ಇಂದೋರ್: ವಿರುದ್ಧ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟಿ20 ಪಂದ್ಯದಲ್ಲಿ ತಂಡದ ಹೀನಾಯ ಸೋಲಿಗೆ ಮುಖ್ಯ ಕಾರಣ ಏನೆಂಬುದನ್ನು ಲಂಕಾ ಪಡೆಯ ನಾಯಕ ವಿವರಿಸಿದ್ದಾರೆ. ಪಂದ್ಯದಲ್ಲಿ ಆತಿಥೇಯ ಭಾರತಕ್ಕೆ 143 ರನ್ಗಳ ಗುರಿ ನೀಡಲಷ್ಟೇ ಶಕ್ತವಾದ ಶ್ರೀಲಂಕಾ ತಂಡ, ಬೌಲಿಂಗ್ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಪರಿಣಾಮ ಭಾರತ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಕೇವಲ 3 ವಿಕೆಟ್ ನಷ್ಟದಲ್ಲಿ ಗೆಲುವಿನ ನಗೆ ಬೀರಿತು. ಇಂದೋರ್ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ತಂಡದ ಪ್ರಮುಖ ಬೌಲರ್ ಗಾಯಗೊಂಡು ಆಟಕ್ಕೆ ಅಲಭ್ಯರಾಗಿದ್ದೇ ಸೋಲಿಗೆ ಮುಖ್ಯ ಕಾರಣ ಎಂದು ಕ್ಯಾಪ್ಟನ್ ಮಾಲಿಂಗ ವಿವರಿಸಿದ್ದಾರೆ. ಕಳೆದ ತಿಂಗಳು ಐಪಿಎಲ್ ಆಟಗಾರರ ಹರಾಜಿನಲ್ಲಿ ಇದೇ ಇಸುರು ಉದನ ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಕೋಟಿ ರೂ. ಖರ್ಚು ಮಾಡಲು ಮುಂದಾಗಿತ್ತು. ಅದೃಷ್ಟವಶಾತ್ 50 ಲಕ್ಷ ರೂ.ಗಳ ಮೂಲ ಬೆಲೆಗೆ ಉದನಾ ಆರ್ಸಿಬಿ ಸೇರಿದ್ದಾರೆ. ಇದೀಗ ಭಾರತ ವಿರುದ್ಧದ 3 ಪಂದ್ಯಗಳ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗಾಯಾಳು ಉದನ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಸರಣಿಯ ಮೊದಲ ಪಂದ್ಯ ಗುವಾಹಟಿಯಲ್ಲಿ ನಡೆಯ ಬೇಕಿತ್ತು ಆದರೆ ಮಳೆ ಮತ್ತು ಒದ್ದೆಯಾದ ಪಿಚ್ ಕಾರಣ ರದ್ದಾಗಿತ್ತು. "ಉದನ ನಮ್ಮ ಪ್ರಮುಖ ಬೌಲರ್. ಈ ಮಾದರಿಯ ಕ್ರಿಕೆಟ್ನಲ್ಲಿ ಅವರು ಬಹಳ ಅನುಭವ ಹೊಂದಿದ್ದಾರೆ. ನಾವು ಬೌಲಿಂಗ್ ಆರಂಭಿಸುವುದಕ್ಕೂ ಮುನ್ನ ಅವರು ಗಾಯದ ಸಮಸ್ಯೆಗೆ ತುತ್ತಾದರು. ಇದೀಗ ಚೇತರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಿದ್ದೇವೆ," ಎಂದು ಪಂದ್ಯದ ಬಳಿಕ ಮಾತನಾಡಿದ ಮಾಲಿಂಗ ಹೇಳಿದ್ದಾರೆ. "ಪಂದ್ಯದಲ್ಲಿ ನಮ್ಮ ತಂಡ ಇನ್ನೂ 25-30ರನ್ಗಳನ್ನು ಗಳಿಸಬೇಕಿತ್ತು. ಆದರೂ ಹೆಚ್ಚು ನಿಖರವಾಗಿ ಬೌಲಿಂಗ್ ದಾಳಿ ನಡೆಸುವ ಪ್ರಯತ್ನ ನಡೆಸಿದೆವು. 18ನೇ ಓವರ್ ವರೆಗೂ ಪಂದ್ಯವನ್ನು ಕೊಂಡೊಯ್ಯವಲ್ಲಿ ಬೌಲರ್ಗಳ ಕಠಿಣ ಶ್ರಮವಿದೆ," ಎಂದು ಮಾಲಿಂಗ ಅಭಿಪ್ರಾಯ ಪಟ್ಟಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37PtiJc