ಬೆಂಗಳೂರು: ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ಪರಿವರ್ತಿಸುವ ಉದ್ದೇಶದಿಂದ '' ಎಂಬ ಹೊಸ ಕಾರ್ಯಕ್ರಮವನ್ನು ರಾಜ್ಯ ಸರಕಾರ ರೂಪಿಸುತ್ತಿದೆ. ಪ್ರತಿ ತಿಂಗಳ 3ನೇ ಶನಿವಾರ ಜಿಲ್ಲಾಧಿಕಾರಿಗಳಿಗೆ ಹಳ್ಳಿ ವಾಸ್ತವ್ಯ ಹೂಡಿ, ಅಲ್ಲಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ, ಗ್ರಾಮಸ್ಥರ ಸಂಕಷ್ಟಗಳನ್ನು ನೇರವಾಗಿ ಕೇಳಿ ಪರಿಹಾರ ನೀಡುವ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ. ಡಿಸಿಗಳ ಜೊತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಹಳ್ಳಿಗಳಿಗೆ ತೆರಳಲಿದ್ದಾರೆ. ಈ ಕಾರ್ಯಕ್ರಮದಡಿ ತಹಸೀಲ್ದಾರ್ ತಿಂಗಳಲ್ಲಿ 4 ದಿನ ಹಳ್ಳಿಗಳಿಗೆ ಭೇಟಿ ನೀಡುವ ವ್ಯವಸ್ಥೆ ಸೃಷ್ಟಿಸಬೇಕು ಎಂಬ ಉದ್ದೇಶವೂ ಇದೆ. 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಕಾರ್ಯಕ್ರಮದ ಕಾರ್ಯಗಳ ಪಟ್ಟಿ
- ಸರಕಾರಿ ಜಮೀನು ಒತ್ತುವರಿ ದೂರಿಗೆ ತಕ್ಷಣ ಕ್ರಮ.
- ಸಾರ್ವಜನಿಕ ಸ್ಮಶಾನಕ್ಕೆ ಸರಕಾರಿ ಜಮೀನು ಒದಗಿಸುವುದು.
- ಕುಡಿಯುವ ನೀರಿನ ಸಮಸ್ಯೆ ಪರಿಹಾರ.
- ಗ್ರಾಮದ ಶಾಲೆ, ಪಂಚಾಯಿತಿ, ಕಾಲೇಜು, ಅಂಗನವಾಡಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಭೇಟಿ ನೀಡಿ ಮೂಲ ಸೌಕರ್ಯ ಸಮಸ್ಯೆ ಬಗೆಹರಿಸುವುದು.
- ಪಹಣಿ ಕಾಲಂ 3 ಮತ್ತು 9ರ ವ್ಯತ್ಯಾಸ ಪರಿಹರಿಸುವುದು. ಬಾಕಿ ಇರುವ 1,59,402 ಪಹಣಿ ತಿದ್ದುಪಡಿ ಪೂರ್ಣಗೊಳಿಸುವುದು.
- ಪೌತಿ ಖಾತೆ (ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ್ದು) ಬದಲಾವಣೆ
- ಸಾಮಾಜಿಕ ಭದ್ರತಾ ಯೋಜನೆಯಿಂದ ವಂಚಿತರಾದವರನ್ನು ಗುರುತಿಸುವುದು.
- ಪಡಿತರ ವ್ಯವಸ್ಥೆ ಪರಿಶೀಲನೆ.
- ಮತದಾರರ ಪಟ್ಟಿ ಪರಿಷ್ಕರಣೆ
- ಗುಡಿಸಲು ಮತ್ತೆ ಹಚ್ಚಿ ಪಕ್ಕಾ ಮನೆ ನಿರ್ಮಿಸುವುದು.
- ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸುವುದು.
- ಸರಕಾರಿ ಜಾಗದಲ್ಲಿ ಸಸಿ ನೆಡುವುದು.
- ಬಾಲ್ಯ ವಿವಾಹ ನಿಷೇಧಕ್ಕೆ ಕ್ರಮ.
- ಆಧಾರ್ ಕಾರ್ಡ್ ಬಗ್ಗೆ ಅರಿವು ಮೂಡಿಸುವುದು.
- ರೈತರಿಗೆ ಬೆಳೆ ದರ್ಶಕದ ಬಗ್ಗೆ ಅರಿವು ಮೂಡಿಸುವುದು.
- ಆರೋಗ್ಯ ಜಾಗೃತಿ.
- ನವಜಾತ ಶಿಶು - ಬಾಣಂತಿ ಪೋಷಣೆಗೆ ಕ್ರಮ.
- ಕೇಂದ್ರ ಹಾಗೂ ರಾಜ್ಯ ಸರಕಾರಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವುದು.
- ಕಂದಾಯ ಇಲಾಖೆಹೆ ಸಂಬಂಧಪಟ್ಟ 90% ಕಾರ್ಯ ಈ ಸಂದರ್ಭದಲ್ಲಿ ನಡೆಯಬೇಕು.
- ಬೇರೆ ಇಲಾಖೆಗೆ ಸಂಬಂಧಿಸಿದ ಅರ್ಜಿಯನ್ನು ಆಯಾ ಇಲಾಖೆಗೆ ಕಳುಹಿಸಬೇಕು.
from India & World News in Kannada | VK Polls https://ift.tt/38OaFpb