ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿರುವ ಟೀಮ್ ಇಂಡಿಯಾ, ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಭರ್ಜರಿ ಮುನ್ನಡೆ ದಾಖಲಿಸಿದೆ. ಈ ಮೊದಲು ನಡೆದ ಮೊದಲ ಟಿ20 ಪಂದ್ಯದಲ್ಲೂ ಆರು ವಿಕೆಟ್ ಅಂತರದ ಗೆಲುವು ಬಾರಿಸಿತ್ತು. ಸತತ ಎರಡನೇ ಪಂದ್ಯದಲ್ಲೂ ಅರ್ಧಶತಕ ಸಾಧನೆ ಮಾಡಿರುವ ವಿಕೆಟ್ ಕೀಪರ್ ಬಲಗೈ ಆರಂಭಿಕ ಬ್ಯಾಟ್ಸ್ಮನ್ ಕರ್ನಾಟಕದ ಕೆಎಲ್ ರಾಹುಲ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು. ಈ ಮಧ್ಯೆ ತಗಾದೆ ಎತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಣಾ ವಿವರಣೆಗಾರ , ಹೆಸರು ಉಲ್ಲೇಖಿಸದೆಯೇ ಪಂದ್ಯಶ್ರೇಷ್ಠ ಪ್ರಶಸ್ತಿಯು ಬೌಲರ್ ಒಬ್ಬರಿಗೆ ಸಲ್ಲಬೇಕಿತ್ತು ಎಂದು ಹೇಳಿಕೆ ಕೊಟ್ಟಿದ್ದರು. ಇದಕ್ಕೆ ರಿಯಾಕ್ಷನ್ ನೀಡಿರುವ ಭಾರತೀಯ ಆಲ್ರೌಂಡರ್ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬೌಲರ್ ಹೆಸರನ್ನು ಉಲ್ಲೇಖಿಸಿ ಎಂದು ಮಂಜ್ರೇಕರ್ ಕಾಲೆಳೆದರು. ಸಂಜಯ್ ಮಂಜ್ರೇಕರ್ ತಕ್ಷಣವೇ ಇದಕ್ಕೆ ಹ್ಹ..ಹ್ಹ.. ಎಂದು ಉತ್ತರಿಸುತ್ತಾ, ನೀವು ಅಥವಾ ಜಸ್ಪ್ರೀತ್ ಬುಮ್ರಾ ಎಂದು ಉತ್ತರಿಸಿದರು. ಮೂರು, 10, 18 ಹಾಗೂ 20ನೇ ಓವರ್ಗಳಲ್ಲಿ ದಾಳಿ ಮಾಡಿರುವ ಬುಮ್ರಾ ಅತ್ಯಂತ ಕರಾರುವಾಕ್ ದಾಳಿ ಸಂಘಟಿಸಿದರು ಎಂದು ಮಂಜ್ರೇಕರ್ ಉಲ್ಲೇಖ ಮಾಡಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಐದು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಕಿವೀಸ್ ದಾಂಡಿಗರನ್ನು ಮಾರಕವಾಗಿ ಕಾಡಿದ ಜಡೇಜಾ ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಕೇವಲ 18 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಅಲ್ಲದೆ ಎರಡು ವಿಕೆಟುಗಳನ್ನು ಕಬಳಿಸಿದ್ದರು. ಅತ್ತ ಜಸ್ಪ್ರೀತ್ ಬುಮ್ರಾ 21 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಕಬಳಿಸಿದ್ದರು. ಆದರೂ ಇಲ್ಲಿ ರವೀಂದ್ರ ಜಡೇಜಾ ಹೆಸರು ಉಲ್ಲೇಖ ಮಾಡದಿರುವುದು ವಿಪರ್ಯಾಸವೆನಿಸಿದೆ. ಈ ಹಿಂದೆ 2019 ಏಕದಿನ ವಿಶ್ವಕಪ್ ವೇಳೆಯಲ್ಲಿ ರವೀಂದ್ರ ಜಡೇಜಾ ವಿರುದ್ಧ ಸಂಜಯ್ ಮಂಜ್ರೇಕರ್ ಟೀಕಾ ಪ್ರಹಾರಗೈದಿದ್ದರು. ಬಳಿಕ ತಮ್ಮ ಹೇಳಿಕೆಗಾಗಿ ಖೇದ ವ್ಯಕ್ತಪಡಿಸಿದ್ದರು. ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ರವೀಂದ್ರ ಜಡೇಜಾ ದಿಟ್ಟ ಹೋರಾಟ ನೀಡಿದ್ದರು. ಮಂಜ್ರೇಕರ್ ಹೇಳಿಕೆಗೆ ತಿರುಗೇಟು ನೀಡಿದ ರವೀಂದ್ರ ಜಡೇಜಾ, ನಿಮಗಿಂತಲೂ ಹೆಚ್ಚು ಪಂದ್ಯಗಳನ್ನು ನಾನು ಆಡಿದ್ದು, ಮೊದಲು ಆಟಗಾರರಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಪಾಠ ಹೇಳಿಕೊಟ್ಟಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38EerSb