ಬೆಳೆಗಳ ಮೇಲೆ ದಾಳಿ ಇಡ್ತಿವೆ ರಾಕ್ಷಸ ಮಿಡತೆಗಳು..! ಇವುಗಳ ಮೂಲ ಪಾಕಿಸ್ತಾನ..?

(ಮಹಾರಾಷ್ಟ್ರ): ಇಲ್ಲಿನ ವಿದರ್ಭ ಪ್ರಾಂತ್ಯದಲ್ಲಿ ಮೊದಲೇ ಮಳೆ ಕಡಿಮೆ. ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚು..! ಇನ್ನು ಈಗಂತೂ ಕೊರೊನಾ ವೈರಸ್ ಹಾವಳಿ, ಅದರ ಜೊತೆಯಲ್ಲೇ ರಾಕ್ಷಸ ಮಿಡತೆಗಳ ಹಾವಳಿಯೂ ಈ ಭಾಗದಲ್ಲಿ ಹೆಚ್ಚಾಗಿದೆ. ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ರಾಕ್ಷಸ ಗಾತ್ರದ ಕೋಟ್ಯಂತರ ಮಿಡತೆಗಳು ದಾಳಿ ಇಡುತ್ತಿವೆ ಎಂಬುದನ್ನು ಕೇಳಿ ತಿಳಿದಿದ್ದ ನಾಗ್ಪುರ ಭಾಗದ ರೈತರು, ಇದೀಗ ಅಕ್ಷರಶಃ ಮಿಡತೆಗಳನ್ನು ಕಂಡು ದಂಗುಬಡಿದಿದ್ದಾರೆ. ರಾಕ್ಷಸಾಕಾರದ ಕೋಟ್ಯಂತರ ಮಿಡತೆಗಳು ಒಮ್ಮೆಲೇ ಬೆಳೆಗಳ ಮೇಲೆ ದಾಳಿ ಮಾಡಿ ಕ್ಷಣಾರ್ಧದಲ್ಲಿ ತಿಂದು ಮುಗಿಸುತ್ತಿವೆ. ಇವುಗಳ ದಾಳಿ ತಡೆಯೋದೇ ಹರಸಾಹಸವಾಗಿ ಪರಿಣಮಿಸಿದೆ. ಈ ಭಾಗದ ಹಿರಿಯರ ಪ್ರಕಾರ, 1974ರಲ್ಲಿ ಈ ರೀತಿಯಾದ ಹಾವಳಿ ಈ ಭಾಗದ ಕೃಷಿಕರನ್ನು ಕಾಡಿತ್ತಂತೆ.. ಮಧ್ಯಪ್ರದೇಶ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸಿರುವ ಈ ಮಿಡತೆಗಳು ಇಲ್ಲಿನ ಮೋರ್ಶಿ, ಅಸ್ಥಿ, ವಾಡಾಲಾ, ಸಾಹುರ್, ಅಮರಾವತಿ ಹಾಗೂ ವಾರ್ದಾ ಜಿಲ್ಲೆಗಳಲ್ಲಿ ಹಾವಳಿ ಇಡುತ್ತಿವೆ. ರೈತರು ಬೆಳೆದ ತರಕಾರಿ, ನಾಗ್ಪುರದ ಜನಪ್ರಿಯವಾದ ಕಿತ್ತಳೆ ಸೇರಿದಂತೆ ಹಲವು ಬೆಳೆಗಳನ್ನು ಹಾಳುಗೆಡವುತ್ತಿವೆ. ಕೆಲವು ರೈತರ ನಂಬಿಕೆ ಪ್ರಕಾರ, ಈ ಮಿಡತೆಗಳ ಮೂಲ ಪಾಕಿಸ್ತಾನವಂತೆ..! ಏಪ್ರಿಲ್ ಮಧ್ಯ ಭಾಗದಲ್ಲಿ ಪಾಕಿಸ್ತಾನದ ಮೂಲಕ ರಾಜಸ್ತಾನ ಪ್ರವೇಶ ಮಾಡಿರುವ ಈ ಮಿಡತೆಗಳು, ಅಲ್ಲಿಂದ ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶಕ್ಕೆ ತೆರಳಿ ಇದೀಗ ಮಹಾರಾಷ್ಟ್ರಕ್ಕೆ ಕಾಲಿಟ್ಟಿವೆ. ಆಹಾರ ಅರಸುತ್ತಾ ಸಾಗುವ ಈ ಮಿಡತೆಗಳು, ಸಿಕ್ಕ ಸಿಕ್ಕ ಕೃಷಿ ಭೂಮಿಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಾನಿ ಮಾಡಿವೆ.


from India & World News in Kannada | VK Polls https://ift.tt/36xbyms

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...