ಕೋಚಿಮುಲ್ ನಿಂದ ಹಾಲಿನ ಖರೀದಿ ದರ ಕಡಿತ, ಹೈನುಗಾರರಿಗೆ ಬರೆ; ನಷ್ಟದ ಕಾರಣಕ್ಕೆ 1.50ರೂ ಇಳಿಕೆ!

ಕಣಿತಹಳ್ಳಿ ಎನ್‌. ಚಂದ್ರೇಗೌಡ, ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ: ವಿಭಜನೆಗೆ ಸಂಪುಟ ಒಪ್ಪಿಗೆ ಕೊಟ್ಟಿದ್ದರಿಂದ ಜಿಲ್ಲೆಯ ಜನ ಸಂಭ್ರಮಿಸಿದ್ದರು. ಆದರೆ ಸಂಭ್ರಮದ ಬೆನ್ನಲ್ಲೇ ಉತ್ಪಾದಕರಿಗೆ ಬರಸಿಡಿಲು ಬಡಿದಿದೆ. ಇದೇ ತಿಂಗಳ 8ರಿಂದ ರೈತರಿಂದ ಹಾಲು ಖರೀದಿ ದರವನ್ನು 1.50 ರೂ. ಇಳಿಕೆ ಮಾಡಿದ್ದು, ರೈತರು ಹೋರಾಟಕ್ಕೆ ಧುಮುಕಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆ ಹಾಲಿನ ಖರೀದಿ ದರವನ್ನು ಏರಿಸಬೇಕೆಂಬ ಕೂಗು ಕೇಳುತ್ತಲೇ ಇತ್ತು. ಆದರೆ ಖರೀದಿ ದರ ಏರಿಸದೇ ಈಗ ನಷ್ಟದ ನೆಪವೊಡ್ಡಿ ದರ ಇಳಿಕೆ ಮಾಡಿರುವುದು ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಸತತವಾಗಿ ಹಾಲಿನ ದರ ಇಳಿಕೆ ಮಾಡುತ್ತಿದೆ. ಈಗ ರೈತರಿಗೆ ಪ್ರತಿ ಲೀ.ಗೆ 24 ರೂಪಾಯಿ ಮಾತ್ರ ಸಿಗುತ್ತಿದೆ. ಕೊರೊನಾ ಸಂಕಷ್ಟದಿಂದ ಈಗಷ್ಟೇ ಹೊರಬಂದಿದ್ದ ಹಾಲು ಉತ್ಪಾದಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಖರೀದಿ ದರ ಇಳಿಕೆಕೋಚಿಮುಲ್‌ ಕೋಟ್ಯಂತರ ರೂ. ನಷ್ಟದಲ್ಲಿರುವ ಕಾರಣ ನೀಡಿ ಕಳೆದ ಜುಲೈ 1ರಂದೇ ಹಾಲಿನ ಖರೀದಿ ದರವನ್ನು 27.50 ರೂ.ನಿಂದ 25.50 ರೂಪಾಯಿಗೆ ಇಳಿಸಿತ್ತು. ಹಾಲಿನ ಉತ್ಪಾದನೆ ತೀವ್ರಗತಿಯಲ್ಲಿ ಹೆಚ್ಚಾಗಿರುವಂತೆ ಮಾರುಕಟ್ಟೆ ಸಮಸ್ಯೆ ಮತ್ತು ಹಾಲಿನ ಉತ್ಪನ್ನಗಳು ಮಾರಾಟವಾಗದ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ನಷ್ಟವಾಗುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಬೆಲೆ ಇಳಿಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಮತ್ತೆ ಕೋಚಿಮುಲ್‌ ಹಾಲಿ ಖರೀದಿ ದರವನ್ನು ಇಳಿಕೆ ಮಾಡಿದ್ದು ರೈತರ ನಿರೀಕ್ಷೆಗೆ ತಣ್ಣೀರು ಎರಚಿದೆ. 24 ರೂ.ಗೆ ಇಳಿಕೆ ಈಗ ಹೈನುಗಾರರಿಗೆ ಲೀ.