ಭಾರತ vs ಶ್ರೀಲಂಕಾ 1ನೇ ಟಿ20: ಅಕಾಲಿಕ ಮಳೆ, ಪಿಚ್‌ ಒಣಗಿಸಲು ಹರಸಾಹಸ

ಗುವಾಹಟಿ: ಅಕಾಲಿಕ ಮಳೆ ಭಾರತ ಮತ್ತು ನಡುವೆ ಇಲ್ಲಿ ನಡೆಯಬೇಕಿದ್ದ 3 ಪಂದ್ಯಗಳ ಸರಣಿಯ 1ನೇ ಟಿ20 ಪಂದ್ಯಕ್ಕೆ ಅಡಚಣೆ ತಂದೊಡ್ಡಿತು. ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಇನ್ನೇ ಪಂದ್ಯ ಶುರುವಾಗುವುದಷ್ಟೇ ಬಾಕಿ ಇದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆ ಪಂದ್ಯ ಶುರುವಾಗದಂತೆ ವಿಘ್ನ ತಂದಿತು. ಇತ್ತೀಚಿನ ವರದಿ ಪ್ರಕಾರ ರಾತ್ರಿ 9ರ ಬಳಿಕ ಮೈದಾನದ ಪಿಚ್‌ ಮತ್ತು ಔಟ್‌ ಫೀಲ್ಡ್‌ ಪರಿಶೀಲನೆ ನಡೆಸಿ ಪಂದ್ಯ ಆರಂಭಿಸುವ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮಧ್ಯೆ ಕ್ರೀಡಾಂಗಣದ ಸಿಬ್ಬಂದಿ ಒದ್ದೆಯಾಗಿದ್ದ ಪಿಚ್‌ ಒಣಗಿಸಲು ವ್ಯಾಕ್ಯೂಮ್ ಕ್ಲೀನ್‌ನರ್‌ ಬಳಸಿ ಹರಸಾಹಸ ನಡೆಸುತ್ತಿದ್ದರು. ಭಾರತ ತಂಡ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಈ ಸರಣಿಗೆ ತನ್ನ ಪ್ರಮುಖ ಆಟಗಾರರಾದ ರೋಹಿತ್‌ ಶರ್ಮಾ ಮತ್ತು ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಿದೆ. ಆದರೆ ಪಡೆಗೆ ಮತ್ತಿಬ್ಬರು ಸ್ಟಾರ್‌ಗಳ ಮರು ಸೇರ್ಪಡೆಯಾಗಿದ್ದು, ಗಾಯದ ಸಮಸ್ಯೆಗಳಿಂದ ಚೇತರಿಸಿರುವ ಶಿಖರ್‌ ಧವನ್‌ ಮತ್ತು ಜಸ್‌ಪ್ರೀತ್‌ ಬುಮ್ರಾ ಕಮ್‌ಬ್ಯಾಕ್‌ ಮಾಡಿ ಆಡುವ 11ರ ಬಳಗದಲ್ಲೂ ಸ್ಥಾನ ಗಿಟ್ಟಿಸಿದ್ದಾರೆ. ಇನ್ನು ಬಾರಾಬತಿ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಲಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಇಲ್ಲಿ ರನ್‌ ಹೆಕ್ಕುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಕ್ಯಾಪ್ಟನ್‌ ಕೊಹ್ಲಿ ಟಾಸ್‌ ಗೆದ್ದು ರನ್‌ ಚೇಸ್‌ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೂ, ತಂಡದಲ್ಲಿ ವಾಷಿಂಗ್ಟನ್‌ ಸುಂದರ್ ಮತ್ತು ಕುಲ್ದೀಪ್‌ ಯಾದವ್‌ ಅವರಂತಹ ಗುಣಮಟ್ದ ಸ್ಪಿನ್ನರ್‌ಗಳಿದ್ದು ಲಂಕಾ ಪಡೆಯನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿ ಫೀಲ್ಡಿಂಗ್‌ ನಿರ್ಧಾರಕ್ಕೆ ಕೊಹ್ಲಿ ಮನಸ್ಸು ಮಾಡಿದರು. ಮತ್ತೊಂದೆಡೆ ಶ್ರೀಲಂಕಾ ತಂಡದ ನಾಯಕ ಲಸಿತ್‌ ಮಾಲಿಂಗ ಟಾಸ್‌ ಬಳಿಕ ಮಾತನಾಡಿ, ತಮ್ಮ ತಂಡದಲ್ಲೂ ಇಬ್ಬರು ಸ್ಪಿನ್ನರ್‌ಗಳು ಮತ್ತು 3 ವೇಗದ ಬೌಲರ್‌ಗಳಿಗೆ ಸ್ಥಾನ ನೀಡಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ತಂಡ ರಚಿಸಿಕೊಳ್ಳುವ ಕಡೆಗೆ ಶ್ರಮಿಸುತ್ತಿರುವುದಾಗಿ ಹೇಳಿದರು. ಆಸ್ಟ್ರೇಲಿಯಾ ಆತಿಥ್ಯದಲ್ಲಿ ಇದೇ ವರ್ಷ ಟಿ20 ವಿಶ್ವಕಪ್‌ ಅಕ್ಟೋಬರ್‌ನಲ್ಲಿ ನಡೆಯಲಿದೆ. ಸತತ 7ನೇ ಬಾರಿ ಸಂಜುಗೆ ಅವಕಾಶವಿಲ್ಲ ಟೀಮ್‌ ಇಂಡಿಯಾದ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದಲ್ಲಿ ಕೇರಳದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ಗೆ ಸ್ಥಾನ ಸಿಕ್ಕಿದೆಯಾದರೂ ಆಡುವ 11ರ ಬಳಗದಲ್ಲಿ ಮಾತ್ರ ಅವಕಾಶ ಲಭ್ಯವಾಗಲೇ ಇಲ್ಲ. ಶ್ರೀಲಂಕಾ ವಿರುದ್ಧದ ಮೊದಲ ಟಿ20-ಐ ಪಂದ್ಯದ ಪ್ಲೇಯಿಂಗ್‌ ಇಲೆವೆನ್‌ನಲ್ಲೂ ಸ್ಯಾಮ್ಸನ್‌ಗೆ ಸ್ಥಾನ ಲಭ್ಯವಾಗದೆ, ತಂಡದಲ್ಲಿದ್ದರೂ ಸತತ 7ನೇ ಪಂದ್ಯದಲ್ಲಿ ಅವಕಾಶ ಪಡೆಯೇ ಹೋದಂತಾಗಿದೆ. ಇದೇ ವೇಳೆ ಸಂಜುಗೆ ಅವಕಾಶ ಸಿಗದೇ ಇರುವುದಕ್ಕೆ ಸೋಷಿಯಲ್‌ ಮೀಡಿಯಾಗಳ ಮೂಲಕ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಶ್ರೀಲಂಕಾ ಪ್ಲೇಯಿಂಗ್‌ 11 ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಕುಶಲ್‌ ಪೆರೆರಾ (ವಿಕೆಟ್‌ಕೀಪರ್‌), ಒಶಾದ ಫರ್ನಾಂಡೊ, ಭಾನುಕ ರಾಜಪಕ್ಷ, ಧನಂಜಯ ಡಿ'ಸಿಲ್ವಾ, ದಸುನ್‌ ಶನಕ, ಇಸುರು ಉದನ, ವಾನಿಂದು ಹಸರಂಗ, ಲಾಹಿರು ಕುಮಾರ, ಲಸಿತ್‌ ಮಾಲಿಂಗ (ನಾಯಕ). ಟೀಮ್‌ ಇಂಡಿಯಾ ಪ್ಲೇಯಿಂಗ್‌ 11 ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಶಿವಂ ದುಬೇ, ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌ ಯಾದವ್‌, ಶಾರ್ದುಲ್‌ ಠಾಕೂರ್‌, ನವದೀಪ್‌ ಸೈನಿ, ಜಸ್‌ಪ್ರೀತ್‌ ಬುಮ್ರಾ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39FyIYT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...