ದುರ್ಬಲಗೊಳ್ಳುತ್ತಿರುವ ಭೂಮಿಯ ಅಯಾಸ್ಕಾಂತೀಯ ಶಕ್ತಿ, ಕಾದಿದೆ ಅಪಾಯ!

ಆಶ್ಚರ್ಯ ಎನಿಸಿದರೂ ಇದು ನಿಜ. ಭೂಮಿಯ ಆರೋಗ್ಯ ಹದಗೆಡುತ್ತಿದೆ. ಮನುಷ್ಯನ ಮಿತಿಮೀರಿದ ಚಟುವಟಿಕೆಯಿಂದ ಭೂಮಿಯ ಅಯಾಸ್ಕಾಂತೀಯ ಶಕ್ತಿ ಕಳೆದುಕೊಳ್ಳುತ್ತಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಅವರು ಹೇಳುವ ಪ್ರಕಾರ, ಭೂಮಿಯ ಅಯಸ್ಕಾಂತೀಯ ವಲಯವು (ಮ್ಯಾಗ್ನೆಟಿಕ್‌ ಫೀಲ್ಡ್‌) ದುರ್ಬಲಗೊಳ್ಳುತ್ತಿದೆ. ಇದು ಉಪಗ್ರಹ ಮತ್ತು ದೂರ ಸಂಪರ್ಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.ಭೂಮಿಯ ಮೇಲೆ ಜೀವಿಗಳು ಬದುಕುಳಿಯಲು, ವಿವಿಧ ಕಡೆಗೆ ಸಂಚರಿಸಲು, ಉಪಗ್ರಹ, ಮೊಬೈಲ್‌ಗಳು ಕಾರ್ಯ ನಿರ್ವಹಿಸಲು ಅಯಸ್ಕಾಂತೀಯ ವಲಯವು ಮಹತ್ವದ ಪಾತ್ರ ವಹಿಸುತ್ತದೆ. ಸೂರ್ಯನಿಂದ ಬರುವ ಅಪಾಯಕಾರಿ ಕಾಸ್ಮಿಕ್‌ ವಿಕಿರಣ ಮತ್ತು ವಿದ್ಯುದೀಕೃತ ಕಣಗಳನ್ನು ಇದು ತಡೆಯುತ್ತದೆ. ಆದರೆ, ಇದೀಗ ಇದರ ಶಕ್ತಿಯು ಶೇ.9ರಷ್ಟು ಕುಗ್ಗಿದೆ ಎಂದು ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ (ಇಎಸ್‌ಎ)ಹೇಳಿದೆ.ಹವಾಮಾನ ವೈಪರೀತ್ಯದಿಂದ ಹಸಿರು ಬಣ್ಣಕ್ಕೆ ತಿರುಗುತ್ತಿದೆ ಅಂಟಾರ್ಟಿಕಾ

1970ರಿಂದ 1920ರವರೆಗಿನ 50 ವರ್ಷಗಳ ಅವಧಿಯಲ್ಲಿ ಆಫ್ರಿಕಾದಿಂದ ದಕ್ಷಿಣ ಅಮೆರಿಕವರೆಗಿನ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಅಯಸ್ಕಾಂತೀಯ ವಲಯ ದುರ್ಬಲಗೊಂಡಿರುವುದು ಕಂಡು ಬಂದಿದೆ. ಮೊದಲಿಗಿಂತ ಭೂಮಿ ಈಗ ಶೇ. 9ರಷ್ಟು ಶಕ್ತಿ ಕಳೆದುಕೊಂಡಿದೆ. ಭೂಮಿಯ ಅಯಸ್ಕಾಂತೀಯ ವಲಯದ ಬಗ್ಗೆ ಅಧ್ಯಯನಕ್ಕೆಂದೇ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ ಕಳುಹಿಸಿದ ವಿಶೇಷ 'ಸ್ವಾರ್ಮ್‌' ಉಪಗ್ರಹವು ನಡೆಸಿದ ಅಧ್ಯಯನದಿಂದ ಈ ವಿಷಯ ಗೊತ್ತಾಗಿದೆ. ಆದರೆ, ಸದ್ಯಕ್ಕೆ ಈ ವಿದ್ಯಮಾನಕ್ಕೆ ಕಾರಣ ತಿಳಿದುಬಂದಿಲ್ಲ. ಹೀಗೆ ಅಯಸ್ಕಾಂತೀಯ ವಲಯ ದುರ್ಬಲಗೊಂಡ ಪ್ರದೇಶವನ್ನು ವಿಜ್ಞಾನಿಗಳು 'ಸೌತ್‌ ಅಟ್ಲಾಂಟಿಕ್‌ ಅನಾಮಲಿ' ಎಂದು ಹೆಸರಿಸಿದ್ದಾರೆ.

