ಲಡಾಖ್ ಪೂರ್ವ ಭಾಗದ ಗಡಿ ನಿಯಂತ್ರಣ ರೇಖೆಯ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ಕಣಿವೆ ಸದ್ಯ ಉಭಯ ದೇಶಗಳ ಸೇನಾ ಸಂಘರ್ಷಕ್ಕೆ ಕೇಂದ್ರ ಬಿಂದು ಎನಿಸಿದೆ. ಈ ವಲಯದ ಗಡಿ ರೇಖೆಯ ಉಭಯ ಕಡೆಗಳಲ್ಲಿ ಎರಡೂ ದೇಶಗಳು ಪೈಪೋಟಿಯ ಮೇಲೆ ಸೇನೆ ಜಮಾವಣೆ ಮಾಡತೊಡಗಿವೆ. ಚೀನಾ ಈಗಾಗಲೇ 2,500ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿದ್ದು, ಕ್ರಮೇಣ ಸಂಖ್ಯೆ ಹೆಚ್ಚಿಸುತ್ತಿದೆ. ಅಲ್ಲದೆ, ಈ ಪ್ರದೇಶದಲ್ಲಿ ತಾತ್ಕಾಲಿಕ ಮೂಲಸೌಕರ್ಯ ನಿರ್ಮಾಣಕ್ಕೆ ಮುಂದಾಗಿರುವ ಚೀನಾ ಭಾರೀ ಯಂತ್ರೋಪಕರಣಗಳನ್ನು ತಂದು ನಿಲ್ಲಿಸಿದೆ. ಈ ಪ್ರದೇಶದಲ್ಲಿ ಭಾರತ ನಿಯೋಜಿಸಿರುವ ಯೋಧರ ಸಂಖ್ಯೆ ಚೀನಾಕ್ಕಿಂತಲೂ ಹೆಚ್ಚಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಮೂರೂ ಸೇನಾಪಡೆಗಳ ಮುಖ್ಯಸ್ಥರು, ಎನ್ಎಸ್ಎ ಅಜಿತ್ ಧೋವಲ್, ಸಶಸ್ತ್ರ ಪಡೆಗಳ ಜಂಟಿ ಮುಖ್ಯಸ್ಥ ಬಿಪಿನ್ ರಾವತ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ಜತೆ ಸಭೆಗೂ ಮುನ್ನ ಮೂರೂ ಪಡೆಗಳ ಮುಖ್ಯಸ್ಥರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ಮಧ್ಯೆ ಬುಧವಾರ ದಿಲ್ಲಿಯಲ್ಲಿ ಆರ್ಮಿ ಕಮಾಂಡರ್ಗಳ ದ್ವೈವಾರ್ಷಿಕ ಸಮಾವೇಶ ನಡೆಯಲಿದ್ದು, ಅಲ್ಲೂ ಚೀನಾ ಬಿಕ್ಕಟ್ಟು ಚರ್ಚೆಗೆ ಬರಲಿದೆ.
ನಮ್ಮ ಇತಿಹಾಸವನ್ನು ಭಾರತೀಯ ಸೇನಾಧ್ಯಕ್ಷ ಅಪಹಾಸ್ಯ ಮಾಡಿದ್ದಾರೆ: ನೇಪಾಳ ರಕ್ಷಣಾ ಸಚಿವ!
ಲಡಾಖ್ ಬಳಿ ಚೀನಾ ತನ್ನ ವಾಯುನೆಲೆ ವಿಸ್ತರಿಸಿದ್ದು, ಕಳೆದ ಹಲವು ತಿಂಗಳಲ್ಲಿ ಭಾರಿ ನಿರ್ಮಾಣ ಕಾರ್ಯ ನಡೆದಿದೆ. ಈ ವಾಯುನೆಲೆಯು ಯೋಧರ ನಡುವೆ ಮಾರಾಮಾರಿ ನಡೆದ ಪ್ರದೇಶದಿಂದ 200 ಕಿ.ಮೀ ದೂರದಲ್ಲಿದೆ. 4 ಫೈಟರ್ಜೆಟ್ಗಳು, ಯುದ್ಧ ಹೆಲಿಕಾಪ್ಟರ್ಗಳನ್ನು ಚೀನಾ ಇಲ್ಲಿ ತಂದು ನಿಲ್ಲಿಸಿರುವುದು ಉಪಗ್ರಹ ಆಧರಿತ ಚಿತ್ರಗಳಿಂದ ದೃಢಪಟ್ಟಿದೆ.
ಮೇ 5,6 ರಂದು ಲಡಾಖ್ನಲ್ಲಿ ಉಭಯ ಯೋಧರ ಮಾರಾಮಾರಿ
ಜಟಾಪಟಿ ವೇಳೆ ಎರಡೂ ಕಡೆಯ 100ಕ್ಕೂ ಹೆಚ್ಚು ಯೋಧರಿಗೆ ಗಾಯ
ಸಂಘರ್ಷದ ನಂತರ ಹಲವು ಬಾರಿ ನಡೆದ ಸಂಧಾನ ಯತ್ನ ವಿಫಲ
ಮೇ 9ರಂದು ಸಿಕ್ಕಿಂ ವಲಯದಲ್ಲೂ ಉಭಯ ಪಡೆಗಳ ಸಂಘರ್ಷ
from India & World News in Kannada | VK Polls https://ift.tt/3d5EfJx