ಬೆಂಗಳೂರು: ಪ್ರಸ್ತಾಪಿತ ಕಾಯಿದೆಯ ಕರಡು ಪ್ರತಿಯನ್ನು ರಾಜ್ಯಗಳಿಗೆ ಕಳುಹಿಸಿ ಕೊಟ್ಟಿರುವ ಕೇಂದ್ರ ಸರಕಾರ, ಈ ಸಂಬಂಧ ಕ್ರಮ ಕೈಗೊಳ್ಳಲು ಸೂಚಿಸಿದೆ. ಉದ್ದೇಶಿತ ಕಾಯಿದೆ ಬಗ್ಗೆ ಜೂನ್ 5ರ ಒಳಗೆ ರಾಜ್ಯಗಳು ಕೇಂದ್ರಕ್ಕೆ ಅಭಿಪ್ರಾಯ ತಿಳಿಸಬೇಕಿದೆ. ಈಗಾಗಲೇ ಕಾಯಿದೆಯ ಸಾಧಕ, ಬಾಧಕದ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದಲ್ಲಿ ಪರಾಮರ್ಶೆ ನಡೆಸುತ್ತಿದೆ. ವಾರದೊಳಗೆ ಈ ನಿಟ್ಟಿನಲ್ಲಿ ವಿವರವಾದ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು, ಬಡವರ ಹಿತ ಮುಖ್ಯ ಹೊಸ ಕಾಯಿದೆ ಬಂದ ಬಳಿಕ ರೈತರ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ (10 ಎಚ್ಪಿವರೆಗೆ) ಪೂರೈಸುವ ಯೋಜನೆಗೆ ಧಕ್ಕೆಯಾಗಬಹುದು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೂ ಸಮಸ್ಯೆಯಾಗಬಹುದು ಎಂಬ ಆತಂಕವಿದೆ. ಈ ಯೋಜನೆಗಳು ಬಹಳ ವರ್ಷಗಳಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿವೆ. ಇದಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎನ್ನುವುದು ರಾಜ್ಯದ ನಿಲುವಾಗಿದೆ. ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ರಾಜ್ಯ ಸರಕಾರ ವರದಿಯನ್ನು ಸಿದ್ಧಪಡಿಸುತ್ತಿದೆ. ಒಂದು ವೇಳೆ ಕೇಂದ್ರ ಸರಕಾರ ರಾಜ್ಯದ ಮನವಿಯನ್ನು ಪರಿಗಣಿಸದೇ ಇದ್ದರೆ ಹಲವು ವರ್ಷಗಳಿಂದ ಉಚಿತವಾಗಿ ವಿದ್ಯುತ್ ಪಡೆಯುತ್ತಿರುವ ರೈತ ಸಮುದಾಯ ಹಾಗೂ ಅತ್ಯಂತ ಬಡವರ್ಗದ ವಿರೋಧ ಎದುರಿಸಬೇಕಾಗುತ್ತದೆ. ವಿಶೇಷವಾಗಿ ನಾಡಿನ ರೈತ ಸಮುದಾಯ ಸರಕಾರದ ವಿರುದ್ಧ ಬೀದಿಗಿಳಿದರೂ ಅಶ್ಚರ್ಯವಿಲ್ಲ. ಈ ಸಂಗತಿ ಸರಕಾರದ ಗಮನದಲ್ಲಿರುವುದರಿಂದಲೇ ಉಚಿತ ವಿದ್ಯುತ್ ಯೋಜನೆಯನ್ನು ಯಥಾಸ್ಥಿತಿ ಮುಂದುವರಿಸಬೇಕೆಂಬುದು ನಿಲುವಾಗಿದೆ. ಸಂಪುಟದಲ್ಲಿ ಚರ್ಚೆ ನಿರೀಕ್ಷೆಈಗಾಗಲೇ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಪ್ರತಿಪಕ್ಷಗಳು ಹಾಗೂ ರೈತರ ವಿರೋಧ ಎದುರಿಸುತ್ತಿರುವ ರಾಜ್ಯ ಸರಕಾರ ಈ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆಯಿಡಲು ನಿರ್ಧರಿಸಿದೆ. ಇದೇ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕವೇ ಕೇಂದ್ರ ಸರಕಾರಕ್ಕೆ ಕರ್ನಾಟಕ ಸರಕಾರ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆಗಳಿವೆ. ಉದ್ದೇಶಿತ ಕಾಯಿದೆಯ ಕರಡು ಪ್ರತಿ ನಮಗೆ ಲಭ್ಯವಾಗಿದೆ. ಅದನ್ನು ವಿಸ್ತೃತವಾಗಿ ಅಧ್ಯಯನ ಮಾಡಲಾಗುತ್ತಿದೆ. ಜೂನ್ 5ರ ಒಳಗೆ ರಾಜ್ಯದ ಅಭಿಪ್ರಾಯ ತಿಳಿಸಬೇಕಿದೆ. ರಾಜ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ. - ಮಹೇಂದ್ರ ಜೈನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ
from India & World News in Kannada | VK Polls https://ift.tt/2TEDpMg