ದ್ರಾವಿಡ್‌ಗೆ ತಂಡ ನಡೆಸುವ ಪಾಠ ಮಾಡಬೇಡಿ, ಬಿಸಿಸಿಐಗೆ ಜಡೇಜಾ ಮನವಿ!

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ 10 ವರ್ಷಗಳ ಬಳಿಕ ಮತ್ತೆ ಸೇರಿದ್ದಾರೆ. ಆದರೆ, ಈ ಬಾರಿ ಅವರ ಜವಾಬ್ದಾರಿ ಬೇರೆಯದ್ದೇ ಆಗಿದ್ದು, ಮುಖ್ಯ ಕೋಚ್‌ ಆಗಿ ಭಾರತ ತಂಡಕ್ಕೆ ಮಾರ್ಗದರ್ಶನ ನೀಡುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಈ ಹಿಂದೆ ತಾತ್ಕಾಲಿಕವಾಗಿ ಟೀಮ್ ಇಂಡಿಯಾ ಕೋಚಿಂಗ್‌ ಬಳಗದಲ್ಲಿ ಕೆಲಸ ಮಾಡಿರುವ ರಾಹುಲ್ ದ್ರಾವಿಡ್‌, ಈಗ ಪೂರ್ಣ ಪ್ರಮಾಣದಲ್ಲಿ ಕೋಚ್‌ ಹುದ್ದೆ ಅಲಂಕರಿಸಿದ್ದಾರೆ. ಹಾಲಿ ಕೋಚ್‌ ಅವರ ಅಧಿಕಾರ ಅವಧಿ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ನೊಂದಿಗೆ ಅಂತ್ಯಗೊಳ್ಳಲಿದೆ. ನವೆಂಬರ್‌ ಅಂತ್ಯಕ್ಕೆ ಆರಂಭವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯೊಂದಿಗೆ ದ್ರಾವಿಡ್‌ ಕೆಲಸ ಆರಂಭಿಸಲಿದ್ದಾರೆ. ದ್ರಾವಿಡ್‌ ಟೀಮ್ ಇಂಡಿಯಾ ಕೋಚ್‌ ಆಗಿರುವ ಬಗ್ಗೆ ಕ್ರಿಕೆಟ್‌ ಜಗತ್ತಿನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಮಾಜಿ ಕ್ರಿಕೆಟಿಗರು ರಾಹುಲ್‌ ಮಾರ್ಗದರ್ಶನದ ಅಡಿಯಲ್ಲಿ ಭಾರತ ತಂಡ ಸಾಧನೆಯ ಶಿಖರವನ್ನೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆಟಗಾರ ಅಜಯ್‌ ಜಡೇಜಾ ಕೂಡ ಸಂತಸ ಹೊರಹಾಕಿದ್ದು, ಜೊತೆಗೆ ಬಿಸಿಸಿಐಗೆ ವಿಶೇಷ ಕಿವಿಮಾತನ್ನೂ ನೀಡಿದ್ದಾರೆ. "ಶಿಸ್ತು ಮತ್ತು ಬದ್ಧತೆಗೆ ಯಾರಾದರೂ ರೋಲ್‌ ಮಾಡೆಲ್‌ನಂತ್ತಿದ್ದರೆ ಅದು ರಾಹುಲ್ ದ್ರಾವಿಡ್‌. ಕೋಚ್‌ನಿಂದ ಹಲವು ಸಂಗತಿಗಳನ್ನು ನಿರೀಕ್ಷಿಸಲಾಗುತ್ತದೆ ಅದರಲ್ಲಿ ಶಿಸ್ತು ಮತ್ತು ಬದ್ಧತೆ ಅತ್ಯಂತ ಪ್ರಮುಖ ಸಂಗತಿಗಳು. ಈಗ ಭಾರತ ತಂಡದ ಮುಂದಿನ ಕ್ಯಾಪ್ಟನ್‌ನ ಆಯ್ಕೆಯನ್ನು ದ್ರಾವಿಡ್‌ ಮಾಡುತ್ತಾರೆಯೇ ಅಥವಾ ಆಯ್ಕೆ ಸಮಿತಿಯೇ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ ತಂಡದ ಕೋಚ್‌ ಆಗಿರುವ ವ್ಯಕ್ತಿಗೆ ಆತನ ದೃಷ್ಟಿಕೋನದಂತೆ ತಂಡವನ್ನು ನಡೆಸುವ ಅವಕಾಶ ಮಾಡಿಕೊಡಬೇಕು. ಪ್ರತಿಯೊಂದನ್ನು ಪಾಠ ಮಾಡುವುದಾದರೆ ಯಾರು ಬೇಕ್ಕಾದರೂ ಕೋಚ್‌ ಆಗಬಹುದು," ಎಂದು ಕ್ರಿಕ್‌ಬಝ್ ಕಾರ್ಯಕ್ರಮದಲ್ಲಿ ಜಡೇಜಾ ಹೇಳಿದ್ದಾರೆ. "ನೀವು ರಾಹುಲ್ ದ್ರಾವಿಡ್‌ ಅವರನ್ನು ಕರೆತಂದಿದ್ದೀರಿ. ಭಾರತೀಯ ಕ್ರಿಕೆಟ್‌ನ ಬಹುದೊಡ್ಡ ಹೆಸರು. ಹೀಗಾಗಿ ಅವರ ದೃಷ್ಟಿಕೋನದಂತೆ ನಡೆಯಲು ಬಿಡಿ. ಬಿಸಿಸಿಐಗೆ ನಾನು ಮಾಡಿಕೊಳ್ಳುವ ಮನವಿ ಇದು. ದ್ರಾವಿಡ್‌ ಅಂತಹ ವ್ಯಕ್ತಿ ಕೆಲಸ ಕೈಗೆತ್ತಿಕೊಂಡಿದ್ದಾರೆ ಎಂದಮೇಲೆ ಅವರಂತೆ ನಡೆಯಲು ಬಿಡಿ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬ ಪಾಠ ಮಾಡಲು ಹೋಗಬೇಡಿ," ಎಂದಿದ್ದಾರೆ. ಭಾರತ ತಂಡ 2013ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಟ್ರೋಫಿ ಗೆದ್ದಿಲ್ಲ. ಈಗ ಮುಂದಿನ 2 ವರ್ಷಗಳಲ್ಲಿ ಒಡಿಐ ಮತ್ತು ಟಿ20 ವಿಶ್ವಕಪ್‌ ಟೂರ್ನಿಗಳ ಜೊತೆಗೆ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಟ್ರೋಫಿ ಗೆಲ್ಲುವಂತೆ ಮಾಡುವುದು ದ್ರಾವಿಡ್‌ ಮೇಲಿರುವ ಬಹುದೊಡ್ಡ ಸವಾಲಾಗಿದೆ. ಪ್ರಸ್ತುತ ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಸೂಪರ್‌ 12 ಹಂತದಲ್ಲಿ ಭಾರತ ತಂಡದ ಮೊದಲ 2 ಪಂದ್ಯಗಳನ್ನು ಸೋತು ಸೆಮಿಫೈನಲ್ಸ್‌ ರೇಸ್‌ನಿಂದ ಹೊರಬೀಳುವ ಸ್ಥಿತಿಗೆ ಬಂದು ನಿಂತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YfZMNv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...