ಬಳ್ಳಾರಿಯಲ್ಲಿ ಕಾಲೇಜಿಗೆ ಬಂದವರಿಗೆ ಕೋವಿಡ್‌ ಶಾಕ್..‌! 40 ವಿದ್ಯಾರ್ಥಿಗಳಿಗೆ ಸೋಂಕು..

ಜಯಪ್ಪ ರಾಥೋಡ್‌ ಬಳ್ಳಾರಿ: ಬಹುದಿನಗಳ ನಂತರ ಪದವಿ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಅಂತಿಮ ತರಗತಿ ಆರಂಭಕ್ಕೆ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಸೋಂಕಿನ ಭಯದ ನಡುವೆಯೂ ಕಾಲೇಜಿಗೆ ಬಂದ ಅಂದಾಜು 40 ವಿದ್ಯಾರ್ಥಿಗಳಿಗೆ ಕೋವಿಡ್‌ 19 ದೃಢಪಟ್ಟಿರುವುದು ಜಿಲ್ಲೆಯ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.ಮಾರ್ಚ್‌ನಿಂದ ಇದುವರೆಗೆ ಸುಮಾರು 8 ತಿಂಗಳಿಂದ ಕಾಲೇಜು ತರಗತಿಗಳನ್ನು ಸರಕಾರ ಸ್ಥಗಿತಗೊಳಿಸಿದೆ. ಆನ್‌ಲೈನ್‌ ತರಗತಿಗಳೇ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿವೆ. ಕೋವಿಡ್‌ ಪ್ರಕರಣದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದ ಗಣಿ ನಗರಿ ನಿಧಾನಕ್ಕೆ ಸೋಂಕಿನಿಂದ ಚೇತರಿಸಿಕೊಂಡು ಮೊದಲಿನ ಲಯಕ್ಕೆ ಮರಳುವ ಮುನ್ನವೇ, ಸರಕಾರದ ಆದೇಶದ ಹಿನ್ನೆಲೆಯಲ್ಲಿ ಧೈರ್ಯ ಮಾಡಿ ಕಾಲೇಜು ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸಿದೆ.

ಕೋವಿಡ್‌ ಹರಡುವಿಕೆ ಕಡಿಮೆಯಾಗಿದೆ ಎಂಬ ಧೈರ್ಯದ ಮೇಲೆ ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸಿದ್ದರು. ಆದರೆ, ನಾನಾ ಕಾಲೇಜುಗಳಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.


ಬಳ್ಳಾರಿಯಲ್ಲಿ ಕಾಲೇಜಿಗೆ ಬಂದವರಿಗೆ ಕೋವಿಡ್‌ ಶಾಕ್..‌! 40 ವಿದ್ಯಾರ್ಥಿಗಳಿಗೆ ಸೋಂಕು..

ಜಯಪ್ಪ ರಾಥೋಡ್‌
ಬಳ್ಳಾರಿ:

ಬಹುದಿನಗಳ ನಂತರ ಪದವಿ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾ ಅಂತಿಮ ತರಗತಿ ಆರಂಭಕ್ಕೆ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಸೋಂಕಿನ ಭಯದ ನಡುವೆಯೂ ಕಾಲೇಜಿಗೆ ಬಂದ ಅಂದಾಜು 40 ವಿದ್ಯಾರ್ಥಿಗಳಿಗೆ ಕೋವಿಡ್‌ 19 ದೃಢಪಟ್ಟಿರುವುದು ಜಿಲ್ಲೆಯ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಮಾರ್ಚ್‌ನಿಂದ ಇದುವರೆಗೆ ಸುಮಾರು 8 ತಿಂಗಳಿಂದ ಕಾಲೇಜು ತರಗತಿಗಳನ್ನು ಸರಕಾರ ಸ್ಥಗಿತಗೊಳಿಸಿದೆ. ಆನ್‌ಲೈನ್‌ ತರಗತಿಗಳೇ ವಿದ್ಯಾರ್ಥಿಗಳ ಕಲಿಕೆಗೆ ಆಸರೆಯಾಗಿವೆ. ಕೋವಿಡ್‌ ಪ್ರಕರಣದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದ್ದ ಗಣಿ ನಗರಿ ನಿಧಾನಕ್ಕೆ ಸೋಂಕಿನಿಂದ ಚೇತರಿಸಿಕೊಂಡು ಮೊದಲಿನ ಲಯಕ್ಕೆ ಮರಳುವ ಮುನ್ನವೇ, ಸರಕಾರದ ಆದೇಶದ ಹಿನ್ನೆಲೆಯಲ್ಲಿ ಧೈರ್ಯ ಮಾಡಿ ಕಾಲೇಜು ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸಿದೆ.



