ಕೊಹ್ಲಿ vs ರೋಹಿತ್‌ ನಡುವೆ ಯಾರು ಬೆಸ್ಟ್ ಕ್ಯಾಪ್ಟನ್? ಮಾತಿನ ಸಮರಕ್ಕಿಳಿದ ಗಂಭೀರ್‌-ಚೋಪ್ರಾ!

ಹೊಸದಿಲ್ಲಿ: ಹಾಗೂ ಅವರ ನಾಯಕತ್ವದ ಬಗ್ಗೆ ಇತ್ತೀಚಿಗೆ ಸ್ಟಾರ್‌ಸ್ಪೋರ್ಟ್ಸ್‌ ವಾಹಿನಿಯ ನಡೆದಿದ್ದ ಚರ್ಚೆಯಲ್ಲಿ ತಂಡದ ಮಾಜಿ ಆರಂಭಿಕರಾದ ಹಾಗೂ ನಡುವಿನ ವಾದ-ವಿವಾದಗಳು ನಡೆದವು. ಸೆಪ್ಟೆಂಬರ್‌ ತಿಂಗಳಲ್ಲಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧ 217 ರನ್‌ಗಳ ಗುರಿ ಬೆನ್ನತ್ತುವ ವೇಳೆ ಎಂಎಸ್‌ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದನ್ನು ಗೌತಮ್‌ ಗಂಭೀರ್‌ ಟೀಕಿಸಿದ್ದರು. ಇದಾದ ಬಳಿಕ ಆಕಾಶ್‌ ಚೋಪ್ರಾ 'ಧೋನಿ ಬಗ್ಗೆ ಸಂಪೂರ್ಣವಾಗಿ ಯಾರಿಗೂ ಗೊತ್ತಿಲ್ಲ' ಎಂದು ಹೇಳುವ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದ್ದರು. ಭಾರತ ಟಿ20 ತಂಡದ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಬೇಕೆಂದು ಈ ತಿಂಗಳ ಆರಂಭದಲ್ಲಿ ಗೌತಮ್‌ ಗಂಭೀರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ಆಕಾಶ್‌ ಚೋಪ್ರಾ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡು ರೋಹಿತ್‌ ಶರ್ಮಾ ಪ್ರಶಸ್ತಿ ಗೆದ್ದು ಕೊಡಲಿದ್ದಾರೆಯೇ? ಎಂದು ಗಂಭೀರ್‌ಗೆ ತಿರುಗೇಟು ನೀಡುವ ಮೂಲಕ ವಿರಾಟ್‌ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದರು. ಸೋಮವಾರ ಸ್ಟಾರ್‌ಸ್ಪೋರ್ಟ್ಸ್ ಜತೆ ಭಾರತ ತಂಡದ ಟಿ20 ನಾಯಕತ್ವದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆಯೂ ಗೌತಮ್‌ ಗಂಭೀರ್‌ ಹಾಗೂ ಆಕಾಶ್‌ ಚೋಪ್ರಾ ವಾದ-ವಿವಾದಲ್ಲಿ ತೊಡಗಿದ್ದರು. ಮೊದಲು ಮಾತನಾಡಿದ ಗೌತಮ್‌ ಗಂಭೀರ್‌, "ವಿರಾಟ್‌ ಕೊಹ್ಲಿ ಕೆಟ್ಟ ನಾಯಕ ಎಂದು ನಾನು ಹೇಳುತ್ತಿಲ್ಲ, ಆದರೆ ರೋಹಿತ್‌ ಶರ್ಮಾ ಉತ್ತಮ ನಾಯಕ. ವಾಸ್ತವವಾಗಿ ಉತ್ತಮವಾಗಿಲ್ಲ ಆದರೆ ಅವರ ನಾಯಕತ್ವಗಳ ನಡುವೆ ದೊಡ್ಡ ವ್ಯತ್ಯಾಸವಿದೆ," ಎಂದು ಹೇಳಿದರು. ಗೌತಮ್‌ ಗಂಭೀರ್‌ ಮಾತನ್ನು ನಿರಾಕರಿಸಿದ ಆಕಾಶ್‌ ಚೋಪ್ರಾ, 'ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್‌ ಟೂರ್ನಿಗೆ ಹೊಸ ನಾಯಕನ ಅಡಿಯಲ್ಲಿ ತಂಡವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.' ಈ ವೇಳೆ ಗೌತಮ್‌ ಗಂಭೀರ್‌ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು ಹಾಗೂ 'ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರದರ್ಶನದ ಆಧಾರದ ಮೇಲೆಯೇ ಕೊಹ್ಲಿ ಸೇರಿದಂತೆ ಆಟಗಾರರು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ' ಎಂದು ಪ್ರತಿಕ್ರಿಯಿಸಿದರು. ಇದಕ್ಕೆ ಉತ್ತರ ನೀಡಿದ ಆಕಾಶ್‌ ಚೋಪ್ರಾ, ಐಪಿಎಲ್‌ ಪ್ರದರ್ಶನಕ್ಕಿಂತಲೂ ಭಾರತ ತಂಡದ ಪರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೋರಿರುವ ಪ್ರದರ್ಶನ ಅತ್ಯಂತ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ವಿರಾಟ್‌ ಕೊಹ್ಲಿ ನಾಯಕನಾಗಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು. ನಂತರ ಮಾತು ಮುಂದುವರಿಸಿದ ಗಂಭೀರ್, ಟಿ ನಟರಾಜನ್‌, ವಾಷಿಂಗ್ಟನ್‌ ಸುಂದರ್‌, ಯುಜ್ವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌ ಐಪಿಎಲ್‌ ಪ್ರದರ್ಶನದ ಆಧಾರ ಮೇಲೆ ಟೀಮ್‌ ಇಂಡಿಯಾಗೆ ಬಂದವರು ಎನ್ನುವ ಮೂಲಕ ಭಾರತ ಟಿ20 ತಂಡದ ನಾಯಕತ್ವ ರೋಹಿತ್‌ ಶರ್ಮಾಗೆ ನೀಡುವ ತಮ್ಮ ಹೇಳೀಕೆಯನ್ನು ಸಮರ್ಥಿಸಿಕೊಂಡರು. ಈ ವೇಳೆ ಚೋಪ್ರಾ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಗಂಭೀರ್ ತಮ್ಮ ವಿಷಯವನ್ನು ಮುಗಿಸಿದರು. ಇದು ಈ ಇಬ್ಬರ ನಡುವೆ ಸೌಹಾರ್ದತೆ ಇಲ್ಲ ಎಂದು ತೋರಿಸಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UTwy1o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...