ಹೊಸದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಫಿಕ್ಸಾಗಿದೆ. ಜನವರಿ 22 ರಂದು ಮುಂಜಾನೆ 7 ಗಂಟೆಗೆ ನಾಲ್ವರು ಅಪರಾಧಿಗಳು ನೇಣಿಗೆ ಏರಲಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ನೀಡಿದ ಈ ಮಹತ್ವದ ತೀರ್ಪಿಗೆ ಇಡೀ ದೇಶವೇ ಸಂಭ್ರಮಿಸುತ್ತಿದೆ. ಈ ನಡುವೆ ಈ ಕೊಲೆಗಟುಕರಿಂದ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ನಿರ್ಭಯಾಳ ತಂದೆ ನೀಡಿರುವ ಭಾವುಕ ಹೇಳಿಕೆ ಬೆಚ್ಚಿಬೀಳಿಸುವಂತಿದೆ. ಹೌದು, 2012 ರಂದು ದೆಹಲಿಯ ಯುವತಿ ನಿರ್ಭಯಾಳ ಮೇಲೆ ಪಾಪಿಗಳು ಕ್ರೂರವಾಗಿ ಅತ್ಯಾಚಾರ ಎಸಗಿದ್ದರು. ಬಳಿಕ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿರ್ಭಯಾ ಮೃತಪಟ್ಟಿದ್ದರು. ಈ ಘಟನೆಯಿಂದ ಮಗಳನ್ನು ಕಳೆದುಕೊಂಡ ಕುಟುಂಬ ನೋವಿನಿಂದ ನಿತ್ಯ ನರಳುತ್ತಿತ್ತು. ಆದರೆ ಆ ನೋವಿನಲ್ಲೂ ಅವರು ಒಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದರು. ಹೌದು, ನಿರ್ಭಯಾಳ ತಂದೆ ಭದ್ರೀನಾಥ್ ಸಿಂಗ್ ಹಾಗೂ ತಾಯಿ ಆಶಾ ದೇವಿ ಮಾಡಿದ ಶಪಥವೇನೆಂದರೆ ತಮ್ಮ ಮಗಳನ್ನು ಭೀಕರವಾಗಿ ಅತ್ಯಾಚಾರ ಎಸಗಿ ಕೊಂದ ಪಾಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಅಲ್ಲಿಯವರೆಗೂ ಪ್ರಾಣತೆತ್ತ ಮಗಳ ಫೋಟೋಗೆ ಹಾರ ಹಾಕುವುದಿಲ್ಲ ಎಂಬುವುದಾಗಿತ್ತು. ಇಂದಿಗೆ ಘಟನೆ ನಡೆದು ಬರೋಬ್ಬರಿ ಏಳು ವರ್ಷವಾಯಿತು. ಇದುವರೆಗೂ ನಿರ್ಭಯಾಳ ಪೋಟೋಗೆ ಹಾರವನ್ನು ಹಾಕಲಿಲ್ಲ. ಯಾವ ದಿನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುತ್ತೋ ಅದೇ ದಿನ ಮಗಳ ಫೋಟೋಗೆ ಹಾರ ಹಾಕಿ ಶೃದ್ಧಾಂಜಲಿ ಅರ್ಪಿಸಲು ನಿರ್ಧಾರ ಮಾಡಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳ ಮುಂದೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾದ ಸುದ್ದಿ ತಿಳಿದು ಭಾವುಕರಾದ ನಿರ್ಭಯಾಳ ತಂದೆ ಭದ್ರಿನಾಥ್ ಸಿಂಗ್ ಹಂಚಿಕೊಂಡರು. ನಿರ್ಭಯಾಳ ಅತ್ಯಾಚಾರ ಹಾಗೂ ಕೊಲೆಮಾಡಿದ ಕಿರಾತಕರಾದ ನಾಲ್ವರು ಆರೋಪಿಗಳನ್ನು ಗಲ್ಲುಗೇರಿಸುವ ಮಹತ್ವದ ತೀರ್ಪನ್ನು ನ್ಯಾ. ಸತೀಶ್ ಕುಮಾರ್ ಅರೋರಾ ನೀಡಿದ್ದಾರೆ. ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆಯಾಗಲಿದೆ.
from India & World News in Kannada | VK Polls https://ift.tt/2ZYSSIJ