ಹೊಸದಿಲ್ಲಿ: ವಿದೇಶಗಳಿಂದ ಭಾರತೀಯರನ್ನು ಕರೆ ತರುತ್ತಿರುವ ಏರ್ ಇಂಡಿಯಾd ವಿಶೇಷ ವಿಮಾನದಲ್ಲಿ ಮಧ್ಯದ ಸೀಟವನ್ನು ಖಾಲಿ ಬಿಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ತಡೆಯಲು ಸಾಮಾಜಿಕ ಅಂತರ ಪಾಲಿಸಬೇಕು ಎಂಬುದು ಸಾಮಾನ್ಯ ಜ್ಞಾನ ಎಂಬುದಾಗಿ ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಧ್ಯದ ಸೀಟಿನ ಬುಕ್ಕಿಂಗ್ಗೆ ಜೂನ್ 6ರವರೆಗೆ ಮಾತ್ರ ಅವಕಾಶ ನೀಡುತ್ತೇವೆ. ಸಂಸ್ಥೆಗಳ ವಾಣಿಜ್ಯ ಹಿತಾಸಕ್ತಿಗಿಂತ ಹೆಚ್ಚಾಗಿ ಸರಕಾರ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂಬುದಾಗಿಯೂ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರದ ಕಿವಿ ಹಿಂಡಿದೆ. ವಿದೇಶದಿಂದ ಆಗಮಿಸಲಿರುವ ವಿಮಾನಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಈ ಸಂದೇಶ ಇದೀಗ ದೇಶದೊಳಗಿನ ವಿಮಾನಯಾನಗಳ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಸುಮಾರು ಎರಡು ತಿಂಗಳ ನಂತರ ಇಂದು ಅಂದರೆ ಸೋಮವಾರದಿಂದ ದೇಶಾದ್ಯಂತ ವಿಮಾನ ಸೇವೆಗಳು ಆರಂಭವಾಗಿವೆ. ಮೇ 7 ರಿಂದ 'ವಂದೇ ಭಾರತ್' ಹೆಸರಿನಲ್ಲಿ ವಿಶೇಷ ವಿಮಾನಗಳ ಮೂಲಕ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ದೇಶಕ್ಕೆ ಕರೆತರುತ್ತಿದೆ. ಈ ಸಂಬಂಧ ಆರಂಭದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಧ್ಯದ ಸೀಟನ್ನು ಖಾಲಿ ಬಿಡುವಂತೆ ಸೂಚಿಸಿತ್ತು. ಆದರೆ ಇದನ್ನು ವಿಮಾನಗಳಲ್ಲಿ ಪಾಲಿಸುತ್ತಿಲ್ಲ ಎಂಬುದಾಗಿ ಏರ್ ಇಂಡಿಯಾ ಪೈಲಟ್ ದೇವನ್ ಯೋಗೇಶ್ ಕಣನಿ ಎಂಬವರು ಬಾಂಬೆ ಹೈಕೋರ್ಟ್ ದೂರು ಸಲ್ಲಿಸಿದ್ದರು. ಈ ವೇಳೆ ಏರ್ ಇಂಡಿಯಾ. ತನ್ನ ಆದೇಶವನ್ನು ಕಡೆಗಣಿಸುವಂತೆ ಸರಕಾರ ಮತ್ತೊಂದು ಆದೇಶ ಹೊರಡಿಸಿತ್ತು ಎಂಬುದಾಗಿ ಹೈಕೋರ್ಟ್ಗೆ ತಿಳಿಸಿತ್ತು. ಈ ಸಂದರ್ಭದಲ್ಲಿ ಮಧ್ಯಂತರ ಆದೇಶ ಹೊರಡಿಸಿದ್ದ ನ್ಯಾಯಾಲಯ ಮಧ್ಯದ ಸೀಟವನ್ನು ಖಾಲಿ ಬಿಡುವಂತೆ ಸೂಚಿಸಿತ್ತು. ಆದರೆ ಇದನ್ನು ಪ್ರಶ್ನಿಸಿ, ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಸರಕಾರ ಮತ್ತು ಏರ್ ಇಂಡಿಯಾ ಸೋಮವಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದವು. ಹೀಗಾಗಿ ಈದ್ ರಜೆಯ ನಡುವೆಯೂ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ವಿಚಾರಣೆ ವೇಳೆ, “ಸಾಮಾಜಿಕ ಅಂತರವನ್ನು ಪಾಲಿಸಬೇಕು ಎನ್ನುವುದು ಸಾಮಾನ್ಯ ಜ್ಞಾನ. ಹೊರಗಡೆ ಕನಿಷ್ಠ 6 ಅಡಿ ಅಂತರವನ್ನು ಕಾಪಾಡಬೇಕು, ಒಳಗಡೆ ಏನು,” ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಪ್ರಶ್ನಿಸಿದರು. ಏರ್ ಇಂಡಿಯಾ ಮತ್ತು ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೊರೊನಾ ವೈರಸ್ ತಡೆಯಲು ಟೆಸ್ಟಿಂಗ್ ಮತ್ತು ಕ್ವಾರಂಟೈನ್ ಉತ್ತಮ ಮಾರ್ಗ, ಸೀಟಿನ ನಡುವಿನ ಅಂತರವಲ್ಲ ಎಂದು ವಾದಿಸಿದರು. ಮಧ್ಯದ ಸೀಟನ್ನು ಖಾಲಿ ಬಿಡದೇ ಇರುವ ತೀರ್ಮಾನವನ್ನು ತಜ್ಞರ ಜೊತೆ ಸಮಾಲೋಚಿಸಿಯೇ ತೆಗೆದುಕೊಳ್ಳಲಾಗಿದೆ. ಮಧ್ಯದ ಸೀಟು ಖಾಲಿ ಬಿಡುವುದರಿಂದ ಒಟ್ಟಾಗಿ ಪ್ರಯಾಣಿಸುವ ಕುಟುಂಬದವರಿಗೂ ತೊಂದರೆಯಾಗುತ್ತದೆ ಎಂದರು. “ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ? ಇದು ವಿಮಾನ, ಈಗ ಸೋಂಕು ಹರಡಬಾರದು ಎಂದು ವೈರಸ್ಗೆ ತಿಳಿಯುತ್ತದೆಯೇ? ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತುಕೊಂಡರೆ ಸೋಂಕು ಹರಡುತ್ತದೆ,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಜೊತೆಗೆ, ಈಗಿರುವ ಬುಕ್ಕಿಂಗ್ನಂತೆ ಮದ್ಯದ ಸೀಟಿನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಿ. ಇದಾದ ನಂತರ ಮಧ್ಯದ ಸೀಟಿನಲ್ಲಿ ಯಾರನ್ನೂ ಕೂರಿಸಬೇಡಿ ಎಂಬುದಾಗಿ ನ್ಯಾಯಾಲಯ ಸೂಚನೆ ನೀಡಿತು. ವಾಣಿಜ್ಯ ಲಾಭಗಳನ್ನು ಪಕ್ಕಕ್ಕಿಟ್ಟು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನಾಗರೀಕ ವಿಮಾನಯಾನ ನಿರ್ದೇಶನಾಲಯಕ್ಕೆ ತೀರ್ಮಾನ ತೆಗೆದುಕೊಳ್ಳುವ ಪೂರ್ಣ ಅಧಿಕಾರ ಇದೆ. ಈ ಸಂಬಂಧ ಜೂನ್ 2 ರಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಜೊತೆಗೆ ಅಗತ್ಯ ಬಿದ್ದಲ್ಲಿ ದೇಶದೊಳಗಿನ ವಿಮಾನ ಪ್ರಯಾಣದ ಬಗ್ಗೆಯೂ ಈ ಬಗ್ಗೆ ಚಿಂತನೆ ನಡೆಸುವಂತೆ ಹೇಳಿದೆ.
from India & World News in Kannada | VK Polls https://ift.tt/2TBtPcU