ಬೆಂಗಳೂರು: 25ಸಾವಿರ ಕೋಟಿಗೂ ಹೆಚ್ಚು ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಲ್ಲದೆ, ಸುಳ್ಳುಗಳ ಸರದಾರರಾಗಿರುವ ಮೋದಿಯೋ ಅಥವಾ ಆಪರೇಷನ್ ಪರಿಣಿತ ಯಡಿಯೂರಪ್ಪನವರೋ? ಎಂದು ಜಾತ್ಯತೀತ ಜನತಾದಳ () ಮಂಗಳವಾರ ಟ್ವೀಟ್ ಮಾಡಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಅಧಿಕಾರದ ಅಮಲಿನಲ್ಲಿ ಮುಖ್ಯಮಂತ್ರಿ ಕುರ್ಚಿಯಿಂದ ನೇರವಾಗಿ ಖೈದಿ ನಂ: 10462 ಆಗಿದ್ದು ನೆನಪಿರಲಿ. ಎಂದು ಸಿಎಂ ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ತಿವಿಯಲಾಗಿದೆ. ಜೆಡಿಎಸ್ ಮಾಡಿರುವ ಈ ಟ್ವೀಟ್ಗೆ ರಾಜ್ಯ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸಾಲ ಮನ್ನಾ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ "ಸಾಂದರ್ಭಿಕ ಶಿಶು" ಹಿಂಬಾಗಿಲಿನಿಂದ ಮುಖ್ಯಮಂತ್ರಿ ಆದರೂ ರೈತರ ಕೈ ಹಿಡಿಯಲಿಲ್ಲ. ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರೂ ಸಹ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂಬ ಜ್ಞಾನೋದಯವಾಗಲಿಲ್ಲ. ಅಧಿಕಾರ ಕಳೆದುಕೊಂಡರೂ ಒಣ ದೌಲತ್ತು, ವ್ಯಂಗ್ಯಕ್ಕೆ ಏನೂ ಕಡಿಮೆ ಇಲ್ಲ ಎಂದು ಜೆಡಿಎಸ್ಗೆ ತಕ್ಕ ಉತ್ತರ ನೀಡಿದೆ. ಈ ಮೊದಲು 'ಜೈಲುಹಕ್ಕಿ' ಎಂದಿದ್ದ ಕಾಂಗ್ರೆಸ್- ಜೆಡಿಎಸ್ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಹಿಂದೆ ಸಮ್ಮಿಶ್ರ ಸರಕಾರ ರಚಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರನ್ನು 'ಜೈಲಿಗೆ ಹೋಗಿ ಬಂದವರು' 'ಜೈಲು ಹಕ್ಕಿ' ಎಂದು ಗೇಲಿ ಮಾಡಿದ್ದರು. ಇದರ ವಿರುದ್ಧ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು. ಹಲವು ಪ್ರಕರಣಗಳಲ್ಲಿ ತಮಗೆ ಖುಲಾಸೆಯಾಗಿದೆ. ಹೀಗಿದ್ದರೂ ನ್ಯಾಯಾಂಗ ಬಂಧನವನ್ನು ಜೈಲು ಶಿಕ್ಷೆ ಎಂದು ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಈ ಮೂಲಕ ನ್ಯಾಯಾಂಗದ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದೀಗ ಜೆಡಿಎಸ್ ಮತ್ತೆ ಯಡಿಯೂರಪ್ಪ ಅವರ ಕಾಲೆಳೆದಿದೆ.
from India & World News in Kannada | VK Polls https://ift.tt/36xoNCu