2070ರ ವೇಳೆ ಇಂಗಾಲಮುಕ್ತ ಭಾರತ: ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ನೀಡಿದ 5 ಭರವಸೆಗಳು

ಗ್ಲಾಸ್ಗೋ: 2070ರ ವೇಳೆಗೆ ಭಾರತವು ಇಂಗಾಲದ ಹೊರಸೂಸುವಿಕೆಯಲ್ಲಿ ಸಂಪೂರ್ಣ ಶೂನ್ಯವಾಗಲು ಬದ್ಧವಾಗಿದೆ ಎಂದು ಪ್ರಧಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ26) ಅವರು ಈ ಹೇಳಿಕೆ ನೀಡಿದ್ದು, ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯನ್ನು ಅಳವಡಿಸಿಕೊಳ್ಳುವುದು ಹಾಗೂ ಮತಿಹೀನ ಬಳಕೆಯನ್ನು ತೊಡೆದುಹಾಕುವ- 'ವಿಶ್ವ ಜೀವನ' ಎಂಬ ಜಾಗತಿಕ ಚಳವಳಿಯನ್ನು 'ಜೀವನ ವಿಧಾನ ಬದಲಾವಣೆ'ಯನ್ನಾಗಿ ಮಾಡಿಕೊಳ್ಳಬೇಕು ಎಂದು ಜಾಗತಿಕ ನಾಯಕರಿಗೆ ಅವರು ಮನವಿ ಮಾಡಿದ್ದಾರೆ. 2020ರ ವೇಳೆಗೆ ಪ್ರತಿ ವರ್ಷ 100 ಬಿಲಿಯನ್ ಅಮೆರಿಕನ್ ಡಾಲರ್ ಹವಾಮಾನ ಹಣಕಾಸು ಸಂಗ್ರಹಿಸುವ ಭರವಸೆಯನ್ನು ಈಡೇರಿಸದ ಅಭಿವೃದ್ಧಿ ಹೊಂದಿದ ದೇಶಗಳ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗಲು 1 ಟ್ರಿಲಿಯನ್ ಡಾಲರ್ ಸಂಗ್ರಹಿಸಬೇಕು ಎಂದು ಅವರ ಜವಾಬ್ದಾರಿಗಳನ್ನು ನೆನಪಿಸಿದರು. ಹವಾಮಾನ ನಿಧಿಯ ಹಳೆಯ ಉದ್ದೇಶಗಳನ್ನು ಇಟ್ಟುಕೊಂಡು ಹೊಸ ಗುರಿಗಳನ್ನು ಸಾಧಿಸಲು ಜಗತ್ತಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಇತರೆ ವಲಯವಾರು ಗುರಿಗಳಿಗೆ ಸ್ಪಷ್ಟ ಕಾಲಾನುಕ್ರಮ ನಿಗದಿಪಡಿಸುವ ಮೂಲಕ 'ಸಂಪೂರ್ಣ ಶೂನ್ಯ' ಸಾಧಿಸಲು ಹವಾಮಾನ ಕ್ರಿಯೆಗಳಿಗೆ ನಾಲ್ಕು ಇತರೆ ಹೆಜ್ಜೆಗಳನ್ನು ದೇಶ ಹೇಗೆ ಅನುಸರಿಸಲಿದೆ ಎಂದು ಮೋದಿ ವಿವರಿಸಿದ್ದಾರೆ. ಅಮೆರಿಕ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳು ಭಾರತವನ್ನು 2050ರ ವೇಳೆಗೆ ಇಂಗಾಲದ ವಿಚಾರದಲ್ಲಿ 'ಸಂಪೂರ್ಣ ಶೂನ್ಯ' ಸಾಧನೆಗೆ ತರಬೇಕೆಂದು ಉದ್ದೇಶಿಸಿವೆ. ಆದರೆ ಭಾರತ ಈ ಗುರಿಯನ್ನು 2070ರಲ್ಲಿ ಸಾಧಿಸುವುದಾಗಿ ಹೇಳಿರುವುದು ಈ ದೇಶಗಳಿಗೆ ಅಚ್ಚರಿ ಮೂಡಿಸಿದೆ. ಜಗತ್ತಿನ ಅತಿ ಮಾಲಿನ್ಯಕಾರಕ ದೇಶ ಎಂದೆನಿಸಿರುವ ಚೀನಾ, 2060ರ ವೇಳೆಗೆ ಈ ಗುರಿ ಸಾಧನೆಯ ಭರವಸೆ ನೀಡಿದೆ. ಅದಕ್ಕಿಂತಲೂ ಹತ್ತು ವರ್ಷ ತಡವಾಗಿ ಈ ಗುರಿ ಸಾಧಿಸುವುದಾಗಿ ಭಾರತ ಹೇಳಿಕೊಂಡಿದೆ. ತನ್ನ ಇಂಧನ ಅಗತ್ಯಗಳಲ್ಲಿ ಶೇ 50ರಷ್ಟನ್ನು 2030ರ ವೇಳೆಗೆ ನವೀಕರಿಸಬಹುದಾದ ಸಂಪನ್ಮೂಲಗಳಿಂದಲೇ ಪಡೆಯುವುದು, ಮುಂದಿನ ಒಂಬತ್ತು ವರ್ಷಗಳಲ್ಲಿ ಹಸಿರುಮನೆ ಅನಿಲಕ್ಕೆ (ಜಿಎಚ್‌ಜಿ) ಸಮಪ್ರಮಾಣದಲ್ಲಿ ಒಂದು ಬಿಲಿಯನ್ ಟನ್‌ನಷ್ಟು ಇಂಗಾಲವನ್ನು ತಗ್ಗಿಸಲಾಗುವುದು, 2030ರ ವೇಳೆಗೆ 2005ರಲ್ಲಿ ಇದ್ದ ಮಟ್ಟಕ್ಕೆ ಶೇ 45ರಷ್ಟು ಇಂಗಾದಲ ಸಾಂದ್ರತೆಯನ್ನು (ಜಿಡಿಪಿಯ ಪ್ರತಿ ಘಟಕಕ್ಕೆ ಇಂಗಾಲದ ವಿಸರ್ಜನೆ) ಕಡಿಮೆ ಮಾಡುವುದು ಮತ್ತು 2030ರ ವೇಳೆಗೆ ನವೀಕರಿಸಬಹುದಾದ ಇಂಧನಗಳ ಪ್ರಮಾಣವನ್ನು 450 ಗಿಗಾ ವ್ಯಾಟ್‌ನಿಂದ 500 ಗಿಗಾ ವ್ಯಾಟ್‌ಗೆ ಹೆಚ್ಚಿಸುವುದು ಭಾರತದ ಇತರೆ ಗುರಿಗಳಾಗಿವೆ. ಬೋರಿಸ್ ಜಾನ್ಸನ್‌ಗೆ ಆಹ್ವಾನಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಬ್ರಿಟನ್ ಪ್ರಧಾನಿ ಸ್ವೀಕರಿಸಿದ್ದಾರೆ. ಸಂದರ್ಭಗಳು ಕೂಡಿಬಂದರೆ ಜಾನ್ಸನ್ ಅವರು ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ. ಸೋಮವಾರದ ಸಿಒಪಿ 26 ಶೃಂಗಸಭೆ ವೇಳೆ ಬೋರಿಸ್ ಜಾನ್ಸನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.


from India & World News in Kannada | VK Polls https://ift.tt/3mBxwyg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...