ಹೊಸದಿಲ್ಲಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರ್ಜರಿ ಬೌಲಿಂಗ್ ಪ್ರದರ್ಶನ ಕಂಡು ನಿಬ್ಬೆರಗಾಗಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ , ಭಾರತೀಯ ವೇಗಿಗಳನ್ನು ಗುಣಗಾನ ಮಾಡಿದ್ದಾರೆ. ಭಾರತ ತಂಡದ ಕರಾರುವಾಕ್ ಬೌಲಿಂಗ್ ದಾಳಿ ಎದುರು ನಿರುತ್ತರವಾದ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲೆಂಡ್ ತಂಡ ಪ್ರತಿ ಹೋರಾಟ ನೀಡುವ ಪ್ರಯತ್ನವನ್ನೂ ನಡೆಸದೆ ಸಂಪೂರ್ಣವಾಗಿ ಶರಣಾಗಿದ್ದೇಕೆ ಎಂಬುದನ್ನೂ ಅಖ್ತರ್ ಪ್ರಶ್ನಿಸಿದ್ದಾರೆ. "ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ಭಾರತ ತಂಡ ಅಧಿಕಾರಯುತ ಆಟವಾಡಿತು. ನಿಮ್ಮದೇ ಅಂಗಣದಲ್ಲಿ ನೀವು ಅಷ್ಟು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲ್ಪಟ್ಟರೆ. ಬಲಿಷ್ಠ ಬ್ಯಾಟಿಂಗ್ ವಿಭಾಗ ಹೊಂದಿರುವ ಟೀಮ್ ಇಂಡಿಯಾ ಎದುರು ಸ್ಪರ್ಧಿಸಲು ಹೇಗೆ ಸಾಧ್ಯ?," ನ್ಯೂಜಿಲೆಂಡ್ ತಂಡವನ್ನು ತಮ್ಮ ಯೂಟ್ಯೂಬ್ ಚಾನಲ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಭಾರತ ತಂಡದ ವೇಗಿಗಳಾದ ಮತ್ತು ಅವರನ್ನು ಗುಣಗಾನ ಮಾಡಿರುವ ಅಖ್ತರ್, ವಿಕೆಟ್ ಪಡೆಯುವುದರ ಜೊತೆಗೆ ಬೌನ್ಸರ್ಗಳನ್ನು ಎಸೆಯುವುದರಲ್ಲಿಇವರು ಹಿಂಜರಿಯುವುದಿಲ್ಲ ಎಂದಿದ್ದಾರೆ. "ಭಾರತ ತಂಡದ ವೇಗಿಗಳು ಶಾರ್ಟ್ ಪಿಚ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಬೆಚ್ಚುವಂತೆ ಮಾಡಿದರು. ಅದರಲ್ಲೂ ತಲೆಗೆ ಗುರಿಯಿಟ್ಟು ಬೌನ್ಸರ್ಗಳನ್ನು ಎಸೆಯುತ್ತಿದ್ದರು. ಶಮಿ ಮತ್ತು ಬುಮ್ರಾ ಅವರಲ್ಲಿ ಇಂಥದ್ದೊಂದು ಆತ್ಮವಿಶ್ವಾಸ ಈ ಹಿಂದೆ ಕಂಡಿರಲಿಲ್ಲ. ಅವರ ಮನಸ್ಥಿತಿ ಹೇಗಿದೆ ಎಂದರೆ ಔಟ್ ಮಾಡುವುದು ಇದ್ದೇ ಇದೆ. ಇವರಿಗೆ ಬೌನ್ಸರ್ಗಳ ಪೆಟ್ಟು ನೀಡೋಣ ಎಂಬಂತಿದೆ. ಭಾರತೀಯ ವೇಗಿಗಳನ್ನು ಕಡೆಗಣಿಸಿರುವ ಕಿವೀಸ್ ಬ್ಯಾಟ್ಸ್ಮನ್ಗಳು ಹೆಚ್ಚು ತಪ್ಪುಗಳನ್ನು ಮಾಡಿದರು. ಇದರಿಂದ ಎಡ್ಜ್ಗಳು ಮೂಡಿಬಂದವಲ್ಲದೆ, ಹೆಲ್ಮೆಟ್ಗೂ ಹಲವು ಬಾರಿ ಚೆಂಡು ಬಡಿಯಿತು," ಎಂದು ಅಖ್ತರ್ ವಿವರಿಸಿದ್ದಾರೆ. "ಒಂದು ಕಾಲದಲ್ಲಿ ಆಸ್ಟ್ರೇಲಿಯಾ ತಂಡ ಜಾಗತಿಕ ಕ್ರಿಕೆಟ್ನಲ್ಲಿ ರಾಜ್ಯಭಾರ ಮಾಡುತ್ತಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಠಿಣ ಪೈಪೋಟಿ ನೀಡುತ್ತಿದ್ದವು. ಆದರೀಗ ನ್ಯೂಜಿಲೆಂಡ್ ತಂಡ ತನ್ನದೇ ಅಂಗಣದಲ್ಲಿ ಟೀಮ್ ಇಂಡಿಯಾ ಎದುರು ಸಂಪೂರ್ಣ ಶರಣಾಗುತ್ತಿದೆ," ಎಂದು ಭಾರತ ತಂಡದ ಅಧಿಕಾರಯುತ ಪ್ರದರ್ಶನವನ್ನು ಅಖ್ತರ್ ಹೊಗಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮಾವಿ 6 ಮತ್ತು 7 ವಿಕೆಟ್ಗಳ ಜಯ ದಾಖಲಿಸಿರುವ ಭಾರತ ತಂಡ 2-0 ಅಂತರ ಮುನ್ನಡೆ ಪಡೆದುಕೊಂಡಿದೆ. 3ನೇ ಪಂದ್ಯ ಬುಧವಾರ (ಜ.29ರಂದು) ಹ್ಯಾಮಿಲ್ಟನ್ನ ಸೆಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾ ಇಲ್ಲೂ ಗೆದ್ದರೆ ಕಿವೀಸ್ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಇತಿಹಾಸ ಬರೆಯಲಿದೆ. ಶೊಯೇಬ್ ಅಖ್ತರ್ ಅವರ ಹೇಳಿಕೆಯ ಸಂಪೂರ್ಣ ವಿಡಿಯೋ ಇಲ್ಲಿದೆ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Gte1lo