''ಸ್ವಾರ್ಮ್‌ ಉಪಗ್ರಹಗಳ ನೆರವಿನಿಂದ ಅದೃಷ್ಟವಶಾತ್‌ ನಮಗೆ ಈ ವಿಷಯ ಗೊತ್ತಾಗಿದೆ. ಇದಕ್ಕೆ ಕಾರಣ ಹುಡುಕುವುದು ಈಗ ನಮ್ಮ ಮುಂದಿರುವ ಸವಾಲು. ಭೂಮಿಯ ಆಳದಲ್ಲಿ ಯಾವೆಲ್ಲಾಅಂಶಗಳು ಇದಕ್ಕೆ ಕಾರಣವಾಗುತ್ತಿವೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ,'' ಎಂದು ವರದಿಯಲ್ಲಿ 'ಇಎಸ್‌ಎ' ತಿಳಿಸಿದೆ.

ಭೂಮಿಯ ಅಯಾಸ್ಕಾಂತೀಯ ವಲಯ ದುರ್ಬಲಗೊಳ್ಳುವುದು ಹೊಸತೇನಲ್ಲ. ಭೂಮಿಯ ಇತಿಹಾಸದಲ್ಲಿ ಪ್ರತಿ 2.5 ಲಕ್ಷ ವರ್ಷಗಳಿಗೊಮ್ಮೆ ಇಂಥ ಪ್ರಕ್ರಿಯೆ ಜರುಗುತ್ತಲೇ ಇದೆ. ನಿಜ ಹೇಳುವ ಪ್ರಕಾರ, ಇಡೀ ಅಯಾಸ್ಕಾಂತೀಯ ವಲಯವೇ ಉಲ್ಟಾ ಆಗುವುದು ಇನ್ನೂ ಬಾಕಿ ಇದೆ. ಅಂಥ ವಿದ್ಯಮಾನ ಜರುಗಿದರೆ ಭಾರಿ ಅಪಾಯವೇ ಕಾದಿದೆ. ಅಯಾಸ್ಕಾಂತೀಯ ವಲಯದಿಂದಲೇ ಕೆಲಸ ಮಾಡುವ ಉಪಗ್ರಹ ಮತ್ತು ಮೊಬೈಲ್‌ ಸಂಪರ್ಕಕ್ಕೆ ಭಾರಿ ಹೊಡೆತ ಬೀಳಲಿದೆ.

ಆದರೂ ಸದ್ಯಕ್ಕೆ ಪರಿಸ್ಥಿತಿ ಕೈ ಮೀರಿಲ್ಲಎಂದು ವಿಜ್ಞಾನಿಗಳು ಭರವಸೆ ನೀಡಿದ್ದಾರೆ. ಅಯಾಸ್ಕಾಂತೀಯ ವಲಯ ಕ್ಷೀಣವಾಗಿರುವ ಪ್ರದೇಶದಲ್ಲಿ ಹಾರುವ ವಿಮಾನಗಳು ಮತ್ತು ಉಪಗ್ರಹಗಳು ಕೆಲವು ತಾಂತ್ರಿಕ ಅಡಚಣೆ ಎದುರಿಸುವ ಸಾಧ್ಯತೆ ಇದೆ.

ಇದಕ್ಕಿಂತ ಮುಖ್ಯವಾಗಿ ಪಕ್ಷಿಗಳು, ಆಮೆಗಳು ಸೇರಿದಂತೆ ಹಲವು ಜೀವಿಗಳು ದಿಕ್ಕು ನಿರ್ಧರಿಸಲು ಅಯಸ್ಕಾಂತೀಯ ವಲಯವನ್ನು ಬಳಸುತ್ತವೆ. ಅದು ಬದಲಾಗುವುದರಿಂದ ಈ ಜೀವಜಗತ್ತು ದಿಕ್ಕು ಕಾಣದಂತಾಗುತ್ತವೆ. ಅಲ್ಲದೆ, ದಿಕ್ಸೂಚಿ ಉಪಕರಣವೂ ಉತ್ತರ-ದಕ್ಷಿಣ ಧ್ರುವಗಳನ್ನು ತಪ್ಪಾಗಿ ತೋರಿಸಲಿದೆ. ಇದರಿಂದ ವಿಮಾನಯಾನ, ಸಮುದ್ರಯಾನಕ್ಕೆ ತೊಂದರೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಭೂಮಿಯ ಮೇಲ್ಮೈನಿಂದ ಸುಮಾರು 3,000 ಕಿ.ಮೀ. ಆಳದಲ್ಲಿರುವ ಅಪಾರ ಪ್ರಮಾಣದ ಬಿಸಿ ದ್ರವರೂಪದ ಕಬ್ಬಿಣವು ಭೂಮಿಯ ಮೇಲ್ಮೈ ವಾತಾವರಣದಲ್ಲಿಅಯಸ್ಕಾಂತೀಯ ವಲಯವನ್ನು ಸೃಷ್ಟಿಸಿದೆ. ಅಲ್ಲಿಂದ ಉತ್ಪತ್ತಿಯಾಗುವ ಎಲೆಕ್ಟ್ರಿಕ್‌ ಅಲೆಗಳು, ನಮ್ಮ ಅಯಸ್ಕಾಂತೀಯ ವಲಯವನ್ನು ಸೃಷ್ಟಿಸಿ, ಅದರ ಬದಲಾವಣೆಗೆ ಕಾರಣವಾಗುತ್ತವೆ.



from India & World News in Kannada | VK Polls https://ift.tt/2ZAFAUW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...