ಗೆ 27.50ರೂ. ನೀಡುವುದಿರಲಿ 25.50 ರೂ. ಇದ್ದ ಹಾಲಿನ ಬೆಲೆಯಲ್ಲಿ 24 ರೂಪಾಯಿಗೆ ಇಳಿಸಿದೆ. ಇದು ಜಿಲ್ಲೆಯ ಹೈನುಗಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಈಗಾಗಲೇ ಹಲವು ಸಂಕಷ್ಟಗಳಿಂದ ಬಳಲುತ್ತಿರುವ ರೈತರಿಗೆ ಬೆಲೆ ಏರಿಕೆಯಿಂದ ಹಸುಗಳ ಸಾಕಣೆ ವೆಚ್ಚವೂ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ರೈತರ ಕೈಹಿಡಿಯಬೇಕಾದವರೇ ಬೆಲೆ ಇಳಿಸಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದಂತೆ ಆಗಿದೆ. ಒಕ್ಕೂಟದ ಸಮಜಾಯಿಷಿಕೊರೊನಾ ಹೊಡೆತ ಹಾಗೂ ಹಾಲು ಉತ್ಪಾದನೆ ಹೆಚ್ಚಳದಿಂದ ಹಾಲಿನ ಪೌಡರ್‌ ಮತ್ತು ಬೆಣ್ಣೆಯ ದಾಸ್ತಾನು ಹೆಚ್ಚಾಗಿದೆ. 1950 ಮೆ.ಟ. ಹಾಲಿನ ಪೌಡರ್‌ ಹಾಗೂ 950 ಮೆ.ಟ. ಬೆಣ್ಣೆ ದಾಸ್ತಾನಿದ್ದು ಪ್ರತಿ ಲೀಟರ್‌ ಹಾಲಿನ ಪೌಡರ್‌ ಉತ್ಪಾದನೆಗೆ 100 ರೂ. ನಷ್ಟ ಉಂಟಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಉತ್ಪನ್ನಗಳು ಗೋಡೋನ್‌ ಸೇರಿವೆ. ಹೊರ ರಾಜ್ಯಗಳಿಗೆ ಹಾಲು ಪೂರೈಕೆ ಮಾಡುತ್ತಿದ್ದರೂ ನಷ್ಟವಾಗುತ್ತಿದೆ. ಹೀಗಾಗಿ ವಾರ್ಷಿಕ ನಷ್ಟವನ್ನು ಸರಿದೂಗಿಸಲು ಹಾಲಿನ ಖರೀದಿ ದರ ಇಳಿಕೆ ಅನಿವಾರ್ಯ. ಹಾಲಿನ ಪೌಡರ್‌ ಮತ್ತು ಬೆಣ್ಣೆ ಬೆಲೆ ಏರಿಕೆ ಮತ್ತು ಮಾರಾಟವಾಗತ್ತಿದಂತೆ ಖರೀದಿ ದರ ಹೆಚ್ಚಿಸಲಾಗುವುದು ಎಂದು ಒಕ್ಕೂಟ ಸಮಜಾಯಿಷಿ ನೀಡಿದೆ. ಪ್ರೋತ್ಸಾಹ ಧನ ವಿಳಂಬ ಇದು ಹಾಲು ಖರೀದಿ ದರ ಇಳಿಕೆಯ ಹೊಡೆತವಾದರೆ ಇನ್ನೊಂದು ಸರಕಾರ ನೀಡುವ ಪ್ರೋತ್ಸಾಹ ಧನ ಬಟವಾಡೆಯ ವಿಳಂಬ ಮತ್ತು ಅವಾಂತರಗಳಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತ್ಯುತ್ತಮ ಗುಣಮಟ್ಟ ದ ಹಾಲನ್ನು ಪೂರೈಸಿದರೆ ಮಾತ್ರ ಸರಕಾರದ ಸಹಾಯಧನ ಪ್ರತಿ ಲೀ. 5 ರೂಪಾಯಿಗೆ ಸಿಗಲಿದೆ. ನಿರ್ವಹಣೆ ಅಸಾಧ್ಯಆದರೆ ಸಾಕಷ್ಟು ಹಾಲು ಉತ್ಪಾದಕರ ಸಂಘಗಳು ಇದನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಲು ಉತ್ಪಾದಕರ ಸಂಘಗಳಲ್ಲಿನ ಅವ್ಯವಸ್ಥೆಗಳು ಇದಕ್ಕೆ ಕಾರಣ. ಇದರಿಂದ ಸರಕಾರದಿಂದ ಬರಬೇಕಾದ ಪ್ರೋತ್ಸಾಹಧನ ಹೈನುಗಾರರಿಗೆ ಸರಿಯಾಗಿ ಬಡವಾಡೆಯಾಗುತ್ತಿಲ್ಲ.


from India & World News in Kannada | VK Polls https://ift.tt/3r9iouI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...