ಕಾಲೇಜು ಪುನಾರಂಭವಾದ್ರೂ ಖಾಲಿ ಬೆಂಚು
ಕಾಲೇಜು ಪುನಾರಂಭವಾದ್ರೂ ಖಾಲಿ ಬೆಂಚು

ಕಾಲೇಜು ಆರಂಭವಾಗಿ ವಾರ ಕಳೆದರೂ ಈವರೆಗೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಮನಸ್ಸು ಮಾಡುತ್ತಿಲ್ಲ. ನಗರದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆ ಇದೆ. ಕೋವಿಡ್‌ ಸೋಂಕು ವಿದ್ಯಾರ್ಥಿಗಳು ಕಾಲೇಜಿಗೆ ಬರದಂತಹ ವಾತಾವರಣಕ್ಕೆ ಕಾರಣವಾಗಿದೆ. ಉಪನ್ಯಾಸಕರು ಮಾತ್ರ ಕಾಲೇಜಿಗೆ ಬರುತ್ತಿದ್ದು, ವಿದ್ಯಾರ್ಥಿಗಳಿಲ್ಲದೇ ತರಗತಿಗಳು ಕೂಡ ನಡೆಯುತ್ತಿಲ್ಲ.



​ವಿದ್ಯಾರ್ಥಿಗಳು, ಪೋಷಕರಿಗೂ ಗೊಂದಲ
​ವಿದ್ಯಾರ್ಥಿಗಳು, ಪೋಷಕರಿಗೂ ಗೊಂದಲ

ಬಳ್ಳಾರಿ

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್‌ ಪದವಿ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ಈಗ ಕಾಲೇಜಿಗೆ ಬರುತ್ತಿರುವುದೇ ಕೇವಲ 100ರಿಂದ 150 ವಿದ್ಯಾರ್ಥಿಗಳು. ಶಾಲಾ ಕಾಲೇಜುಗಳನ್ನು ಡಿಸೆಂಬರ್‌ ಕೊನೆಯವರೆಗೂ ತೆರೆಯದಿರಲು ನಿರ್ಧರಿಸಿರುವ ಸರಕಾರ, ಪದವಿ ಕಾಲೇಜುಗಳನ್ನು ತೆರೆದಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.



ಕಡಿಮೆಯಾಗಿಲ್ಲ ಪೋಷಕರ ಆತಂಕ
ಕಡಿಮೆಯಾಗಿಲ್ಲ ಪೋಷಕರ ಆತಂಕ

ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿದ ಪರಿಣಾಮ ಆನ್‌ಲೈನ್‌ ತರಗತಿಗಳನ್ನು ಇಲ್ಲಿವರೆಗೆ ಮುಂದುವರಿಸಲಾಗಿತ್ತು. ಆದರೆ, ಈಗ ಕೋವಿಡ್‌ ಹರಡುವಿಕೆ ಕಡಿಮೆಯಾಗಿದೆ ಎಂಬ ಧೈರ್ಯದ ಮೇಲೆ ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸಿದ್ದರು. ಆದರೆ, ನಾನಾ ಕಾಲೇಜುಗಳಲ್ಲಿ ತರಗತಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು, ವಿದ್ಯಾರ್ಥಿಗಳು ಮತ್ತೆ ಕಾಲೇಜಿನ ಕಡೆಗೆ ತಲೆಹಾಕದಂತೆ ಮಾಡಿದೆ.



​ವಿದ್ಯಾರ್ಥಿಗಳಿಗೆ ಉಚಿತ ಕೊರೊನಾ ಟೆಸ್ಟ್‌
​ವಿದ್ಯಾರ್ಥಿಗಳಿಗೆ ಉಚಿತ ಕೊರೊನಾ ಟೆಸ್ಟ್‌

ಜಿಲ್ಲೆಯಲ್ಲಿಇದುವರೆಗೆ 8 ಸಾವಿರ ವಿದ್ಯಾರ್ಥಿಗಳ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಅಂದಾಜು 40 ವಿದ್ಯಾರ್ಥಿಗಳಿಗೆ ಕೋವಿಡ್‌ ದೃಢಪಟ್ಟಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದ್ದು, 2 ದಿನದೊಳಗೆ ಫಲಿತಾಂಶ ಕೊಡಲಾಗುತ್ತಿದೆ. ಪಾಸಿಟಿವ್‌ ಬಂದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್‌.ಎಲ್‌.ಜನಾರ್ದನ್ ತಿಳಿಸಿದ್ದಾರೆ.





from India & World News in Kannada | VK Polls https://ift.tt/39btXIQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...