತಮ ಸಾಥ್‌ ಕೊಟ್ಟ ಮಾಜಿ ನಾಯಕ ಕರುಣ್ ನಾಯರ್‌ 53 ಎಸೆತಗಳಲ್ಲಿ 6 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 72 ರನ್‌ ಸಿಡಿಸಿದರು. ಪರಿಣಾಮ 20 ಓವರ್‌ಗಳಲ್ಲಿ ಕರ್ನಾಟಕ ತಂಡ 166/4 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಮುಂಬೈ ಪರ ಯುವ ವೇಗಿ ತುಶಾರ್‌ ದೇಶಪಾಂಡೆ 38ಕ್ಕೆ 2 ವಿಕೆಟ್‌ ಪಡೆದು ಇನಿಂಗ್ಸ್‌ನ ಅಂತ್ಯದ ಓವರ್‌ಗಳಲ್ಲಿ ಕರ್ನಾಟಕದ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ಅಜಿಂಕ್ಯ ರಹಾನೆ ಹೋರಾಟ ವ್ಯರ್ಥ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ತನ್ನ ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ (4) ವಿಕೆಟ್‌ ಕಳೆದು ಕೊಂಡಿತು. ಪವರ್‌ಪ್ಲೇ ಓವರ್‌ಗಳಲ್ಲೇ ದಾಳಿಗಿಳಿದ ಮಾಂತ್ರಿಕ ಸ್ಪಿನ್ನರ್‌ ಕೆಸಿ ಕಾರಿಯಪ್ಪ, ಓಪನರ್‌ ಪೃಥ್ವಿ ಶಾಗೆ ಮೊದಲ ಓವರ್‌ನಲ್ಲೇ ಪೆವಿಲಿಯನ್‌ ದಾರಿ ತೋರಿದರು. ದೂಸ್ರಾ ಎಸೆತವನ್ನು ಅರಿಯಲಾಗದೆ ಶಾ ಕ್ಲೀನ್‌ ಬೌಲ್ಡ್‌ ಆದರು. ಆದರೆ, ಮುಂಬೈಗೆ ಆಸರೆಯಾಗಿ ನಿಂತ ನಾಯಕ ಅಜಿಂಕ್ಯ ರಹಾನೆ54 ಎಸೆತಗಳಲ್ಲಿ 6 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 75 ರನ್‌ಗಳನ್ನು ಸಿಡಿಸಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿ ಕಾರಿಯಪ್ಪ ಬೌಲಿಂಗ್‌ನಲ್ಲಿ ಔಟ್‌ ಆದರು. ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್‌ ಗಳಿಸುವಷ್ಟಕ್ಕೆ ಸೋಲೊಪ್ಪಿಕೊಂಡಿತು. ಕರ್ನಾಟಕದ ಪರ ಕಾರಿಯಪ್ಪ ಮೂರು ವಿಕೆಟ್‌ ಕಿತ್ತರೆ, ಆಫ್‌ ಸ್ಪಿನ್ನರ್‌ ಕೆ ಗೌತಮ್‌ (26ಕ್ಕೆ 2) ಎರಡು ವಿಕೆಟ್‌ ಸಂಪಾದಿಸಿದರು. 6 ತಂಡಗಳನ್ನು ಒಳಗೊಂಡ ಎಲೈಟ್‌ 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಒಂದು ತಂಡ ಮಾತ್ರ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆಯಲಿದೆ. ಕರ್ನಾಟಕ ತನ್ನ 2ನೇ ಪಂದ್ಯದಲ್ಲಿ ಛತ್ತೀಸ್‌ಗಢ ಎದುರು (ನ.5) ಪೈಪೋಟಿ ನಡೆಸಲಿದೆ. ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್‌ (ಮನೀಶ್‌ ಪಾಂಡೆ 84, ಕರುಣ್‌ ನಾಯರ್‌ 72; ಮೋಹಿತ್‌ ಅವಸ್ತಿ 32ಕ್ಕೆ 2, ತುಶಾರ್‌ ದೇಶಪಾಂಡೆ 38ಕ್ಕೆ 2). ಮುಂಬೈ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 ರನ್‌ (ಅಜಿಂಕ್ಯ ರಹಾನೆ 75, ಸಿದ್ದೇಶ್ ಲಾಡ್‌ 32; ಕೆಸಿ ಕಾರಿಯಪ್ಪ 26ಕ್ಕೆ 3, ಕೆ ಗೌತಮ್ 26ಕ್ಕೆ 2, ವಿದ್ಯಾಧರ್ ಪಾಟಿಲ್‌ 25ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3nW5Ljo

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...