ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಜಾರಿಯಲ್ಲಿದೆ. ಕರ್ಫ್ಯೂ ಮಾದರಿಯ ಲಾಕ್ಡೌನ್ ಜಾರಿಯಲ್ಲಿರುವುದರಿಂದ ನಗರದ ರಸ್ತೆಗಳು ಸಂಪೂರ್ಣ ಬಿಕೋ ಅನ್ನಿಸುತ್ತಿವೆ. ಲಾಕ್ಡೌನ್ ಪರಿಣಾಮ ಮುಖ್ಯಮಂತ್ರಿ ಅವರು ಕೂಡಾ ರಿಲ್ಯಾಕ್ಷ್ ಮೂಡ್ನಲ್ಲಿದ್ದಾರೆ. ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಯಾವುದೇ ಕಾರ್ಯಕ್ರಮವನ್ನು ಹಾಕಿಕೊಂಡಿಲ್ಲ. ಬದಲಾಗಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ತೀರಾ ಅಗತ್ಯ ಸಂದರ್ಭದ ಹೊರತಾಗಿ ಇತರ ಯಾರನ್ನೂ ಭೇಟಿಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ. ಕೊರೊನಾ ಹಾಗೂ ಇತರ ವಿಚಾರಗಳ ಕುರಿತಾಗಿ ಮಾತನಾಡಲು ಸದಾ ಬಿಎಸ್ವೈ ಮನೆಯಲ್ಲಿ ಶಾಸಕರು, ಅಧಿಕಾರಿಗಳ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಭಾನುವಾರ ಯಾರ ಭೇಟಿಗೂ ಅವಕಾಶವನ್ನು ನೀಡಿಲ್ಲ. ಹೀಗಾಗಿ ಈ ದಿನ ಯಡಿಯೂರಪ್ಪನವರು ತಮ್ಮ ಕುಟುಂಬದವರ ಜೊತೆಗೆ ಕಾಲಕಳೆಯುತ್ತಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲೂ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಭಾನುವಾರ ಯಾವುದೇ ಸಭೆಯನ್ನು ಇಟ್ಟುಕೊಂಡಿಲ್ಲ. ಬಹುತೇಕ ಸಚಿವರು, ಶಾಸಕರು ಕೂಡಾ ಲಾಕ್ಡೌನ್ ಪರಿಣಾಮ ತಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.
from India & World News in Kannada | VK Polls https://ift.tt/2TB7ufo