ಸೋಮಶೇಖರ್‌ ರೆಡ್ಡಿ ಬಂಧನವಾಗುತ್ತೆ ಎಂಬ ನಂಬಿಕೆಯಿದೆ: ಬಿ. ನಾಗೇಂದ್ರ

ಬಳ್ಳಾರಿ: ಶಾಸಕ ಅವರು ಒಂದು ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಬಹಿಂರಂಗ ಕ್ಷಮೆ ಕೇಳಬೇಕು. ಆ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಒತ್ತಾಯಿಸಿದ್ದಾರೆ. ಬಳ್ಳಾರಿಯನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ‌.ನಾಗೇಂದ್ರ, "ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದೆ. ಹಾಗಾಗಿ ನಾನು ಕ್ಷೇತ್ರಕ್ಕೆ ಬಂದಿಲ್ಲ. ಬಳ್ಳಾರಿ ಹೆಸರು ದೇಶವ್ಯಾಪಿ ಇದೆ. ಸರ್ವಧರ್ಮಿಯರ ಶಾಂತಿಯ ತೋಟ ಇದು. ಸೋಮಶೇಖರ್ ರೆಡ್ಡಿ ನನಗೆ ಉತ್ತಮ ಸ್ನೇಹಿತರು, ವಿದ್ಯಾವಂತರು, ಕೆಲಸಗಾರರು. ಆದರೆ ಮಾತನಾಡೋ ಭರಾಟೆಯಲ್ಲಿ ಒಂದು ಧರ್ಮದ ವಿರುದ್ಧ ಮಾತನಾಡಿದ್ದಾರೆ. ಬಳ್ಳಾರಿಯಲ್ಲಿ ಎಲ್ಲಾ ಧರ್ಮಿಯರು ಹೊಂದಾಣಿಕೆಯಿಂದ ಇದ್ದೆವೆ. ಆದರೆ ಸೋಮಶೇಖರ್ ರೆಡ್ಡಿ ಒಂದು ಧರ್ಮದ ವಿರುದ್ಧ ಮಾತನಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು. ಆ ಹೇಳಿಕೆ ಹಿಂಪಡೆಯಬೇಕು" ಎಂದು ಎಂದರು. "ಕಾಂಗ್ರೆಸ್ ಅಲ್ಲದೇ, ಬಿಜೆಪಿಯ ನಾಯಕರು ಕೂಡ ಸೋಮಶೇಖರ್ ರೆಡ್ಡಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಬಂಧಿಸಬೇಕು ಅಂತ ಹೇಳಿದ್ದಾರೆ. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಕಾನೂನು ಎಲ್ಲರಿಗೂ ಒಂದೇ. ಬಂಧಿಸುತ್ತಾರೆ ಎನ್ನುವ ನಂಬಿಕೆ ಇದೆ. ಬಳ್ಳಾರಿಯಲ್ಲಿ ಅಶಾಂತಿ ಕದಡೋರ ವಿರುದ್ಧ ನಾವಿರುತ್ತೇವೆ. ಮುಸ್ಲಿಂ ಸಮುದಾಯದ ಜತೆ ನಾವಿದ್ದೇವೆ'' ಎಂದು ನಾಗೇಂದ್ರ ಅವರು ವಿಶ್ವಾಸದ ಮಾತುಗಳನ್ನಾಡಿದರು. "ಕಾಂಗ್ರೆಸ್ ಬೇಕೋಫ್ ಗಳು ಅಂತ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನವರ ಪಾತ್ರ ಹೆಚ್ಚಿದೆ. ಅವರೆಲ್ಲಾ ಬೇಕೂಫ್ಗಳಾ? ಇದನ್ನು ಖಂಡಿಸುತ್ತೇವೆ. ಶಾಸಕರಾಗಿ ಪ್ರಮಾಣ ವಚನ ಸಮಯದಲ್ಲಿ ಕೊಟ್ಟ ಮಾತು ಮರೆತಿದ್ದಾರೆ. ಹಿಂದೂ ಮುಸ್ಲಿಂ ಎಂದೆಂದಿಗೂ ಒಂದೇ. ನಮ್ಮ ಪ್ರಾಣ ಒತ್ತೆ ಇಟ್ಟಾದ್ರೂ, ನಾವು ಅದನ್ನು ಉಳಿಸಿಕೊಳ್ತಿವಿ" ಎಂದು ನಾಗೇಂದ್ರ ತಿಳಿಸಿದರು. ಬಳ್ಳಾರಿಗೆ ಜಮೀರ್ ಅಹಮದ್ ಬರೋ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕರು "ಬಳ್ಳಾರಿಯಲ್ಲಿ ದೊಡ್ಡ ನಾಯಕರಿದ್ದಾರೆ. ನಾವೇ ಬಗೆಹರಿಸಿಕೊಳ್ಳುತ್ತೇವೆ. ನಾವು ಸಮರ್ಥರಿದ್ದೇವೆ. ಎಲ್ಲಾ ಧರ್ಮಿಯರು ಒಟ್ಟಾಗಿದ್ದೇವೆ" ಎಂದರು.


from India & World News in Kannada | VK Polls https://ift.tt/2N35Bov

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...